ದುರಂತ; ಮಂಗಳೂರಿನ ಗೋರಿಗುಡ್ಡೆಯಲ್ಲಿ ಕರೆಂಟ್ ಶಾಕ್ ಗೆ ಮೂವರು ಬಲಿ
Team Udayavani, Jan 29, 2017, 4:22 PM IST
ಮಂಗಳೂರು: ಕಾಳು ಮೆಣಸು ಕೊಯ್ಯುತ್ತಿದ್ದ ವೇಳೆ ಕಬ್ಬಿಣದ ಏಣಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ದಂಪತಿ ಸೇರಿದಂತೆ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೋರಿಗುಡ್ಡೆಯ ಉಜ್ಜೋಡಿಯಲ್ಲಿ ತೆಂಗಿನಮರದ ಬುಡದಲ್ಲಿ ಕಾಳುಮೆಣಸಿನ ಗಿಡ ನೆಟ್ಟಿದ್ದರು. ಕಾಳು ಮೆಣಸು ಕೊಯ್ಯಲು ಕಬ್ಬಿಣದ ಏಣಿಯನ್ನು ಕೂಲಿ ಕಾರ್ಮಿಕ ಸಂದೀಪ್ ಏರಿದ್ದರು. ಈ ಸಂದರ್ಭದಲ್ಲಿ ಏಣಿಯ ಬುಡವನ್ನು ವಲೇರಿಯನ್ ಮತ್ತು ಪತ್ನಿ ಎಸ್ಮಿ ಹಿಡಿದಿದ್ದರು.
ಈ ವೇಳೆ ಕಬ್ಬಿಣದ ವೇಳೆ ಆಕಸ್ಮಿಕವಾಗಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಬಿದ್ದಾಗ ಕಾರ್ಮಿಕ ಸಂದೀಪ್ (28) ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದ, ಏಣಿ ಬುಡ ಹಿಡಿದಿದ್ದ ವಲೇರಿಯನ್ ಲೋಬೋ(55ವರ್ಷ) ಅವರ ದೇಹದಲ್ಲಿ ವಿದ್ಯುತ್ ಪ್ರವಹಿಸಿದ್ದಾಗಲೇ ಪತ್ನಿ ಎಸ್ಮಿ(51ವರ್ಷ) ಅವರ ರಕ್ಷಣೆಗೆ ಧಾವಿಸಿದ್ದರು. ಆದರೆ ಹೈಟೆನ್ಶನ್ ವಿದ್ಯುತ್ ನಿಂದಾಗಿ ದಂಪತಿಯೂ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್