ಮುಂಗಾರು ಮುನಿಸು: ತರಕಾರಿ ಗ್ರಾಮ ಚಾರ್ವಾಕದಲ್ಲಿ ಕೃಷಿಗೆ ಬರ
Team Udayavani, Jul 21, 2019, 5:24 AM IST
ಕಾಣಿಯೂರು: ಚಾರ್ವಾಕ ಗ್ರಾಮ ಪರಿಚಯವಾಗುವುದು ತರಕಾರಿ ಕೃಷಿಯಿಂದ. ಜಿಲ್ಲೆಗೆ ಅತೀ ಹೆಚ್ಚು ತರಕಾರಿ ಪೂರೈಕೆಯಾಗುವುದು ಈ ಗ್ರಾಮದಿಂದಲೇ. ಇಲ್ಲಿನ ಹೆಚ್ಚಿನ ಕುಟುಂಬಗಳು ತರಕಾರಿ ಬೆಳೆಯನ್ನೇ ನೆಚ್ಚಿಕೊಂಡೇ ಜೀವನ ಸಾಗಿಸುತ್ತಿವೆ. ಆದರೆ ಈ ಬಾರಿ ಮುಂಗಾರು ಮಳೆ ಕ್ಷೀಣಿಸಿದ್ದರಿಂದ ತರಕಾರಿ ಬೆಳೆಗೆ ಹಿನ್ನಡೆಯಾಗಿದೆ.
ಮುಂಗಾರು ಮಳೆಯ ಅಬ್ಬರವಿಲ್ಲದೆ ತರಕಾರಿ ಕೃಷಿ ಮಾಡುವ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆ ನೀರನ್ನು ಆಶ್ರಯಿಸಿ ಬೆಳೆಯುವ ತರಕಾರಿ ಗಿಡಗಳಿಗೆ ಇತ್ತೀಚೆಗೆ ಸುರಿಯುವ ಅಲ್ಪ ಪ್ರಮಾಣದ ಮಳೆ ಸಾಕಾಗುತ್ತಿಲ್ಲ. ಹಾಗಾಗಿ ತರಕಾರಿ ಕೃಷಿಯನ್ನು ಜೀವನಾಧರವಾಗಿಸಿಕೊಂಡ ಈ ಭಾಗದ ಬಹಳಷ್ಟು ರೈತರಿಗೆ ತೊಂದರೆಯಾಗಿದೆ. ಇದು ರೈತನ ಆತ್ಮಬಲವನ್ನು ಕುಗ್ಗಿಸಿದೆ.
ಚಪ್ಪರವೇರುವ ಹಂತಕ್ಕೇ ಬಂದಿಲ್ಲ
ಮಳೆಗಾಲದಲ್ಲಿ ಮುಳ್ಳು ಸೌತೆ, ಹೀರೆಕಾಯಿ ಹೆಚ್ಚಾಗಿ ಬೆಳೆಯುತ್ತಾರೆ. ಮೇ ತಿಂಗಳ ಅಂತ್ಯಕ್ಕೆ ತರಕಾರಿ ಬೀಜ ಹಾಕಿದರೆ ಜೂನ್ ತಿಂಗಳ ಮಧ್ಯದಲ್ಲಿ ಬಳ್ಳಿಗಳು ಚಪ್ಪರ ತುಂಬಿಕೊಳ್ಳುತ್ತವೆ. ಆಗಸ್ಟ್ ತಿಂಗಳ ಆರಂಭದಲ್ಲಿ ತರಕಾರಿ ಕೊಯ್ಯುವ ಹಂತಕ್ಕೆ ತಲುಪುತ್ತದೆ. ಆದರೆ ಈ ಬಾರಿ ಇನ್ನೂ ತರಕಾರಿ ಬಳ್ಳಿಗಳು ಚಪ್ಪವೇರುವ ಹಂತಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಮಳೆಯ ಅಬ್ಬರ ಕಡಿಮೆಯಾದಲ್ಲಿ ಮತ್ತೆ ತರಕಾರಿ ಬೆಳೆಗೆ ಕುತ್ತುಬರಲಿದೆ. ಕಳೆದ ವರ್ಷದ ಕೃಷಿಗೆ ಹೋಲಿಕೆ ಮಾಡಿದರೆ ಈ ವರ್ಷ ಮಳೆ ಅಭಾವದಿಂದ ಬೆಳೆ ಉತ್ಪನ್ನ ಕುಂಠಿತವಾಗಲಿದೆ ಎನ್ನುತ್ತಾರೆ ರೈತರು.
ಚಾರ್ವಾಕದವರು ನೆರೆಯ ಗ್ರಾಮ ದಲ್ಲೂ ತರಕಾರಿ ಕೃಷಿ ಮಾಡುತ್ತಾರೆ. ಚಾರ್ವಾಕದ ಯುವಕರು ನೆರೆಯ ಕಾಣಿಯೂರು, ಬೆಳಂದೂರು, ಸವಣೂರು, ಪಾಲ್ತಾಡಿ ಗ್ರಾಮಗಳಲ್ಲಿ ಜಾಗವನ್ನು ಲೀಸ್ಗೆ ಪಡೆದು ತರಕಾರಿ ಕೃಷಿ ಮಾಡುತ್ತಾರೆ. ಜಿಲ್ಲೆಯ ಇನ್ನಿತರ ಕಡೆಯಲ್ಲೂ ತರಕಾರಿ ಕೃಷಿ ಮಾಡುವ ಮಂದಿಗೆ ಮಳೆ ಅಭಾವ ತೊಂದರೆ ನೀಡಿದೆ. ಕೆಲವೆಡೆ ಈಗಷ್ಟೆ ಬೀಜ ಬಿತ್ತನೆಗೆ ಆರಂಭಿಸಿದರೆ ಇನ್ನುಳಿದಂತೆ ಇನ್ನೂ ಕೃಷಿ ಕಾಯಕ ಆರಂಭವಾಗಿಲ್ಲ.
ಗ್ರಾಮದಲ್ಲಿ ತರಕಾರಿ ಬೆಳೆಯುವುದರಲ್ಲಿ ವಿದ್ಯಾವಂತ ಯುುವಸಮುದಾಯದ ಪಾಲು ಹೆಚ್ಚಾಗಿದೆ. ವೈಟ್ ಕಾಲರ್ ಜಾಬ್ಗ ಮಾರು ಹೋಗದೆ ತಮ್ಮದೆ ನೆಲದಲ್ಲಿ ಸಾಂಪ್ರದಾಯಿಕ ಕೃಷಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಕುಂಬಳಕಾಯಿ, ಪಡವಲಕಾಯಿ, ಅಲಸಂಡೆ, ಸೌತೆಕಾಯಿ ತರಕಾರಿ ಬೆಳೆದು ಲಾಭ ಗಳಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
MUST WATCH
ಹೊಸ ಸೇರ್ಪಡೆ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
IPL;ಮುಂಬೈ ಇಂಡಿಯನ್ಸ್ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ