ಔಷಧ ತ್ಯಾಜ್ಯ ವಿಲೇವಾರಿ
Team Udayavani, Apr 11, 2022, 9:39 AM IST
ಮಹಾನಗರ: ನಗರದ ಕೆಪಿಟಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ರಾಶಿ ಹಾಕಲಾಗಿದ್ದ ಔಷಧ ಪ್ಯಾಕೆಟ್ ಗಳ ರಾಶಿಯನ್ನು ಸದ್ಯ ವಿಲೇವಾರಿ ಮಾಡಲಾಗಿದೆ.
ಔಷಧ ರಾಶಿ ಹಾಕಿದ ಪ್ರದೇಶವನ್ನು ಔಷಧ ಉಪ ನಿಯಂತ್ರಕ ಶಂಕರ್ ನಾೖಕ್ ಅವರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾಹಿತಿ ಪಡೆದುಕೊಂಡು ಔಷಧ ಎಸೆದ ಫಾರ್ಮಾ ಸಿಬಂದಿ ಸ್ಥಳಕ್ಕೆ ಕರೆಸಿ, ಅವರಿಂದಲೇ ಔಷಧ ವಿಲೇವಾರಿ ಮಾಡಿಸಿದ್ದಾರೆ.
ಈ ರೀತಿ ರಸ್ತೆ ಬದಿಯಲ್ಲಿ ಔಷಧ ಎಸೆಯುವವರ ವಿರುದ್ಧ ಕಠಿನ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅವಧಿ ಮುಗಿದ ಅಥವಾ ನಿರುಪಯುಕ್ತ ಔಷಧವನ್ನು ವೈಜ್ಞಾನಿಕ ವಿಧಾನದ ಮುಖೇನ ವಿಲೇವಾರಿ ಮಾಡಬೇಕು ಎಂಬ ನಿಯಮ ಇದ್ದರೂ, ಹೆದ್ದಾರಿ ಪಕ್ಕದಲ್ಲಿಯೇ ಔಷಧ ಪ್ಯಾಕೆಟ್ಗಳನ್ನು ಎಸೆಯಲಾದ ವಿಷಯಕ್ಕೆ ಸಂಬಂಧಿಸಿ, ಉದಯವಾಣಿ ವರದಿ ಪ್ರಕಟಿಸಿತ್ತು