ಶಾ ಭೇಟಿ: ಕುಕ್ಕೆಯಲ್ಲಿ ಸಂಸದ ಪರಿಶೀಲನೆ
Team Udayavani, Feb 16, 2018, 11:32 AM IST
ಸುಬ್ರಹ್ಮಣ್ಯ : ಕರಾವಳಿಯ ಬಿಜೆಪಿ ಹೆಬ್ಟಾಗಿಲು ಸುಳ್ಯದಿಂದ ಬಿಜೆಪಿಯ ಪಕ್ಷ ಸಂಘಟನೆ ಆರಂಭವಾಗಲಿದ್ದು, ಅಮಿತ್ ಶಾ ಅವರು ಕುಕ್ಕೆ ಸುಬ್ರಹ್ಮಣ್ಯದ ನವಶಕ್ತಿ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಕರಾವಳಿಯ ಕಾರ್ಯಕರ್ತರಲ್ಲಿ ಮತ್ತಷ್ಟು ಶಕ್ತಿ ತುಂಬಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಗುರುವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪತ್ರಕರ್ತರ ಜತೆ ಮಾತನಾಡಿದರು. ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಂಸದರು, ಅಮಿತ್ ಶಾ ಅವರು ತಂಗಲಿರುವ ಕೊಠಡಿಗಳ ವೀಕ್ಷಣೆ ಹಾಗೂ ನವಶಕ್ತಿ ಸಮಾವೇಶ ನಡೆಯುವ ಕುಲ್ಕುಂದದ ಮೈದಾನದ ಪರಿಶೀಲನೆ ನಡೆಸಿ, ಪೂರ್ವಸಿದ್ಧತೆಗಳ ಕುರಿತು ಸ್ಥಳೀಯ ನಾಯಕರ ಜತೆ ಚರ್ಚಿಸಿದರು.
ನವಶಕ್ತಿ ಸಮಾವೇಶದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ಗಳಿಂದ ಅಪೇಕ್ಷಿತ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಪಕ್ಷದ ವಿವಿಧ ಜವಾಬ್ದಾರಿ ಹೊಂದಿರುವ ನಾಯಕರು ಉಪಸ್ಥಿತರಿರುವರು. ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಅವರು ತಂಗುವುದಕ್ಕೆ ವ್ಯವಸ್ಥೆ ಹಾಗೂ ಸಮಾವೇಶ ನಡೆಯುವ ಸ್ಥಳದಲ್ಲಿ ಆಗಬೇಕಿರುವ ವ್ಯವಸ್ಥೆಗಳ ಕುರಿತು ಪರಿಶೀಲನೆ ನಡೆಸಲು ಬಂದಿದ್ದೇನೆ. ಎಲ್ಲವೂ ಸುವ್ಯವಸ್ಥಿತವಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ನಾಯಕ ಮೋನಪ್ಪ ಭಂಡಾರಿ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಪ್ರಮುಖರಾದ ದಿನೇಶ್ ಸಂಪ್ಯಾಡಿ, ರಾಜೇಶ್ ಎನ್.ಎಸ್., ಬಿ.ಎನ್. ದಿನೇಶ್, ಸುಬ್ರಹ್ಮಣ್ಯ ಭಟ್, ಚಿದಾನಂದ ಕಂದಡ್ಕ, ಭವಾನಿಶಂಕರ ಪೂಂಬಾಡಿ, ಸತೀಶ್ ಮಾನಾಡು, ಮೋನಪ್ಪ ಮಾನಾಡು, ಅಶೋಕ ಆಚಾರ್ಯ, ರಾಜೇಶ್ ಕುಲ್ಕುಂದ ಉಪಸ್ಥಿತರಿದ್ದರು.
ಕೊಠಡಿ ಕಾಯ್ದಿರಿಸಲು ಬೇಡಿಕೆ!
ಅಮಿತ್ ಶಾ ಕುಕ್ಕೆ ಸುಬ್ರಹ್ಮಣ್ಯ ಭೇಟಿ ವೇಳೆ ಅವರು ತಂಗುವ ಕೊಠಡಿ ಯಾವುದೆಂದು ಇನ್ನೂ ಅಂತಿಮವಾಗಿಲ್ಲ. ಗುರುವಾರ ಸಂಸದರು ಶಾ ಅವರು ತಂಗುವ ವ್ಯವಸ್ಥೆಗಾಗಿ ಸೂಕ್ತ ಕೊಠಡಿ ಹುಡುಕಾಟ ನಡೆಸಿದರು. ಹಲವು ವಸತಿಗೃಹಗಳನ್ನು ವೀಕ್ಷಿಸಿದ್ದು ಯಾವ ಹೊಟೇಲ್ ಎಂಬುದನ್ನು ಅಂತಿಮಪಡಿಸಿಲ್ಲ. ಹುಡುಕಾಟದ ವೇಳೆ ಹಲವು ವಸತಿಗೃಹಗಳ ಮಾಲಕರು ತಮ್ಮ ಕೊಠಡಿ ಕಾಯ್ದಿರಿಸುವಂತೆ ಸಂಸದರಲ್ಲಿ ಬೇಡಿಕೆ ಇಟ್ಟರು. ಅಮಿತ್ ಶಾ ತಂಗುವ ಕೊಠಡಿ ಕಾಯ್ದಿರಿಸಲು ನಗರದಲ್ಲಿ ಭಾರಿ ಬೇಡಿಕೆಗಳು ಕೇಳಿಬಂದಿವೆ. ಸ್ಥಳೀಯ ದೇವಸ್ಥಾನದ ವಿವಿಐಪಿ ವಸತಿಗೃಹ, ಶ್ರೀ ಸಂಪುಟ ನರಸಿಂಹ ಮಠದ ವ್ಯಾಸಮಂದಿರ, ಖಾಸಗಿ ಹೊಟೇಲ್ ಗಳಾದ ವಿಜಯ ಕಂಫರ್ಟ್ಸ್, ಅಕ್ಷಯದ್ವಾರ ಹೀಗೆ ಹಲವು ಹೊಟೇಲುಗಳ ಹೆಸರುಗಳು ಕೇಳಿ ಬಂದಿದ್ದು, ಅಂತಿಮವಾಗಿ ದೇಗುಲದ ವಿವಿಐಪಿ ವಸತಿಗೃಹ ‘ಆದಿಶೇಷ’ ಕಾಯ್ದಿರಿಸುವ ಸಾಧ್ಯತೆ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ