ಶಾರದೋತ್ಸವ ಶೋಭಾಯಾತ್ರೆ ಟ್ಯಾಬ್ಲೋದಲ್ಲಿ ಮೋದಿ ಆಕರ್ಷಣೆ
Team Udayavani, Oct 2, 2017, 12:18 PM IST
ಬಜಪೆ : ಇಲ್ಲಿನ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಬಜಪೆ ಕೇಂದ್ರ ಮೈದಾನದ ಶ್ರೀ ಶಕ್ತಿ ಮಂಟಪದಿಂದ 25ನೇ ವರ್ಷದ ಶ್ರೀ ಶಾರದೋತ್ಸವದ ಭವ್ಯ ಶೋಭಾಯಾತ್ರೆ ನಡೆಯಿತು. ಇದರಲ್ಲಿ ಪ್ರಧಾನಿ ನರೇಂದ್ರಮೋದಿಯವರಂತೆ ಕಾಣುವ ವ್ಯಕ್ತಿಯಿದ್ದ ಟ್ಯಾಬ್ಲೋ ಜನರನ್ನು ಆಕರ್ಷಿಸಿತು.
ಬಜಪೆ ತಾರಿಕಂಬಳದ ನವಚೇತನಯುವಕ ಮಂಡಲದ ವತಿಯಿಂದ ಈ ಟ್ಯಾಬ್ಲೋ ಸಂಯೋಜಿಸಲಾಗಿತ್ತು. ಮೋದಿಯಂತೆ ಕಾಣುವ ವ್ಯಕ್ತಿ ಪಕ್ಕ ನಿಂತು ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
ಜಾಲತಾಣಗಳಲ್ಲಿ ವೈರಲ್
ಮೋದಿಯಂತೆ ಕಾಣುವ ಈ ವ್ಯಕ್ತಿಯಿರುವ ಟ್ಯಾಬ್ಲೋ ಮಾಡಿದ ಭಾಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವ್ಯಕ್ತಿ ಉಡುಪಿಯ ವಿಟ್ಲಪಿಂಡಿಯಲ್ಲಿ ಮೋದಿಯವರಂತೆಯೇ ಉಡುಗೆ ತೊಟ್ಟು ಎಲ್ಲರನ್ನು ಆಕರ್ಷಿಸಿದ್ದರು. ಈ ಬಗ್ಗೆ ಪತ್ರಿಕಾ ವರದಿಗಳನ್ನು ಗಮನಿಸಿದ ತಾರಿಕಂಬಳದ ನವಚೇತನ ಯುವಕ ಮಂಡಲದ ಸದಸ್ಯರು, ಶಾರದೋತ್ಸವದ ಟ್ಯಾಬ್ಲೋದಲ್ಲಿ ಇವರನ್ನು ಬಳಸಿಕೊಳ್ಳುವ ಉದ್ದೇಶದಿಂದ ಹುಡುಕಾಟ ಆರಂಭಿಸಿದ್ದರು. ಉಡುಪಿಯ ತಮ್ಮ ಮಿತ್ರರು, ರಿಕ್ಷಾ ಚಾಲಕರನ್ನು ಮಾತನಾಡಿಸಿ, ಮಾಹಿತಿ ಕಲೆ ಹಾಕಿದರು. ಕೆ.ಎಂ.ಸಿ.ಯಲ್ಲಿ ಉದ್ಯೋಗಿಯಾಗಿರುವ ಸದಾನಂದ ನಾಯಕ್ ಅವರ ಮನೆಗೆ ತೆರಳಿ, ಟ್ಯಾಬ್ಲೋದಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದರು.
ಟ್ಯಾಬ್ಲೋದಲ್ಲಿ ಈ ವ್ಯಕ್ತಿಯೇ ಕೇಂದ್ರಬಿಂದುವಾಗಿದ್ದರು. ಎರಡುಕಡೆ ಟ್ಯಾಬ್ಲೋದಿಂದ ಕೆಳಗಿಳಿದು ಬಂದ ನಾಯಕ್, ಜನರೊಂದಿಗೆ ಭಾವಚಿತ್ರ ತೆಗೆಸಿಕೊಂಡರು. ಈ ಫೋಟೋ-ವೀಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಯುವಕ ಮಂಡಲದ ಪದಾಧಿಕಾರಿಗಳಿಗೆ ಈ ಬಗ್ಗೆ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್