ಮುಂಗಾರು ದುರ್ಬಲ: ಬಿತ್ತನೆಗೆ ಭತ್ತ ಬೆಳೆಗಾರರ ಹಿಂದೇಟು


Team Udayavani, Jun 21, 2019, 5:00 AM IST

36

ಇನ್ನೂ ಕೃಷಿ ಚಟುವಟಿಕೆ ಕಾಣದ ಬೆಳ್ತಂಗಡಿ ಕೃಷಿ ಇಲಾಖೆಯ ಬೀಜ ಉತ್ಪಾದನೆ ಕೇಂದ್ರದ ಗದ್ದೆ.

ಬೆಳ್ತಂಗಡಿ: ಮುಂಗಾರು ಹಂಗಾಮಿನಲ್ಲಿ ಸೂಕ್ತ ಮಳೆ ಕೊರತೆ ಕಾರಣ ಜಿಲ್ಲೆಯಾದ್ಯಂತ ಭತ್ತ ಬಿತ್ತನೆ ಪ್ರದೇಶ ನಿಗದಿತ ಗುರಿಗಿಂತ ಕುಂಠಿತವಾಗಿದೆ. ಮುಂಗಾರು ಸಮಯದಲ್ಲಿ ಭತ್ತ ನಾಟಿ ಮಾಡುವ ಅವಧಿ ಸುಮಾರು ಒಂದು ತಿಂಗಳು ವಿಳಂಬವಾಗಿದೆ.ತಾಲೂಕಿನಲ್ಲಿ ಈ ಬಾರಿ 3,000 ಹೆಕ್ಟೇರ್‌ ಭತ್ತ ಬಿತ್ತನೆ ಗುರಿ ಹೊಂದಲಾಗಿದ್ದು, ಕೈಕೊಟ್ಟ ಮುಂಗಾರಿನಿಂದ ರೈತರು ಬಿತ್ತನೆಗೆ ಮುಂದಾಗಿಲ್ಲ. ಜಿಲ್ಲೆಯಲ್ಲಿ ಈ ಬಾರಿ 15,900 ಹೆಕ್ಟೇರ್‌ ಭತ್ತ ಬಿತ್ತನೆ ಗುರಿ ಇರಿಸಲಾಗಿತ್ತು. ಮಂಗಳೂರು 6,700, ಬೆಳ್ತಂಗಡಿ 3,000, ಬಂಟ್ವಾಳ 5,000, ಪುತ್ತೂರು 900, ಸುಳ್ಯ 300 ಹೆಕ್ಟೇರ್‌ ಭತ್ತ ಕೃಷಿಗೆ ಮಂಗಾರು ದುರ್ಬಲ ವಾದ್ದರಿಂದ ಶೇ. 40ರಷ್ಟು ಬಿತ್ತನೆ ನಡೆದಿಲ್ಲ.

ಒಂದು ತಿಂಗಳು ವಿಳಂಬ
ಪ್ರತಿ ವರ್ಷ ಮೇ 15ರ ಬಳಿಕ ಪೂರ್ವ ಮುಂಗಾರು ಆರಂಭಗೊಂಡು ಜೂನ್‌ ಆರಂಭದಲ್ಲಿ ಭತ್ತ ಕೃಷಿ ಗರಿಗೆದರುತ್ತಿತ್ತು. ಪ್ರಸಕ್ತ ಜಿಲ್ಲೆಯಲ್ಲಿ ಜೂ. 15ರ ವರೆಗೂ ಸಂಪೂರ್ಣ ಮಳೆ ಪ್ರಮಾಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಎಪ್ರಿಲ್‌-ಮೇ ತಿಂಗಳಲ್ಲಿ ಬೀಜ ಬಿತ್ತನೆ ಮಾಡಿ ಜೂನ್‌ ಒಳಗಾಗಿ ನೇಜಿ ನಾಟಿ ಕಾರ್ಯವಾಗುತ್ತಿತ್ತು. ಈ ಬಾರಿ ಜೂ. 20 ಆದರೂ ಬಿತ್ತನೆಗೆ ಮಳೆ ಧೈರ್ಯ ನೀಡುತ್ತಿಲ್ಲ ಎಂಬುದು ರೈತರ ಅಳಲು.

ಭತ್ತ ಕೃಷಿ ಇಳಿಮುಖ
ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ಪ್ರದೇಶ ಸುಮಾರು ಒಂದು ಸಾವಿರ ಎಕ್ರೆಯಷ್ಟು ಕಡಿಮೆ ಯಾಗಿದೆ. ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭತ್ತ ಬೆಳೆ ಒಟ್ಟು 22 ಸಾವಿರ ಹೆಕ್ಟೇರ್‌ ಪ್ರದೇಶ ಕಡಿಮೆಯಾಗಿದೆ. ಕಳೆದ ವರ್ಷ ದ.ಕ.ದಲ್ಲಿ 28 ಸಾವಿರ ಹೆಕ್ಟೇರ್‌ ಹಾಗೂ ಉಡುಪಿ ಜಿಲ್ಲೆಯಲ್ಲಿ 44 ಸಾವಿರ ಹೆಕ್ಟೇರ್‌ ಸಹಿತ ಒಟ್ಟು 72 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. 8 ವರ್ಷಗಳಲ್ಲಿ ಉಭಯ ಜಿಲ್ಲೆಗಳಲ್ಲಿ ಒಟ್ಟು 34 ಸಾವಿರ ಹೆಕ್ಟೇರ್‌ ಕಡಿಮೆಯಾಗಿದೆ.

ಕೈಕೊಟ್ಟ ಮಳೆ
ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಆಗದೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ ಮುಂಗಾರು ಮಳೆ ಶೇ. 62ರಷ್ಟು ಕೊರತೆಯಾಗಿದೆ. ಜೂ. 17ರ ವರೆಗೆ ತಾ|ನಲ್ಲಿ 411 ಮಿ.ಮೀ. ವಾಡಿಕೆ ಮಳೆಯಾಗುವಲ್ಲಿ 172.8 ಮಿ.ಮೀ. ಮಳೆಯಾಗಿದ್ದು, ಶೇ.58ರಷ್ಟು ಮಳೆ ಕೊರತೆ ಕಾಡಿದೆ. ಬಂಟ್ವಾಳ 224.0, ಮಂಗಳೂರು 212.0, ಪುತ್ತೂರು 11.3, ಸುಳ್ಯ 110.7 ಮಿ.ಮೀ. ಮಳೆಯಾಗಿದೆ.

ಕೃಷಿ ಇಲಾಖೆ ಭತ್ತದ ಗದ್ದೆ ಹಡೀಲು
ಭತ್ತ ಬೆಳೆಯಿಂದ ವಿಮುಖವಾಗುತ್ತಿರುವುದು ಹಾಗೂ ಕೃಷಿಕರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಕಡಿಮೆಯಾಗಿರುವುದರಿಂದ ಬೆಳ್ತಂಗಡಿ ಕೃಷಿ ಇಲಾಖೆಯ ಬೀಜ ಉತ್ಪಾದನೆ ಕೇಂದ್ರದ 5 ಎಕ್ರೆ ಗದ್ದೆ ಹಡೀಲು ಬೀಳುವಂತಾಗಿದೆ. ಪ್ರತಿ ವರ್ಷ ಇಲ್ಲಿ ಸರಾಸರಿ 60ರಿಂದ 70 ಕೆ.ಜಿ. ಭತ್ತ ಬೆಳೆಯಲಾಗುತ್ತಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಗದ್ದೆಯಲ್ಲಿ ಕಳೆ ಆವರಿಸಿದೆ.

ಕುಂಠಿತವಾಗಲಿದೆ
1 ಎಕ್ರೆ ಪ್ರದೇಶದಲ್ಲಿ ನಾನು ಪ್ರತಿ ವರ್ಷ ಎರಡು ಬೆಳೆ ಭತ್ತ ಬೆಳೆಯುತ್ತಿದ್ದೇನೆ. ಪ್ರಸಕ್ತ ವರ್ಷ ದುರ್ಬಲ ಮುಂಗಾರಿನಿಂದ ಶೇ.50ರಷ್ಟು ಭತ್ತ ಕೃಷಿ ಕುಂಠಿತವಾಗಲಿದೆ. ಬೈಲು ಗದ್ದೆಯಲ್ಲಿ ಭತ್ತ ಮಾಡುವವರಿಗೆ ಅವಕಾಶವಿದೆ. ಬೆಟ್ಟು ಗದ್ದೆ ಹಾಗೂ ಮಜಲು ಗದ್ದೆಯಲ್ಲಿ ಭತ್ತ ಬೆಳೆಯುವವರಿಗೆ ಮಳೆ ಕೈಕೊಡುವ ಭಯದಿಂದ ಬೀಜ ಬಿತ್ತನೆ ವಿಳಂಬವಾಗುತ್ತಿದೆ.
– ಪ್ರಭಾಕರ್‌ ಮಯ್ಯ, ಸುರ್ಯ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರು

 ಕೃಷಿಕರಲ್ಲಿ ಹಿಂಜರಿಕೆ
ಮಳೆ ವಿಳಂಬವಾಗಿರುವುದರಿಂದ ತಾಲೂಕಿನಲ್ಲಿ ಭತ್ತ ಬಿತ್ತನೆಗೆ ಕೃಷಿಕರು ಹಿಂಜರಿಯುತ್ತಿದ್ದಾರೆ. ತಾಲೂಕಿನ ಬೆಳ್ತಂಗಡಿ, ಕೊಕ್ಕಡ, ವೇಣೂರು ಹೋಬಳಿಗಳ ರೈತರು ಗದ್ದೆ ಹದಗೊಳಿಸಿ ಬಿತ್ತನೆಗೆ ಕೃಷಿ ಇಲಾಖೆಯಿಂದ 30 ಕ್ವಿಂಟಾಲ್‌ ಭತ್ತ ಖರೀದಿಸಿದ್ದಾರೆ.
 - ಪ್ರೇಮಾ ಡಿ. ಕಾಮ್ಲೆ
ಸ. ಕೃಷಿ ನಿರ್ದೇಶಕರು, ಬೆಳ್ತಂಗಡಿ

-  ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.