ಮೂಡಬಿದಿರೆ; ಬಿಂಬ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ
Team Udayavani, Mar 6, 2017, 12:40 PM IST
ಮೂಡಬಿದಿರೆ: ಮೂಡುವೇಣುಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬಿಂಬ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ರವಿವಾರ ನಡೆಯಿತು.
ಎಡಪದವು ಬ್ರಹ್ಮಶ್ರೀ ಕೆ. ವೆಂಕಟೇಶ ತಂತ್ರಿ ಅವರು ಅರ್ಚಕ ರಾಘವೇಂದ್ರ ಭಟ್ ಸಹಭಾಗಿತ್ವದಲ್ಲಿ ಮುಂಜಾನೆ ಶಿಖರ ಪ್ರತಿಷ್ಠೆ, ಗೋಪಾಲಕೃಷ್ಣ ದೇವರ ಬಿಂಬ ಪುನಃ ಪ್ರತಿಷ್ಠೆ, ಪರಿವಾರ ಪ್ರತಿಷ್ಠೆ ಬಳಿಕ 108 ಪರಿಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ನೆರವೇರಿಸಿದರು. ಮಹಾಪೂಜೆ, ಪಲ್ಲಪೂಜೆ, ಸಾಯಂಕಾಲ ಮಹಾರಂಗಪೂಜೆ, ಶ್ರೀ ಭೂತ ಬಲಿ, ಉತ್ಸವ ಬಲಿ, ಪೇಟೆ ಸವಾರಿ ನಡೆಯಿತು.
ಸಮಿತಿಯ ಗೌರವಾಧ್ಯಕ್ಷ- ಶಾಸಕ ಕೆ. ಅಭಯಚಂದ್ರ, ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಗುರುಪ್ರಸಾದ್ ಹೊಳ್ಳ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಶ್ರೀಪತಿ ಭಟ್, ಉಪಾಧ್ಯಕ್ಷ ಸುದರ್ಶನ ಎಂ., ಶಿವಾನಂದ ಪ್ರಭು, ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ. ಉಮೇಶ್ ಪೈ, ಶ್ರೀಕೃಷ್ಣ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಬಿ. ಗಣೇಶ ರಾವ್, ಸಂಚಾಲಕ ಸಂತೋಷ್ ಕುಮಾರ್, ಉದ್ಯಮಿ ಜಯರಾಮ ಎಂ. ಶೆಟ್ಟಿ, ಮೇಘನಾದ್ ಶೆಟ್ಟಿ ಮೊದಲಾದವರು ಪಾಲ್ಗೊಂಡಿದ್ದರು.
ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಿತು.