ಪಣಂಬೂರು: ರಾಷ್ಟ್ರೀಯ ಸರ್ಫಿಂಗ್ ಸಂಪನ್ನ: ಕರ್ನಾಟಕದ ರಮೇಶ್, ಗೋವಾದ ಬನಾರ್ಸೆಗೆ ಪ್ರಶಸ್ತಿ
Team Udayavani, May 30, 2022, 1:10 AM IST
ಪಣಂಬೂರು: ಪಣಂಬೂರಿನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ರವಿವಾರ ನಡೆದ ಪುರುಷರ ಮುಕ್ತ ವಿಭಾಗದಲ್ಲಿ ಕರ್ನಾಟಕದ ರಮೇಶ್ ಬುಧಿಯಾಲ್ ಗೆಲುವು ಸಾಧಿಸಿ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ಫೈನಲ್ನಲ್ಲಿ ರಮೇಶ್ ತಮಿಳುನಾಡಿನ ಅಜೀಶ್ ಅಲಿ ಅವರನ್ನು ಸೋಲಿಸಿದ್ದರು. ವನಿತೆಯರ ಮುಕ್ತ ಸ್ಪರ್ಧೆಯ ಫೈನಲ್ನಲ್ಲಿ ಗೋವಾದ ಶುಗರ್ ಬನಾರ್ಸೆಗೆ ಪ್ರಶಸ್ತಿ ಪಡೆದರು.
16ರ ಹರೆಯದ ಬನಾರ್ಸೆಗೆ ಫೈನಲ್ನಲ್ಲಿ ಹಾಲಿ ಚಾಂಪಿಯನ್ ತಮಿಳುನಾಡಿನ ಸೃಷ್ಟಿ ಸೆಲ್ವಂ ಅವರನ್ನು ಹಿಂದಿಕ್ಕಿ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡರು.
ಕರ್ನಾಟಕದ ಸಿಂಚನಾ ಗೌಡ ಮೂರನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.
ರಮೇಶ್ ಬುಧಿಯಾಲ್ ಒಟ್ಟು 16.33 ಅಂಕ ಗಳಿಸಿದರೆ, ರನ್ನರ್ ಅಪ್ ಅಜೀಶ್ ಅಲಿ 15.67 ಅಂಕ ಗಳಿಸಿದರು. ಸತೀಶ್ ಸರ್ವಣನ್ 13 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
ಸಂಸದ ಶ್ರೀನಿವಾಸ್ ಪ್ರಸಾದ್ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು