9 ತಿಂಗಳಿನಿಂದ ಸಂಬಳವಿಲ್ಲ !
ಧರಣಿ ಸತ್ಯಾಗ್ರಹಕ್ಕೆ ಬಿಎಸ್ಸೆನ್ನೆಲ್ ಗುತ್ತಿಗೆ ನೌಕರರ ಚಿಂತನೆ
Team Udayavani, Sep 10, 2019, 5:29 AM IST
ಸಾಂದರ್ಭಿಕ ಚಿತ್ರ.
ಮಂಗಳೂರು: ಬಿಎಸ್ಎನ್ಎಲ್ನಲ್ಲಿ ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ದಿನಗೂಲಿ ಸೇರಿದಂತೆ ವಿವಿಧ ನೌಕರರಿಗೆ 9 ತಿಂಗಳಿನಿಂದ ವೇತನ ಪಾವತಿಯಾಗದಿದ್ದು, 15 ದಿನಗಳ ಒಳಗೆ ಪಾವತಿಸದಿದ್ದಲ್ಲಿ ಬಿಎಸ್ಎನ್ಎಲ್ನ ಬೆಂಗಳೂರು ಸಿಜಿಎಂ ಕಚೇರಿ ಮುಂದೆ ರಾಜ್ಯ ಮಟ್ಟದ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಬಿಎಸ್ಎನ್ಎಲ್ ಕಂಟ್ರಾಕ್ಟರ್ ವರ್ಕರ್ ಅಸೋಸಿಯೇಶನ್ ತಿಳಿಸಿದೆ.
ಮಂಗಳೂರಿನಲ್ಲಿ ಸೋಮವಾರ ನಡೆದ ಅಸೋಸಿಯೇಶನ್ ಸಭೆಯಲ್ಲಿ ಅಧ್ಯಕ್ಷ ಅಬ್ದುಲ್ ಸಲಾಂ ಮಾತನಾಡಿ, ಸಂಸದರು, ಶಾಸಕರು ಸೇರಿದಂತೆ ಎಲ್ಲ ರಿಗೆ ಮನವಿ ಮಾಡಿದರೂ ಯಾವುದೇ ಪ್ರತಿಫಲ ದೊರೆತಿಲ್ಲ. ಸತ್ಯಾಗ್ರಹದ ಬಳಿಕ ಕಾನೂನು ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದರು.