ಪೊಲೀಸರ ಕರ್ತವ್ಯಕ್ಕೆ ಅಡ್ಡಿ: 13 ತೃತೀಯ ಲಿಂಗಿಗಳು ವಶಕ್ಕೆ
Team Udayavani, Jul 30, 2023, 9:49 PM IST
ಮಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 13 ಮಂದಿ ತೃತೀಯ ಲಿಂಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಕುಂಟಿಕಾನ ಮೇಲ್ಸೇತುವೆ ಕೆಳಗೆ ಶನಿವಾರ ರಾತ್ರಿ ತೃತೀಯ ಲಿಂಗಿಗಳ ಗುಂಪು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಉರ್ವ ಪೊಲೀಸರಿಗೆ ದೂರು ಬಂದಿತ್ತು.
ಪೊಲೀಸರು ಸ್ಥಳಕ್ಕೆ ತೆರಳಿ ತೃತೀಯ ಲಿಂಗಿಗಳನ್ನು ವಿಚಾರಿಸಿದ್ದರು. ಆ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಬಂಧಿಸಲಾಯಿತು.
ತೃತೀಯ ಲಿಂಗಿಗಳು ಬಲವಂತದಿಂದ ಹಣ ವಸೂಲಿ, ಸಾರ್ವಜನಿಕರಿಗೆ ಕಿರುಕುಳ ಇನ್ನಿತರ ಕೃತ್ಯ ನಡೆಸುತ್ತಿದ್ದುದರ ಕುರಿತು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.