ಪಿಯುಸಿ: ಆಳ್ವಾಸ್ ಶೇ. 98.21 ಫಲಿತಾಂಶ
Team Udayavani, Apr 16, 2019, 6:09 AM IST
ಮೂಡುಬಿದಿರೆ: ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾದ ಆಳ್ವಾಸ್ ಪ.ಪೂ. ಕಾಲೇಜಿನ 5,051 ವಿದ್ಯಾರ್ಥಿಗಳ ಪೈಕಿ 4,961 ಮಂದಿ ಉತ್ತೀರ್ಣರಾಗಿ ಶೇ. 98.21 ಫಲಿತಾಂಶ ಲಭಿಸಿದೆ.
ವಾಣಿಜ್ಯ ವಿಭಾಗದಲ್ಲಿ ಒಲ್ವಿಟಾ ಅನ್ಸಿಲಾ ಡಿ’ಸೋಜಾ 596 ಅಂಕ (ಶೇ. 99.33) ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ ಮೊದಲಿಗರಾಗಿದ್ದಾರೆ. ಮೂರೂ ವಿಭಾಗಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 2,184 ಮಂದಿ ಸಹಿತ ಒಟ್ಟು 2,557 ಮಂದಿ ಪ್ರಥಮ, 157 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾಣ ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಾಣಿಜ್ಯ ವಿಭಾಗದ ಆಕಾಶ್ ಎಂ. ನಾಯರಿ 593, ವಿಷ್ಮಾ ಹೆಗ್ಡೆ 592, ಸುದೀಪ್ತಿ ಪಿ. 591, ಪಲ್ಲವಿ ಎಚ್.ಆರ್ 586, ಅನುಷಾ ಪಿ.ಎಲ್. 588, ಗುರುಪ್ರಸಾದ್ ಹೆಗ್ಡೆ 589, ಸುಬ್ರಹ್ಮಣ್ಯ ಬಿ.ಎಂ. 588 ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ದೀಪಿಕಾ ಎಚ್.ಎಸ್., ದರ್ಶನ್, ಸಮರ್ಥ್, ಶ್ರುತಿ ಪಿ.ಎಸ್. ಮೂವರೂ 590 ಅಂಕ, ನಂದಿನಿ ಎಸ್.ಎಚ್. 589 ಹಾಗೂ ಸಿಂಚನಾ ಉಡುಪ, ಸ್ನೇಹಾ ಕೆ. ಶೆಟ್ಟಿ, ಸೋನಿಯಾ ಪಿ., ಅರುಣ್ ಕೆ.ಎಂ., ನಿವೇದಿತಾ ರಘುನಾಥ್ ತಲಾ 588 ಅಂಕ ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಶೇ. 98.16 ವಾಣಿಜ್ಯ ವಿಭಾಗದಲ್ಲಿ ಶೇ. 98.53 ಹಾಗೂ ಕಲಾ ವಿಭಾಗದಲ್ಲಿ ಶೇ. 100 ಫಲಿತಾಂಶ ಲಭಿಸಿದೆ.
ಕ್ರೀಡಾ ದತ್ತು ಸ್ವೀಕಾರದಲ್ಲಿ 97 ಮಂದಿ ಕ್ರೀಡಾಳುಗಳ ಪೈಕಿ 96 ಮಂದಿ ಪಾಸಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರೊಣ ರಮೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್, ಸದಾಕತ್ತ್, ಅಶ್ವಥ್, ವೆಂಕಟೇಶ್ ನಾಯಕ್, ಗಣನಾಥ್, ವೇಣುಗೋಪಾಲ ಶೆಟ್ಟಿ, ಪಿಆರ್ಒ ಡಾಣ ಪದ್ಮನಾಭ ಶೆಣೈ ಉಪಸ್ಥಿತರಿದ್ದರು.
ಅಂಧ ವಿದ್ಯಾರ್ಥಿ ಸಾಧನೆ
ಸಂಪೂರ್ಣ ಅಂಧ ವಿದ್ಯಾರ್ಥಿ ಕಲಾ ವಿಭಾಗದ ನಾಗರಾಜ ಸುತಾರ್ 548 (ಶೇ. 91.33) ಅಂಕ ಗಳಿಸಿದ್ದಾರೆ. ಅವರಿಗೆ ಇಂಗ್ಲಿಷ್ನಲ್ಲಿ 94, ಹಿಂದಿ 95, ಇತಿಹಾಸ 93, ಅರ್ಥಶಾಸ್ತ್ರ 82, ಸಮಾಜಶಾಸ್ತ್ರ 91, ರಾಜ್ಯಶಾಸ್ತ್ರದಲ್ಲಿ 93 ಅಂಕಗಳು ಲಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?