ಪ್ರತಿಷ್ಠೆಯ ಪಣಕ್ಕೆ ಕಾರಣವಾದ ಪುತ್ತೂರು ಸಂತೆ ಸ್ವಸ್ಥಾನಕ್ಕೆ


Team Udayavani, Mar 14, 2017, 5:26 PM IST

puttur-sante.jpg

ಪುತ್ತೂರು: ಸ್ಥಳಾಂತರ ಪ್ರಹಸನ, ರಾಜಕೀಯ ಮೇಲಾಟ, ಆರೋಪ -ಪ್ರತ್ಯಾ ರೋಪ- ಎಂಟು ತಿಂಗಳಿಂದ ನಗರದ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ಗೊಂದಲಗಳಿಗೆ ಕಾರಣವಾದ ಐತಿಹಾಸಿಕ ಕಿಲ್ಲೆ ಮೈದಾನದ ಸಂತೆ ಮರಳಿ ಸ್ವಸ್ಥಾನಕ್ಕೆ ತಲುಪಿದೆ.

ಹಲವು ದಶಕಗಳಿಂದ ಸೋಮವಾರ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯುತ್ತಿತ್ತು. ಆದರೆ ಎಂಟು ತಿಂಗಳ ಹಿಂದೆ ಊರೆಲ್ಲಾ ಸುತ್ತಿ ಈಗ ಮತ್ತೆ ಕಿಲ್ಲೆ ಮೈದಾನಕ್ಕೆ ಬಂದಿದೆ. ಸಂತೆಗೆ ಮರು ಜೀವ ಬಂದಂತಾಗಿದೆ. ಪುತ್ತೂರು ಪೇಟೆಯಲ್ಲೂ ಸಂತೆ ಆರಂಭಗೊಂಡ ಕಳೆ ಕಾಣಿಸಿಕೊಂಡಿದೆ.

ಸ್ಥಳಾಂತರ ಆದೇಶದ ಬಳಿಕ ನಗರದ ಮಿನಿ ವಿಧಾನಸೌಧದಲ್ಲಿನ ಸರಕಾರಿ ಕಚೇರಿಗಳು, ನ್ಯಾಯಾಲಯ, ಸರಕಾರಿ ಆಸ್ಪತ್ರೆಗಳಿಗೆ ಬರುವವರಿಗೆ ತೊಂದರೆ, ಸಂಚಾರ ಸಮಸ್ಯೆ ಗಳನ್ನು ಮುಖ್ಯವಾಗಿಸಿ ಕೊಂಡು ಆ. 15ರ ಬಳಿಕ ಪುತ್ತೂರು ಕಿಲ್ಲೆ ಮೈದಾನದ ಸೋಮವಾರ ಸಂತೆ ಸ್ಥಳಾಂತರಗೊಳಿಸಿ ಆಗಿನ ಪುತ್ತೂರು ಸಹಾಯಕ ಕಮಿಷನರ್‌ ಡಾ| ರಾಜೇಂದ್ರ ಕೆ.ವಿ. ಅವರು ಸಬ್‌ ಡಿವಿಜನಲ್‌ ಮ್ಯಾಜಿಸ್ಟ್ರೇಟರ್‌ ನೆಲೆಯಲ್ಲಿ ಆದೇಶಿಸಿದ್ದರು.

ಅನಂತರದಲ್ಲಿ ದೂರದ ಪುತ್ತೂರು ಎಪಿಎಂಸಿ ಪ್ರಾಂಗ ಣದಲ್ಲಿ ಸಂತೆ ನಡೆಸಲಾಯಿ ತಾದರೂ ವ್ಯಾಪಾರದ ಕೊರತೆಯ ಕಾರಣದಿಂದ ವ್ಯಾಪಾರಿಗಳೂ ನಷ್ಟವೆಂದು ದೂರಿ ಕೊಂಡರು. ಬಳಿಕ ನಗರಸಭೆಯಿಂದ ಸಂತೆಗಾಗಿ ಪರ್ಯಾಯ ಜಾಗ ಹುಡುಕಲಾಯಿತಾದರೂ ವಿಫಲವಾ ದಾಗ ಮರಳಿ ಕಿಲ್ಲೆ ಮೈದಾನದಲ್ಲಿ ರವಿವಾರ ಸಂತೆ ಆಯೋಜಿಸಲಾಯಿತು. ರವಿವಾರವೂ ನಿರೀಕ್ಷಿತ ಫಲ ಸಿಗದಿದ್ದಾಗ ನಗರಸಭೆಯಲ್ಲಿ ನಿರ್ಣಯ ಕೈಗೊಂಡು ಇದೀಗ ಸೋಮವಾರ ಸಂತೆ ಆರಂಭಿಸಲಾಗಿದೆ.

ಪ್ರತಿಷ್ಠೆಯ ಹೋರಾಟ
ಸಂತೆ ಸ್ಥಳಾಂತರವೆಂಬುದು ಲಾಭ -ನಷ್ಟ, ಪ್ರಯೋಜಕ -ನಿಷ್ಪ್ರಯೋಜಕವೆನ್ನುವುದ ಕ್ಕಿಂತಲೂ ತಂಡಗಳ ಮಧ್ಯೆ ಪ್ರತಿಷ್ಠೆಯ ಹೋರಾಟವಾಗಿ ಪರಿಣಮಿ ಸಿತ್ತು. ಪ್ರಮುಖ ಎರಡು ಪಕ್ಷಗಳಲ್ಲಿ, ಸ್ಥಳೀಯಾಡಳಿತದಲ್ಲಿ ಪರಸ್ಪರ ಪರ -ವಿರೋಧದ ಗುಂಪುಗಳು ರಚನೆಗೊಂಡಿದ್ದವು. ಪರಸ್ಪರ ಆರೋಪ – ಪ್ರತ್ಯಾರೋಪಗಳೂ ನಡೆದವು. 

ಸುಖಾಂತ್ಯ
ಮಾ. 13ರ ಸೋಮವಾರ ಮರಳಿ ಕಿಲ್ಲೆ ಮೈದಾನದ ಸಂತೆ ಆರಂಭಗೊಂಡು ಈ ಹಿಂದಿನ ವಾತಾವರಣವೇ ನಿರ್ಮಾಣ ಗೊಂಡಿದೆ. ರವಿವಾರದ ಸಂತೆ ಕಾವೂ ಎಪಿಎಂಸಿ ಪ್ರಾಂಗಣದ ಸಂತೆಗಿಂತ ಪರವಾ ಗಿಲ್ಲ ಎನ್ನುವ ವಾತಾವರಣ ವ್ಯಾಪಾರಿ ಗಳು ಹಾಗೂ ಗ್ರಾಹಕರ ಕಡೆಯಿಂದ ಕಾಣಿಸಿಕೊಂಡಿದೆ. 

ತೊಂದರೆ ನಿವಾರಣೆ 
ಕಿಲ್ಲೆ ಮೈದಾನದ ಸಂತೆ ಸೋಮವಾರವೇ ಆರಂಭಿಸಬೇಕು ಎನ್ನುವ ಒತ್ತಾಯಗಳು ಕೇಳಿಬಂದ ಹಿನ್ನೆಲೆಯಲ್ಲಿ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಆ ಮೂಲಕ ಸಂತೆಯ ತೊಂದರೆ ನಿವಾರಣೆಯಾಗಿದೆ.
– ಜಯಂತಿ ಬಲಾ°ಡು, ಅಧ್ಯಕ್ಷರು, ನಗರಸಭೆ ಪುತ್ತೂರು

ಖುಷಿಯಾಗಿದೆ 
ಎಪಿಎಂಸಿ ಹಾಗೂ ಕಿಲ್ಲೆ ಮೈದಾನದಲ್ಲಿ ನಡೆದ ಸಂತೆಗಿಂತ ಇಂದಿನ ಸಂತೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ಎರಡು ವಾರಗಳಲ್ಲಿ ಸಹಜ ಸ್ಥಿತಿಗೆ ಬಂದು ವ್ಯಾಪಾರ ಹೆಚ್ಚಾಗುವ ನಿರೀಕ್ಷೆ ಮೂಡಿದೆ, ಖುಷಿಯಾಗಿದೆ.
– ಮೇದಪ್ಪ, ಸ್ಥಳೀಯ ಸಂತೆ ವ್ಯಾಪಾರಿ

ಸಮಸ್ಯೆಗಳು ಬಗೆಹರಿದಿದೆ 
ನಮಗೆ ಸಂತೆ ವ್ಯಾಪಾರವೇ ಬದುಕಿನ ದಾರಿ. ಪುತ್ತೂರು ಸಂತೆ ಸ್ಥಳಾಂತರವಾದ ಬಳಿಕ ವ್ಯಾಪಾರ ನಷ್ಟದಿಂದ ತುಂಬಾ ತೊಂದರೆ ಅನುಭವಿಸಿದ್ದೇವೆ. ಸಂತೆಯ ಕುರಿತ ಎಲ್ಲ  ಸಮಸ್ಯೆಗಳು ಬಗೆಹರಿದು ಹೆಚ್ಚಿನ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ.
– ಪುಟ್ಟರಾಜು ಹಾಸನ, ಸಂತೆ ವ್ಯಾಪಾರಿ

ಕೊಂಡೊಯ್ಯಲು ಸುಲಭ 
ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಯುವುದರಿಂದ ನಮಗೆ ಹೆಚ್ಚಿನ ಪ್ರಯೋಜನವಿದೆ. ಸೋಮವಾರ ಹೆಚ್ಚಾಗಿ ಅಗತ್ಯ ಕೆಲಸಗಳಿಗಾಗಿ ಪೇಟೆಗೆ ಬರುವುದರಿಂದ ಸನಿಹದಲ್ಲೇ ಇರುವ ಕಿಲ್ಲೆ ಮೈದಾನದ ಸಂತೆಗೆ ಬಂದು ತರಕಾರಿ ಕೊಂಡೊಯ್ಯಲು ಸುಲಭವಾಗುತ್ತದೆ.
– ವಿಶಾಲಾಕ್ಷಿ ಪರ್ಪುಂಜ, ಗೃಹಿಣಿ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.