ಪುತ್ತೂರಿನಲ್ಲಿ ರೈ ‘ಕೈ’ ಮೇಲು; ಜಿದ್ದಾಜಿದ್ದಿನಲ್ಲಿ ಪುತ್ತಿಲರಿಗೆ ಸೋಲು
ಬಿಜೆಪಿ ಅಭ್ಯರ್ಥಿಗೆ ಮೂರನೇ ಸ್ಥಾನ
Team Udayavani, May 13, 2023, 2:21 PM IST
ಮಂಗಳೂರು : ರಾಜ್ಯದಲ್ಲೇ ತೀವ್ರ ಕುತೂಹಲ ಮೂಡಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಜಯ ಸಾಧಿಸಿದ್ದಾರೆ. ಕೊನೆಯ ಹಂತದ ವರೆಗೆ ತೀವ್ರ ಸ್ಪರ್ಧೆ ಒಡ್ಡಿದ ಹಿಂದೂ ಮುಖಂಡ, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 4149 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಮೂರನೇ ಸ್ಥಾನ ಪಡೆದಿದ್ದಾರೆ.
ಅಶೋಕ್ ಕುಮಾರ್ ರೈ 66607 ,ಅರುಣ್ ಕುಮಾರ್ ಪುತ್ತಿಲ 62458 , ಆಶಾ ತಿಮ್ಮಪ್ಪ ಗೌಡ 37558 ಮತಗಳನ್ನು ಪಡೆದಿದ್ದಾರೆ. ಮತ ವಿಭಜನೆ ಯಾಗುತ್ತದೆ ಎಂದು ಅಂದಾಜಿಸಲಾಗಿದ್ದ ಎಸ್ ಡಿಪಿಐ ಅಭ್ಯರ್ಥಿ ಶಾಫಿ ಬೆಳ್ಳಾರೆ 2773 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ನ ದಿವ್ಯಪ್ರಭ ಗೌಡ ಅವರು 666 ಮತಗಳನ್ನು ಮಾತ್ರ ಪಡೆದಿದ್ದಾರೆ. ನೋಟಾಕ್ಕೆ 866 ಮತ ಗಳು ಚಲಾವಣೆಯಾಗಿವೆ.
ಕೊನೆಯ ಹಂತದ ವರೆಗೆ ತೀವ್ರ ಹೋರಾಟವನ್ನು ಪುತ್ತಿಲ ಅವರು ನೀಡಿದ್ದರು. ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭ ಆಯಿತು ಎನ್ನುವ ಮಾತು ಕರಾವಳಿಯ ಎಲ್ಲೆಡೆ ಮಾತನಾಡುತ್ತಿದ್ದಾರೆ.