ಪಯಸ್ವಿನಿ ನದಿ ಪ್ರವಾಹ ಮಟ್ಟ ಇಳಿಕೆ 


Team Udayavani, Aug 18, 2018, 10:49 AM IST

18-agust-4.jpg

ಸುಳ್ಯ : ಪಯಸ್ವಿನಿ ನದಿಯಲ್ಲಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದ ನೀರಿನ ಮಟ್ಟ ಶುಕ್ರವಾರ ಇಳಿಕೆ ಕಂಡಿದೆ. ಆದರೆ ಕೊಡಗು-ದ.ಕ. ಗಡಿಭಾಗದ ಅರಂತೋಡು, ಸಂಪಾಜೆ ಪರಿಸರದಲ್ಲಿ ವರುಣನ ಅಬ್ಬರ ತೀವ್ರ ಸ್ವರೂಪ ಪಡೆದಿದ್ದು, ಅನೇಕ ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ಪ್ರಾಣ ಹಾನಿಯಂತಹ ಘಟನೆಗಳು ಸಂಭವಿಸಿವೆ.

ಅರಂತೋಡಿನ ದಿನೇಶ್‌ ಕಿರ್ಲಾಯ ಅವರ ನಿರ್ಮಾಣ ಹಂತದಲ್ಲಿನ ಮನೆಗೆ ಶುಕ್ರವಾರ ಮುಂಜಾನೆ ಗುಡ್ಡ ಕುಸಿದು ಮನೆ ಸಂಪೂರ್ಣ ಧರಾಶಾ ಯಿಯಾಗಿದೆ. 10 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವ ಮಾಹಿತಿ ಇದೆ. ಇದೇ ಪರಿಸರದಲ್ಲಿ ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಗುರುವಾರ ರಾತ್ರಿ ಧಾರಕಾರ ಮಳೆಯ ಪರಿಣಾಮ ಕಡಬ ಸಂಪರ್ಕದ ಅಲೆಕ್ಕಾಡಿ-ಎಡಮಂಗಲ ರಸ್ತೆಯ ಕರಿಂಬಿಲ ಬಳಿ ರಸ್ತೆ ಕುಸಿತದ ಭೀತಿ ಉಂಟಾಗಿದೆ. ಅಮರಮುಟ್ನೂರು ಗ್ರಾಮದ ಕೊರತ್ಯಡ್ಕ ನಾರ್ಣಪ್ಪ ಗೌಡ ಅವರ ಮನೆ ಸಮೀಪದ ಧರೆ ಕುಸಿದಿದೆ. ಕಳಂಜ ಗ್ರಾಮದ ಕೊಲ್ಲರ್ನೊಜಿ ಕೋಟೆ, ಕೆದಿಲ ರಸ್ತೆಯ ಶೇಡಿಕಜೆ, ಕೋಟೆ ಮಧ್ಯೆ ರಸ್ತೆ ಕುಸಿತದ ಭೀತಿ ಉಂಟಾಗಿದೆ. ದೊಡ್ಡತೋಟ-ಮರ್ಕಂಜ ರಸ್ತೆಯ ನಳಿಯಾರಿನಲ್ಲಿ ಚರಂಡಿ ಮುಚ್ಚಿ ಹೋಗಿ ರಸ್ತೆ ಕಡಿತಗೊಳ್ಳುವ ಅಪಾಯವಿದೆ.

ಗುಡ್ಡದಿಂದ ಜಾರಿದ ಮನೆಗಳು!
ಸಂಪಾಜೆ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಜೋಡುಪಾಲದಲ್ಲಿ ಶುಕ್ರವಾರ ಗುಡ್ಡ ಭಾಗದಲ್ಲಿನ ಮೂರು ಮನೆಗಳು ಕೆಳಭಾಗಕ್ಕೆ ಜಾರಿವೆ. ಬಸಪ್ಪ ಎಂಬ ವ್ಯಕ್ತಿ ಮಣ್ಣಿನಡಿಯಲ್ಲಿ ಸಿಲುಕಿರುವ ಮಾಹಿತಿ ದೊರೆತಿದೆ. 90ಕ್ಕೂ ಅಧಿಕ ಮಂದಿ ಮೊಣ್ಣಂಗೇರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಶಾಲೆ ಕುಸಿಯುವ ಅಪಾಯದಲ್ಲಿರುವ ಕಾರಣ, ಸುರಕ್ಷತೆಯ ಭೀತಿ ಮೂಡಿದೆ.

ಜೋಡುಪಾಲ ಗುಡ್ಡೆ ಭಾಗದಲ್ಲಿ ಇರುವ ಮನೆಗಳಿಂದ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ಜೋಡುಪಾಲದಿಂದ ಸಂತ್ರಸ್ತರನ್ನು ದ.ಕ. ಗಡಿಭಾಗದ ಕಲ್ಲುಗುಂಡಿಗೆ ಕರೆ ತರಲೆಂದು ತೆರಳಿದ್ದ ಆಮ್ನಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಚಾಲಕ ಅದೃಷ್ಟವಶಾತ್‌ ಪಾರಾಗಿದ್ದಾರೆ. 

ಸಂಪಾಜೆ-ಮಡಿಕೇರಿ ರಾ.ಹೆ. ಕಡಿತಗೊಂಡು ಜೋಡುಪಾಲ, ಕಾಟಕೇರಿ ಬಳಿ ಗುಡ್ಡ ಕುಸಿದು ಜನರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ಜೋಡುಪಾಲದಿಂದ ಮಡಿಕೇರಿ-ಸುಳ್ಯ ಭಾಗಕ್ಕೆ ವಾಹನ ಓಡಾಟ ಇಲ್ಲದೆ ತೆರಳಲು ಸಾಧ್ಯವಾಗುತ್ತಿಲ್ಲ. ಮಧ್ಯ ಭಾಗದಲ್ಲಿ ಸಿಲುಕಿಕೊಂಡಿರುವ ಕುಟುಂಬಗಳು ದಿನವಿಡಿ ತತ್ತರಿಸಿದೆ. ರಕ್ಷಣಾ ಕಾರ್ಯ ಮುಂದುವರಿದಿದಿದೆ.

5ನೇ ದಿನವೂ ಬಂದ್‌
ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ಶುಕ್ರವಾರವು ಬಂದ್‌ ಆಗಿದೆ. ಸೋಮವಾರ ಮದೆನಾಡು ಬಳಿ ಗುಡ್ಡ ಕುಸಿತದ ಕಾರಣ ಮಣ್ಣು ತೆರವು ಕಾರ್ಯಕ್ಕಾಗಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ನಿರಂತರ ಮಳೆಯಿಂದ ಇದೇ ರಸ್ತೆಯ ಜೋಡುಪಾಲ ಮೊದಲಾದೆಡೆ ಗುಡ್ಡ ಕುಸಿದು ಮತ್ತಷ್ಟು ಅಪಾಯ ಸಂಭವಿಸಿತ್ತು. ಇದರಿಂದ ಸಂಪಾಜೆ ಬಳಿ ಗೇಟು ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು. ಶುಕ್ರವಾರ ಕೂಡ ಜೋಡುಪಾಲ ಮೊದಲಾದೆಡೆ ಗುಡ್ಡ ಕುಸಿದ ಕಾರಣ ಸಂಚಾರ ಪುನಾರರಂಭಗೊಂಡಿಲ್ಲ. ಸುಳ್ಯ ಭಾಗದಿಂದ ಕೊಡಗು ಹಾಗೂ ಕೊಡಗಿನಿಂದ ಸುಳ್ಯ, ಮಂಗಳೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಬಂದ್‌ ಆದ ಕಾರಣ, ಎರಡು ಜಿಲ್ಲೆಗಳ ನಡುವೆ ದ್ವೀಪದಂತ ಸ್ಥಿತಿ ಉಂಟಾಗಿದೆ.

ಮೃತನ ಸಹೋದರರ ಪರದಾಟ
ಕಾಟಕೇರಿಯಲ್ಲಿ ಭೂಕುಸಿತದಿಂದ ಗುರುವಾರ ಮೂವರು ಮೃತಪಟ್ಟಿದ್ದರು. ಮೃತರ ಪೈಕಿ ಪವನ್‌ ಅವರ ಇಬ್ಬರು ಸಹೋದರರು ಮಂಗಳೂರಿನಿಂದ ಸ್ಥಳಕ್ಕೆ ತೆರಳುವ ಸಲುವಾಗಿ ಸಂಪಾಜೆ ರಸ್ತೆಯಲ್ಲಿ ಬಂದಿದ್ದರು. ಆದರೆ ವಾಹನ ಸಂಪರ್ಕ ಸಾಧ್ಯವಾಗದೇ ಅವರು ತಾಸುಗಟ್ಟಲೇ ಸಂಪಾಜೆಯಲ್ಲಿ ಬಾಕಿಯಾಗಿದ್ದರು. ಕೇರ್ಪಡ ದೇವಸ್ಥಾನದ ಬಳಿ ಗುಡ್ಡ ಕುಸಿದಿರುವುದು. 

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.