ಪಯಸ್ವಿನಿ ನದಿ ಪ್ರವಾಹ ಮಟ್ಟ ಇಳಿಕೆ 


Team Udayavani, Aug 18, 2018, 10:49 AM IST

18-agust-4.jpg

ಸುಳ್ಯ : ಪಯಸ್ವಿನಿ ನದಿಯಲ್ಲಿ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದ್ದ ನೀರಿನ ಮಟ್ಟ ಶುಕ್ರವಾರ ಇಳಿಕೆ ಕಂಡಿದೆ. ಆದರೆ ಕೊಡಗು-ದ.ಕ. ಗಡಿಭಾಗದ ಅರಂತೋಡು, ಸಂಪಾಜೆ ಪರಿಸರದಲ್ಲಿ ವರುಣನ ಅಬ್ಬರ ತೀವ್ರ ಸ್ವರೂಪ ಪಡೆದಿದ್ದು, ಅನೇಕ ಭಾಗದಲ್ಲಿ ಗುಡ್ಡ ಕುಸಿತ, ಮನೆ ಕುಸಿತ, ಪ್ರಾಣ ಹಾನಿಯಂತಹ ಘಟನೆಗಳು ಸಂಭವಿಸಿವೆ.

ಅರಂತೋಡಿನ ದಿನೇಶ್‌ ಕಿರ್ಲಾಯ ಅವರ ನಿರ್ಮಾಣ ಹಂತದಲ್ಲಿನ ಮನೆಗೆ ಶುಕ್ರವಾರ ಮುಂಜಾನೆ ಗುಡ್ಡ ಕುಸಿದು ಮನೆ ಸಂಪೂರ್ಣ ಧರಾಶಾ ಯಿಯಾಗಿದೆ. 10 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಉಂಟಾಗಿರುವ ಮಾಹಿತಿ ಇದೆ. ಇದೇ ಪರಿಸರದಲ್ಲಿ ನಾಲ್ಕಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಗುರುವಾರ ರಾತ್ರಿ ಧಾರಕಾರ ಮಳೆಯ ಪರಿಣಾಮ ಕಡಬ ಸಂಪರ್ಕದ ಅಲೆಕ್ಕಾಡಿ-ಎಡಮಂಗಲ ರಸ್ತೆಯ ಕರಿಂಬಿಲ ಬಳಿ ರಸ್ತೆ ಕುಸಿತದ ಭೀತಿ ಉಂಟಾಗಿದೆ. ಅಮರಮುಟ್ನೂರು ಗ್ರಾಮದ ಕೊರತ್ಯಡ್ಕ ನಾರ್ಣಪ್ಪ ಗೌಡ ಅವರ ಮನೆ ಸಮೀಪದ ಧರೆ ಕುಸಿದಿದೆ. ಕಳಂಜ ಗ್ರಾಮದ ಕೊಲ್ಲರ್ನೊಜಿ ಕೋಟೆ, ಕೆದಿಲ ರಸ್ತೆಯ ಶೇಡಿಕಜೆ, ಕೋಟೆ ಮಧ್ಯೆ ರಸ್ತೆ ಕುಸಿತದ ಭೀತಿ ಉಂಟಾಗಿದೆ. ದೊಡ್ಡತೋಟ-ಮರ್ಕಂಜ ರಸ್ತೆಯ ನಳಿಯಾರಿನಲ್ಲಿ ಚರಂಡಿ ಮುಚ್ಚಿ ಹೋಗಿ ರಸ್ತೆ ಕಡಿತಗೊಳ್ಳುವ ಅಪಾಯವಿದೆ.

ಗುಡ್ಡದಿಂದ ಜಾರಿದ ಮನೆಗಳು!
ಸಂಪಾಜೆ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಜೋಡುಪಾಲದಲ್ಲಿ ಶುಕ್ರವಾರ ಗುಡ್ಡ ಭಾಗದಲ್ಲಿನ ಮೂರು ಮನೆಗಳು ಕೆಳಭಾಗಕ್ಕೆ ಜಾರಿವೆ. ಬಸಪ್ಪ ಎಂಬ ವ್ಯಕ್ತಿ ಮಣ್ಣಿನಡಿಯಲ್ಲಿ ಸಿಲುಕಿರುವ ಮಾಹಿತಿ ದೊರೆತಿದೆ. 90ಕ್ಕೂ ಅಧಿಕ ಮಂದಿ ಮೊಣ್ಣಂಗೇರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಆದರೆ ಶಾಲೆ ಕುಸಿಯುವ ಅಪಾಯದಲ್ಲಿರುವ ಕಾರಣ, ಸುರಕ್ಷತೆಯ ಭೀತಿ ಮೂಡಿದೆ.

ಜೋಡುಪಾಲ ಗುಡ್ಡೆ ಭಾಗದಲ್ಲಿ ಇರುವ ಮನೆಗಳಿಂದ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ಜೋಡುಪಾಲದಿಂದ ಸಂತ್ರಸ್ತರನ್ನು ದ.ಕ. ಗಡಿಭಾಗದ ಕಲ್ಲುಗುಂಡಿಗೆ ಕರೆ ತರಲೆಂದು ತೆರಳಿದ್ದ ಆಮ್ನಿ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಚಾಲಕ ಅದೃಷ್ಟವಶಾತ್‌ ಪಾರಾಗಿದ್ದಾರೆ. 

ಸಂಪಾಜೆ-ಮಡಿಕೇರಿ ರಾ.ಹೆ. ಕಡಿತಗೊಂಡು ಜೋಡುಪಾಲ, ಕಾಟಕೇರಿ ಬಳಿ ಗುಡ್ಡ ಕುಸಿದು ಜನರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ಜೋಡುಪಾಲದಿಂದ ಮಡಿಕೇರಿ-ಸುಳ್ಯ ಭಾಗಕ್ಕೆ ವಾಹನ ಓಡಾಟ ಇಲ್ಲದೆ ತೆರಳಲು ಸಾಧ್ಯವಾಗುತ್ತಿಲ್ಲ. ಮಧ್ಯ ಭಾಗದಲ್ಲಿ ಸಿಲುಕಿಕೊಂಡಿರುವ ಕುಟುಂಬಗಳು ದಿನವಿಡಿ ತತ್ತರಿಸಿದೆ. ರಕ್ಷಣಾ ಕಾರ್ಯ ಮುಂದುವರಿದಿದಿದೆ.

5ನೇ ದಿನವೂ ಬಂದ್‌
ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ 275 ಶುಕ್ರವಾರವು ಬಂದ್‌ ಆಗಿದೆ. ಸೋಮವಾರ ಮದೆನಾಡು ಬಳಿ ಗುಡ್ಡ ಕುಸಿತದ ಕಾರಣ ಮಣ್ಣು ತೆರವು ಕಾರ್ಯಕ್ಕಾಗಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ನಿರಂತರ ಮಳೆಯಿಂದ ಇದೇ ರಸ್ತೆಯ ಜೋಡುಪಾಲ ಮೊದಲಾದೆಡೆ ಗುಡ್ಡ ಕುಸಿದು ಮತ್ತಷ್ಟು ಅಪಾಯ ಸಂಭವಿಸಿತ್ತು. ಇದರಿಂದ ಸಂಪಾಜೆ ಬಳಿ ಗೇಟು ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು. ಶುಕ್ರವಾರ ಕೂಡ ಜೋಡುಪಾಲ ಮೊದಲಾದೆಡೆ ಗುಡ್ಡ ಕುಸಿದ ಕಾರಣ ಸಂಚಾರ ಪುನಾರರಂಭಗೊಂಡಿಲ್ಲ. ಸುಳ್ಯ ಭಾಗದಿಂದ ಕೊಡಗು ಹಾಗೂ ಕೊಡಗಿನಿಂದ ಸುಳ್ಯ, ಮಂಗಳೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಬಂದ್‌ ಆದ ಕಾರಣ, ಎರಡು ಜಿಲ್ಲೆಗಳ ನಡುವೆ ದ್ವೀಪದಂತ ಸ್ಥಿತಿ ಉಂಟಾಗಿದೆ.

ಮೃತನ ಸಹೋದರರ ಪರದಾಟ
ಕಾಟಕೇರಿಯಲ್ಲಿ ಭೂಕುಸಿತದಿಂದ ಗುರುವಾರ ಮೂವರು ಮೃತಪಟ್ಟಿದ್ದರು. ಮೃತರ ಪೈಕಿ ಪವನ್‌ ಅವರ ಇಬ್ಬರು ಸಹೋದರರು ಮಂಗಳೂರಿನಿಂದ ಸ್ಥಳಕ್ಕೆ ತೆರಳುವ ಸಲುವಾಗಿ ಸಂಪಾಜೆ ರಸ್ತೆಯಲ್ಲಿ ಬಂದಿದ್ದರು. ಆದರೆ ವಾಹನ ಸಂಪರ್ಕ ಸಾಧ್ಯವಾಗದೇ ಅವರು ತಾಸುಗಟ್ಟಲೇ ಸಂಪಾಜೆಯಲ್ಲಿ ಬಾಕಿಯಾಗಿದ್ದರು. ಕೇರ್ಪಡ ದೇವಸ್ಥಾನದ ಬಳಿ ಗುಡ್ಡ ಕುಸಿದಿರುವುದು. 

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.