ಪೊಲೀಸರ “ಆಪದ್ಭಾಂಧವ’ ಮೆಕ್ಯಾನಿಕ್ ಬಾಲಣ್ಣ
45 ವರ್ಷಗಳಿಂದ ಹಗಲಿರುಳು ಪೊಲೀಸ್ ವಾಹನಗಳ ದುರಸ್ತಿ; ಅಧಿಕಾರಿಗಳಿಂದ ಮೆಚ್ಚುಗೆ
Team Udayavani, Nov 23, 2021, 7:30 AM IST
ಮಹಾನಗರ: ಕಳೆದ 45 ವರ್ಷಗಳಿಂದ ರಾತ್ರಿ ಹಗಲೆನ್ನದೆ ತುರ್ತು ಸಂದರ್ಭಗಳಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ವಾಹನಗಳನ್ನು ದುರಸ್ತಿ ಮಾಡಿಕೊಡುವ ಅತ್ತಾವರದ ಮೆಕ್ಯಾನಿಕ್ ತಿಲಕ್ ಕುಮಾರ್(ಬಾಲಣ್ಣ) ಅವರು “ಆಪದ್ಭಾಂಧವ’ ಎನಿಸಿಕೊಂಡಿದ್ದಾರೆ.
ಪೊಲೀಸರ ವಾಹನದಲ್ಲಿ ಏನೇ ದೋಷವುಂಟಾದರೂ ಹೆಚ್ಚಾಗಿ ಕರೆ ಹೋಗುವುದೇ ಬಾಲಣ್ಣ ಅವರಿಗೆ. ಅದೆಷ್ಟೋ ಬಾರಿ ತಡರಾತ್ರಿ ಕೂಡ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಪೊಲೀಸರ ವಾಹನಗಳನ್ನು ದುರಸ್ತಿಗೊಳಿಸಿದ್ದಾರೆ. ಕೆಲವು ಬಾರಿ ಡೀಸೆಲ್ ಖಾಲಿಯಾಗಿ ರಸ್ತೆಯಲ್ಲಿ ನಿಂತಿದ್ದ ಪೊಲೀಸ್ ವಾಹನಗಳಿಗೆ ಡೀಸೆಲ್ ತಂದು ಕೊಟ್ಟಿದ್ದಾರೆ. ಬಾಲಣ್ಣ ಅವರ ಕೆಲಸವನ್ನು ಕಂಡ ಪೊಲೀಸರು ಇಲಾಖೆಯ ವಾಹನವಲ್ಲದೆ ಅವರ ಖಾಸಗಿ ಬಳಕೆಯ ವಾಹನವನ್ನು ಕೂಡ ಅವರಿಂದಲೇ ದುರಸ್ತಿ ಮಾಡಿಸುತ್ತಾರೆ.
ಕೇವಲ ಆ್ಯಂಬುಲೆನ್ಸ್ಗಳನ್ನು ಕೂಡ ಅನೇಕ ಬಾರಿ ದುರಸ್ತಿ ಮಾಡಿಕೊಟ್ಟಿದ್ದಾರೆ. ವೈದ್ಯರು, ಸಾರ್ವಜನಿಕ ವಾಹನಗಳನ್ನು ಕೂಡ ದುರಸ್ತಿ ಮಾಡಿಕೊಟ್ಟು ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಕೊರೊನಾ-ಲಾಕ್ಡೌನ್ ಸಂದರ್ಭದಲ್ಲಿಯೂ ಅನೇಕ ಮಂದಿ ಇವರಿಂದ ತುರ್ತುಸೇವೆ ಪಡೆದುಕೊಂಡಿದ್ದಾರೆ. ಕೇವಲ ದುರಸ್ತಿ ಮಾತ್ರವಲ್ಲದೆ ವಾಹನಗಳನ್ನು ಪಕ್ಕಕ್ಕೆ ಎತ್ತಿ ಇಡಬೇಕಾದ ಸಂದರ್ಭ ಬಂದರೆ ಜನ ಸೇರಿಸಿ ಆ ಕೆಲಸವನ್ನೂ ಮಾಡಿಕೊಡುತ್ತಿದ್ದಾರೆ. ಒಟ್ಟಿನಲ್ಲಿ ಬಾಲಣ್ಣ ಅವರು ಅವರಿಂದ ಸಹಾಯ ಬಯಸಿದವರನ್ನು ಅರ್ಧದಾರಿಯಲ್ಲಿ ಬಿಟ್ಟು ಹೋಗುವುದಿಲ್ಲ.
ಹಣದಾಸೆ ಇಲ್ಲ
ಅತ್ತಾವರದಲ್ಲಿರು ಶ್ರೀ ಶಕ್ತಿ ಮೋಟಾರ್ ವರ್ಕ್ಸ್ ನನ್ನ ಗ್ಯಾರೇಜ್. ನಾನು ಅದರಲ್ಲಿ ದುಡಿದು ಸಂಪಾದಿಸುತ್ತೇನೆ. ಆದರೆ ತುರ್ತು ಸಂದರ್ಭಗಳಲ್ಲಿ ಕರೆ ಬಂದಾಗ ಹಣದ ಆಸೆಯಿಂದ ಮಾಡುವುದಿಲ್ಲ. ಅದೆಷ್ಟೋ ಮಂದಿಯಿಂದ ಹಣ ಪಡೆಯದೇ ವಾಪಸ್ ಬಂದಿದ್ದೇನೆ. ಸಹಾಯ ಮಾಡಿದ ತೃಪ್ತಿ ನನಗಿದೆ. ಹಿಂದೆ ಪೊಲೀಸ್ ಇಲಾಖೆಯಲ್ಲಿ ಕೆಲವೇ ವಾಹನಗಳಿದ್ದವು. ಒಂದು ವಾಹನ ಕೆಟ್ಟು ಹೋದರೂ ಪೊಲೀಸರು ಪರದಾಡುವಂತಹ ಸ್ಥಿತಿ ಇತ್ತು. ಆಗ ಅದೇ ವಾಹನವನ್ನು ದುರಸ್ತಿ ಮಾಡುವುದು ಅನಿವಾರ್ಯವಿತ್ತು. ಈಗಲೂ ಪೊಲೀಸರ ವಾಹನವೆಂದರೆ ಸ್ವಲ್ಪವೂ ತಡಮಾಡದೆ ಹೋಗಿ ದುರಸ್ತಿ ಮಾಡಿಕೊಡುತ್ತಿದ್ದೇನೆ. ಅವರು ಕೂಡ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ ಎನ್ನುತ್ತಾರೆ ಬಾಲಣ್ಣ.
ಆಯುಕ್ತರ ಮೆಚ್ಚುಗೆ
ಇತ್ತೀಚೆಗೆ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ತಮ್ಮ ಖಾಸಗಿ ವಾಹನವನ್ನು ದುರಸ್ತಿಗೆಂದು ಬಾಲಣ್ಣ ಅವರ ಬಳಿ ತೆಗೆದುಕೊಂಡು ಹೋದಾಗ ಬಾಲಣ್ಣ ಅವರ ಸೇವೆಯ ಬಗ್ಗೆ ತಿಳಿಯಿತು. ಆಯುಕ್ತರು ಬಾಲಣ್ಣ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ