“ಬಡವರ ಕಷ್ಟಕ್ಕೆ ಸ್ಪಂದನೆ ಶ್ಲಾಘನೀಯ’
ಬಿರುವೆರ್ ಕುಡ್ಲ: ಆರೋಗ್ಯ ಶಿಬಿರ
Team Udayavani, Apr 22, 2019, 6:06 AM IST
ಬೆಳ್ತಂಗಡಿ: ಯುವ ಸಮುದಾಯ ವನ್ನು ಒಗ್ಗೂಡಿಸಿದ ಬಿರುವೆರ್ ಕುಡ್ಲ ತಂಡ ಸಮಾಜದ ಕಡುಬಡವರ ಕಷ್ಟಗಳಿಗೆ ಸ್ಪಂದಿಸು ತ್ತಿರುವ ಕೆಲಸ ಪ್ರಶಂಸನೀಯ ಎಂದು ಜಿ.ಪಂ. ಸದಸ್ಯ ಧರಣೇಂದ್ರ ಕುಮಾರ್ ಹೇಳಿದರು.
ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದ ವತಿಯಿಂದ ರವಿವಾರ ಸರಕಾರಿ ಮಾದರಿ ಶಾಲೆ ವಠಾರದಲ್ಲಿ ಹಮ್ಮಿಕೊಂಡ ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಶಿಬಿರ ಅವರು ಉದ್ಘಾಟಿಸಿ, ಸಮಾಜದ ಎಲ್ಲ ಸಮುದಾಯದವರು ಶಿಬಿರದ ಪ್ರಯೋಜನ ಪಡೆಯುವಂತಾಗಲಿ ಎಂದು ಹಾರೈಸಿದರು.
ಮಾಜಿ. ಜಿ.ಪಂ. ಸದಸ್ಯ ಶೈಲೇಶ್ ಕುಮಾರ್ ಮಾತನಾಡಿ, ನಾರಾಯಣಗುರು ತತ್ತÌದಂತೆ ಆರೋಗ್ಯ ದೃಷ್ಟಿಯಿಂದ ಅಸಹಾಯಕರಿಗೆ ನೆರವು ನೀಡಬೇಕಿರುವುದು ನಮ್ಮ ಕರ್ತವ್ಯ. ಜಾತಿ, ಮತ ಭೇದವಿಲ್ಲದೆ ಎಲ್ಲರ ಸೇವೆ ನಿರಂತರವಾಗಿ ಸಾಗಲಿ ಎಂದು ಹೇಳಿದರು.
ಶಿಕ್ಷಕ ಕೇಶವ ಬಂಗೇರ ಮಾತನಾಡಿ, ಆರೋಗ್ಯ ಶಿಬಿರಗಳು ಹಳ್ಳಿಗಳಿಗೆ ಅವಶ್ಯ ವಿದೆ ಎಂಬುದನ್ನು ಅರಿತು ಬಿರುವೆರ್ ಕುಡ್ಲ ನೀಡುತ್ತಿರುವ ಸೇವೆ ಉತ್ತಮ. ಗ್ರಾಮೀಣರು ತಮ್ಮ ಆರೋಗ್ಯ ಸಮಸ್ಯೆಯನ್ನು ವೈದ್ಯ ರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗ ಲಿದೆ. ನಾರಾಯಣಗುರು ಸಂದೇಶದಂತೆ ಸಾಮಾಜಿಕ ಜಾಗೃತಿ ಮೈಗೂಡಿಸಿಕೊಂಡು ಹಮ್ಮಿಕೊಂಡ ಈ ಶಿಬಿರದ ಲಾಭ ಎಲ್ಲರಿಗೂ ಸಿಗಲಿ ಎಂದರು.
ಬಿರುವೆರ್ ಕುಡ್ಲ ಬೆಳಂಗಡಿ ಘಟಕದ ಗೌರವ ಸಲಹೆಗಾರ ಸಂಪತ್ ಬಿ. ಸುವರ್ಣ, ಸಂಘದ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಯೇನಪೊಯಾ ವೈದ್ಯರಾದ ಡಾ| ಭರತ್, ಡಾ| ಅಜೀಜ್, ಡಾ| ತನೀÌರ್ ಮತ್ತಿತರರು ಉಪಸ್ಥಿತರಿದ್ದರು.ವಿನೋದ್ ಚಾರ್ಮಾಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಶಿಬಿರದಲ್ಲಿ ದಂತ ತಪಾಸಣೆ-ಚಿಕಿತ್ಸೆ, ನೇತ್ರ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಸ್ತ್ರೀರೋಗ ಸಮಸ್ಯೆ, ರಕ್ತ ದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ಮಾಡಿಸಲಾಯಿತು. ನೂರಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ