ಲಾೖಲದಲ್ಲಿ ಅಪಘಾತ: ಸಂಚಾರಕ್ಕೆ ಅಡ್ಡಿ
Team Udayavani, Mar 31, 2018, 10:00 AM IST
ಬೆಳ್ತಂಗಡಿ: ಲಾೖಲ ಬಳಿ ಶುಕ್ರವಾರ ಸಂಜೆ ಸಂಭವಿಸಿದ ಅಪಘಾತದಿಂದ ಸುಮಾರು ಅರ್ಧ ತಾಸು ಸಂಚಾರಕ್ಕೆ ಅಡಚಣೆ ಉಂಟಾಯಿತು. ಸಕಲೇಶಪುರದ ಚಿರಾಗ್ ಅವರು ಕಾರಿನಲ್ಲಿ ಮಂಗಳೂರು ಕಡೆಯಿಂದ ಚಾರ್ಮಾಡಿ ಕಡೆಗೆ ತೆರಳುತ್ತಿದ್ದರು. ಕಾರು ಲಾೖಲ ಸೇತುವೆ ಸಮೀಪ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಬೇಲಿಗೆ ಢಿಕ್ಕಿ ಹೊಡೆದು ಬಿದ್ದಿದೆ. ಆಗ ಲಾೖಲ ಕಡೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಖಾಸಗಿ ಬಸ್ ಕಾರಿಗೆ ತಾಗಿದೆ. ಪರಿಣಾಮ ಕಾರು ಒಂದು ಸುತ್ತು ತಿರುಗಿ ನಿಂತಿದ್ದು, ಎಡಬದಿಯ ಚಕ್ರ ಕಳಚಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಟ್ರಾಫಿಕ್ ಜಾಮ್
ಇಕ್ಕಟ್ಟಾದ ಜಾಗವಾದ್ದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಸುಮಾರು 1 ಕಿ.ಮೀ. ಉದ್ದದ ವಾಹನ ಸಾಲು ಕಂಡುಬಂತು. ತತ್ಕ್ಷಣ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ವಾಹನವನ್ನು ಬದಿಗೆ ಸರಿಸಿದರು. ಏಕಮುಖ ಸಂಚಾರ ಆರಂಭವಾದರೂ ಸಮರ್ಪಕವಾಗಿರಲಿಲ್ಲ. ಈ ವೇಳೆ ಕಾರಿನ ಒಂದು ಚಕ್ರ ಮುರಿದಿದ್ದರೂ, ಸಾರ್ವಜನಿಕರು ಸೇರಿ ಕಾರನ್ನು ತಳ್ಳಿ ಬದಿಗೆ ಸರಿಸಿ, ಸುಗಮ ಸಂಚಾರಕ್ಕೆ ಸಹಕರಿಸಿದರು.
ಸಂಚಾರಿ ಠಾಣೆಯಲ್ಲಿಲ್ಲ ಕ್ರೇನ್
ಬೆಳ್ತಂಗಡಿ ಸಂಚಾರ ಠಾಣೆ ವಾರದ ಹಿಂದೆ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿದ್ದರೂ ಸಮರ್ಪಕ ವ್ಯವಸ್ಥೆಗಳಿಲ್ಲ. ವಾಹನ ಬದಿಗೆ ಸರಿಸಲು ಕ್ರೇನ್, ಟೋಯಿಂಗ್ ವಾಹನ ಇಲ್ಲಿಲ್ಲ. ಇಬ್ಬರೂ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ