Mangaluru ಕಲಾಸೇವೆಯ ಹಿರಿಯ ನಾಟ್ಯಾಚಾರ್ಯ ಪ್ರೇಮನಾಥ್‌


Team Udayavani, Oct 13, 2023, 11:54 PM IST

Mangaluru ಕಲಾಸೇವೆಯ ಹಿರಿಯ ನಾಟ್ಯಾಚಾರ್ಯ ಪ್ರೇಮನಾಥ್‌

ಮಂಗಳೂರು: ಕರಾವಳಿಯಲ್ಲಿ ಭರತನಾಟ್ಯದಲ್ಲಿ ಸುದೀರ್ಘ‌ ಕಲಾಸೇವೆ ಹಾಗೂ ಅನನ್ಯ ಸಾಧನೆಗಳನ್ನು ಮೆರೆದು ಕಣ್ಮರೆಯಾದವರು ಕರ್ನಾಟಕ ಕಲಾಶ್ರೀ ನಾಟ್ಯಾಚಾರ್ಯ ಗುರು ಬಿ. ಪ್ರೇಮನಾಥ್‌.

1936ರ ಜ.1ರಂದು ಮಂಗಳೂರಿನ ಉರ್ವದಲ್ಲಿ ಜನಿಸಿದ ಅವರು ಆರಂಭ ದಲ್ಲಿ ಮಾಸ್ಟರ್‌ ವಿಟ್ಠಲ್‌ ಅವರಲ್ಲಿ ಭರತ ನಾಟ್ಯ ಅಭ್ಯಾಸ ಮಾಡಿದ್ದರು. ಕಮಲಾ ಲಕ್ಷ್ಮಣ್‌ ಅವರ ಭರತನಾಟ್ಯ ಪ್ರದರ್ಶನ ವೀಕ್ಷಿಸಿದ ಅವರಿಗೆ ಅದು ಮನಸ್ಸಿನಲ್ಲಿ ಅಚ್ಚೊತ್ತಿತು.

ಹೆಚ್ಚಿನ ಸಾಧನೆಗಾಗಿ ಕೇರಳದ ತ್ರಿಪುಣಿತುರೈ ಶ್ಯಾಡೋ ಗೋಪಿನಾಥರ ಬಳಿ ಅಭ್ಯಾಸಕ್ಕೆ ತೆರಳಿದರು. ಆದರೆ ಅದು ಕಥಕ್ಕಳಿ ತರಬೇತಿಯಾಗಿತ್ತು. ಆದರೆ ಅಲ್ಲೇ ಶ್ಯಾಡೋ ಅವರ ಮಿತ್ರ ಗುರು ರಾಜರತ್ನಂ ಪಿಳ್ಳೈ ಅವರ ಭರತನಾಟ್ಯ ಸಂಯೋಜನೆಯನ್ನು ಕಂಡರು. ತಾನು ಅರಸುತ್ತ ಬಂದ ನೃತ್ಯ ಪ್ರಕಾರ ಇದೇ ಎಂದು ಅರಿವಾಯಿತು.

ಗೋಪಿನಾಥರಲ್ಲಿ ಅವರು ಮನದ ಹಂಬಲವನ್ನು ತಿಳಿಸಿದರು. ಅವರ ಶಿಫಾರಸಿನಂತೆ ಕೇರಳದ ಶೋರ್ನೂರಿನಲ್ಲಿ ಇರುವ ರಾಜರತ್ನಂ ಪಿಳ್ಳೈ ಅವರ ಮನೆಗೆ ತೆರಳಿ ಗುರುಶಿಷ್ಯ ಪರಂಪರೆಯಲ್ಲಿ ನೃತ್ಯಾ ಭ್ಯಾಸ ಪ್ರಾರಂಭಿಸಿದರು.

ಹೀಗೆ ಆರಂಭವಾದ ಕಠಿನ ಅಭ್ಯಾಸವನ್ನು ಗುರುಗಳು ಮಂಗಳೂರಿನ ಶಿಷ್ಯನ ಮನೆಗೂ ಬಂದು ಮುಂದುವರಿಸಿದರು. ಹೀಗೆ ಪಂದನಲ್ಲೂರು ಶೈಲಿಯ ಭರತನಾಟ್ಯ ಅಭ್ಯಾಸವನ್ನು ಹಲವು ವರ್ಷಗಳ ಕಠಿನ ಪರಿಶ್ರಮದಿಂದ ಕರಗತ ಮಾಡಿಕೊಂಡರು. ಪಂದನಲ್ಲೂರು ಪಾಣಿ ಹಾಗೂ ಗುರು ರಾಜರತ್ನಂ ಪಿಳ್ಳೈ ಅವರು ಮಂಗಳೂರಿಗೆ ಪರಿಚಯಿಸಲ್ಪಟ್ಟರು.

1954ರಿಂದ ಭರತನಾಟ್ಯ ಕಲಾ ಶಿಕ್ಷಕರಾಗಿ ಜೀವನ ಆರಂಭಿಸಿದ ಅವರು 1961ರಲ್ಲಿ ಗುರುಗಳ ಶಾಲೆಯ ಹೆಸರಿನಲ್ಲೇ ಲಲಿತ ಕಲಾ ಸದನ ಎಂಬ ನೃತ್ಯ ಸಂಗೀತ ತಾಳವಾದ್ಯಗಳ ವಿದ್ಯಾಲಯ ಆರಂಭಿಸಿದರು. ಬಿಎ ಬಿಎಡ್‌ ಪದವೀಧರರಾಗಿದ್ದ ಪ್ರೇಮನಾಥರು 1954ರಿಂದ 1994ರ ವರೆಗೆ ಸಂತ ಅಲೋಶಿಯಸ್‌ ಪ್ರೌಢಶಾಲೆ ಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಪತ್ನಿ ವನಜಾಕ್ಷಿ ಅವರು ಲಲಿತ ಕಲಾಸದನಕ್ಕೆ ಅಮೂಲ್ಯ ಸೇವೆ ನೀಡಿದ್ದಾರೆ. ಮಕ್ಕಳಾದ ವಿದ್ವಾನ್‌ ಸುದರ್ಶನ್‌, ವೃತ್ತಿಯಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿದ್ದರೂ, ತಂದೆ ಸ್ಥಾಪಿಸಿರುವ ಸಂಸ್ಥೆಯಲ್ಲಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಪುತ್ರಿಯರಾದ ನಯನಾ ಸತ್ಯನಾರಾಯಣ್‌ ಮತ್ತು ವಿದುಷಿ ಪ್ರತಿಮಾ ಅವರು ನೃತ್ಯದಲ್ಲಿ ವಿದ್ವತ್‌ ಪದವೀಧರೆಯರು ಮತ್ತು ನೃತ್ಯ ಶಿಕ್ಷಕಿಯರು.

1997ರಲ್ಲಿ ಶೃಂಗೇರಿ ಮಹಾ ಸಂಸ್ಥಾನದಿಂದ “ನೃತ್ಯ ಕಲಾಸಾಗರ’ ಬಿರುದು, 1998ರಲ್ಲಿ ಮೈಸೂರಿನ ನೃತ್ಯ ಕಲಾ ಪರಿಷತ್‌ನ “ನೃತ್ಯ ವಿದ್ಯಾನಿಧಿ’, 2001ರ ಅಖಿಲ ಭಾರತ ನೃತ್ಯ ಸಮಾವೇಶದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯರಿಂದ “ನೃತ್ಯ ಕಲಾ ಪ್ರಭಾಕರ’ ಬಿರುದು ಪಡೆದಿದ್ದರು. 2003ರಲ್ಲಿ “ಕರ್ನಾಟಕ ಕಲಾಶ್ರೀ’ ಬಿರುದು ಗೌರವ ಪ್ರಶಸ್ತಿ ನೀಡಿದೆ. 2004ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. 2023ರ ಅ. 1ರಂದು ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.