ಶಬರಿಮಲೆಯ ಮಂಡಲ, ಮಕರ ಉತ್ಸವ: ಭಕ್ತರಿಗೆ ಮುಕ್ತ ಪ್ರವೇಶ
Team Udayavani, Oct 15, 2022, 9:56 AM IST
ಕುಂಬಳೆ : ಶಬರಿಮಲೆಯಲ್ಲಿ ಈ ವರ್ಷ ಮಂಡಲ, ಮಕರ ಉತ್ಸವದ ವೇಳೆ ಭಕ್ತರಿಗೆ ಯಾವುದೇ ನಿಯಂತ್ರಣವಿಲ್ಲದೆ ಪ್ರವೇಶ ನೀಡಲಾಗುವುದೆಂದು ಪತ್ತನಂತಿಟ್ಟ ಜಿಲ್ಲಾಧಿಕಾರಿ ಡಾ|ದಿವ್ಯಾ ಎಸ್. ಅಯ್ಯರ್ ಹೇಳಿದ್ದಾರೆ.
ಶಬರಿಮಲೆ ಉತ್ಸವಕ್ಕೆ ಸಂಬಂಧಿಸಿದಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಇಲಾಖೆಯ ಪ್ರಮುಖರ ಅವಲೋಕನ ಸಭೆಯಲ್ಲಿ ಅವರು ಈ ವಿಷಯ ಹೇಳಿದರು. ಈ ವರ್ಷ ಅಧಿಕ ಸಂಖ್ಯೆಯಲ್ಲಿ ಅಯ್ಯಪ್ಪ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ನಿಲಯ್ಕಲ್, ಪಂಪಾ, ಸನ್ನಿಧಾನ ಎಂಬೆಡೆಗಳಲ್ಲಿನ ಶೌಚಾಲಯ ಕಾಂಪ್ಲೆಕ್ಸ್ ತೆರೆಯಬೇಕು.
ಪಂಪಾ ತ್ರಿವೇಣಿಯಲ್ಲಿ ಅಪಘಾತ ಉಂಟಾಗದಂತೆ ಬಾರಿಕೇಡ್ ಸ್ಥಾಪಿಸಬೇಕು. ನಿಲಯ್ಕಲ್ ಸಹಿತ 12 ಕಡೆ ವೆರ್ಚುವಲ್ ಕ್ಯೂ, ಮುಂಗಡ ಬುಕ್ಕಿಂಗ್ ಸೌಲಭ್ಯ ಇರಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ : ಮಾಜಿ ಮುಖ್ಯ ನ್ಯಾಯಮೂರ್ತಿಯ ಗುಂಡಿಕ್ಕಿ ಹತ್ಯೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?