ಸಿರಿಬಾಗಿಲು: ಮುಂದುವರಿದ ಆಪರೇಶನ್ ಹೆಬ್ಬಂಡೆ
ಕುಸಿಯುತ್ತಿದೆ ಬಂಡೆ, ಬಿದ್ದ ಮಣ್ಣು ತೆರವಿಗೆ 3 ದಿನ ಬೇಕು
Team Udayavani, Jul 23, 2019, 5:31 AM IST
ಸೋಮವಾರ ಸ್ಫೋಟ ನಡೆಸಿ ಬಂಡೆಗಲ್ಲಿನ ಭಾಗವನ್ನು ತೆರವುಗೊಳಿಸಲಾಯಿತು.
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ- ಸಕಲೇಶಪುರ ರೈಲು ಮಾರ್ಗದ ಮಣಿಬಂಡ ಎಂಬಲ್ಲಿ ಹಳಿಗೆ ಉರುಳಲು ಸಿದ್ಧಗೊಂಡ ಬಂಡೆಗಲ್ಲು ತೆರವು ಕಾರ್ಯಾಚರಣೆ ಸೋಮವಾರವೂ ನಡೆಯಿತು.
ಪ್ರತಿಕೂಲ ಹವಾಮಾನದ ನಡುವೆ ಬಂಡೆ ಸ್ಫೋಟಿಸಿ ಪುಡಿ ಮಾಡಿ ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲ್ವೇ ವಿಭಾಗದ ಸುಮಾರು ಎಂಬತ್ತರಷ್ಟು ಮಂದಿ ಕಾರ್ಮಿಕರು ಹಿಟಾಚಿ, ಕಂಪ್ರಶರ್ ಮೂಲಕ ಕೆಲಸ ನಿರತರಾಗಿದ್ದಾರೆ. ಒಂದೆಡೆ ತೆರವು ಕಾಮಗಾರಿ ನಡೆಯುತ್ತಿದ್ದರೆ ಇನ್ನೊಂದೆಡೆ ಮತ್ತೆ ಬಂಡೆಯ ಛಿದ್ರ ಭಾಗಗಳು ಮತ್ತು ಮಣ್ಣು ಹಳಿಯ ಮೇಲೆ ಕುಸಿಯುತ್ತಿವೆ. ಇದು ಕಾರ್ಯಾ ಚರಣೆ ಮತ್ತಷ್ಟು ಮುಂದುವರಿ ಯುವ ಮುನ್ಸೂಚನೆ ನೀಡಿದೆ.
ಈಗಾಗಲೇ ಕುಸಿದಿರುವ ಮಣ್ಣು ಮತ್ತು ಕುಸಿಯಲು ಅಣಿಯಾದ ಬಂಡೆಯ ತೆರವು ಕಾರ್ಯ ಮುಗಿಸಲು ಇನ್ನೂ ಮೂರು ದಿನ ಹಿಡಿಯಬಹುದು. ಮತ್ತೂ ಭೂಕುಸಿತವಾದಲ್ಲಿ ಮತ್ತಷ್ಟು ದಿನ ಕಾಮಗಾರಿ ವಿಸ್ತರಿಸಿ ರೈಲು ಸಂಚಾರ ವಿಳಂಬವಾಗುವ ಸಾಧ್ಯತೆಯಿದೆ. ಕುಸಿತ ಪ್ರಮಾಣ ಗಮನಿಸಿದರೆ ಇನ್ನು ಒಂದು ವಾರ ಕಾಲ ಸಂಚಾರ ಪುನರಾರಂಭ ಸಾಧ್ಯ ವಾಗದ ಮಾತು.
ಅಡಚಣೆ ನಿವಾರಿಸಿ ಹಳಿ ಯನ್ನು ಸುಸ್ಥಿತಿಗೆ ತರುವ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ತೆರವು ಆದಂತೆ ಮತ್ತೆ ಕುಸಿತ ಆಗುತ್ತಲೇ ಇರುವ ಕಾರಣ ಯಾವಾಗ ಕೆಲಸ ಮುಗಿಯ ಬಹುದು ಎಂಬುದನ್ನು ಖಚಿತ ವಾಗಿ ಈಗಲೇ ಹೇಳಲು ಸಾಧ್ಯ ವಿಲ್ಲ ಎಂದು ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ರೈಲ್ವೇ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ತು ಬಾರಿ ಸ್ಫೋಟ
ಕಂಪ್ರಸರ್ ಬಳಸಿ ಬಂಡೆಗಲ್ಲು ಪುಡಿ ಮಾಡುವ ಕೆಲಸ ನಡೆಯುತ್ತಿದ್ದು, ಸೋಮವಾರ ಮೂರು ಬಾರಿ ಬಂಡೆ ಸ್ಫೋಟಿಸಲಾಗಿದೆ. ಇದುವರೆಗೆ ಸುಮಾರು ಹತ್ತು ಬಾರಿ ಸ್ಫೋಟಕ ಸಿಡಿಸಿ ಬಂಡೆ ಪುಡಿ ಮಾಡಲಾಗಿದೆ. ಕಾರ್ಯಾಚರಣೆ ಹಗಲು ಮತ್ತು ರಾತ್ರಿ ಎರಡೂ ಪಾಳಿಯಲ್ಲಿ ನಡೆಯುತ್ತಿದೆ. ಭಾರೀ ಮಳೆ ಆಗುತ್ತಿರುವುದರಿಂದ ನಿರೀಕ್ಷಿತ ವೇಗದಲ್ಲಿ ಕೆಲಸ ಮಾಡಲಾಗುತ್ತಿಲ್ಲ. ರಾತ್ರಿ ಕಾಮಗಾರಿ ನಡೆಸಲು ಬೆಳಕಿನ ಸಮಸ್ಯೆಯೂ ಇದೆ. ಕಿರು ಜನರೇಟರ್ ಬಳಸಿ ಕಾಮಗಾರಿ ನಡೆಸಲಾಗುತ್ತಿದೆ. ಇಕ್ಕಟ್ಟಾಗಿರುವ ಈ ಜಾಗದಿಂದ ತೆರವು ಮಾಡಿದ ಮಣ್ಣು -ಕಲ್ಲು ಹಾಕಲು ಜಾಗದ ಕೊರತೆ ಎದುರಾಗಿದೆ.
ಯಂತ್ರಗಳಿಗೆ ಇಂಧನ ಮತ್ತು ಕಾರ್ಮಿಕರಿಗೆ, ಅಧಿಕಾರಿಗಳಿಗೆ ಆಹಾರ ಇತ್ಯಾದಿಗಳನ್ನು ನೆಟ್ಟಣ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಟ್ರಾಲಿ ಮೂಲಕ ಕೊಂಡೊಯ್ಯಲಾಗುತ್ತಿದೆ. ಬಂಡೆ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜು.24ರ ವರೆಗೆ ಮಂಗಳೂರು -ಬೆಂಗಳೂರು ನಡುವಣ ಎಲ್ಲ ಹಗಲು ಸಂಚಾರಿ ರೈಲುಗಳನ್ನು ರದ್ದು ಮಾಡಲಾಗಿದ್ದು, ರಾತ್ರಿ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ