ಸಂತಾನ ಪ್ರಾಪ್ತಿಗಾಗಿ ಕೊಂದಪ್ಪಡೆ ದೇಗುಲಕ್ಕೆ ಹರಕೆ
Team Udayavani, Aug 10, 2018, 2:35 AM IST
ವಿಶೇಷ ವರದಿ – ಆಲಂಕಾರು: ರಾಮಕುಂಜ ಗ್ರಾಮದ ಕೊಂದಪ್ಪಡೆ ಅನಂತ ಪದ್ಮನಾಭ ದೇವಾಲಯದ ವಾರ್ಷಿಕ ಜಾತ್ರೆ ಆಟಿ ಅಮಾವಾಸ್ಯೆಯಂದು ನಡೆಯಲಿದ್ದು, ಸಂತಾನ ಭಾಗ್ಯ ಪ್ರಾಪ್ತಿಗಾಗಿ ದಂಪತಿಗಳು ಆಗಮಿಸಿ ಪ್ರಾರ್ಥಿಸುವುದು ವಿಶೇಷ. ದೇವಸ್ಥಾನದ ಎದುರಿನ ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ, ಪ್ರಾರ್ಥನೆ ಸಲ್ಲಿಸಿದ ಎಷ್ಟೋ ದಂಪತಿಗೆ ಸಂತಾನ ಭಾಗ್ಯ ಒದಗಿದ ನಿದರ್ಶನಗಳು ಇಲ್ಲಿವೆ. ಸಂತಾನ ಪ್ರಾಪ್ತಿಯಾದ ದಂಪತಿಯೂ ಇದೇ ದಿನ ಬಂದು ಹರಕೆ ಸಲ್ಲಿಸುತ್ತಾರೆ.
ಅನಂತ ಪದ್ಮನಾಭ ದೇವಾಲಯವು ಪರ್ಲತ್ತಾಯ ಕುಟುಂಬದ ಆರಾಧ್ಯ ದೇಗುಲ ವಾಗಿದ್ದರೂ ಈಗ ಸಂತಾನ ಪ್ರಾಪ್ತಿಯ ವಿಶೇಷ ಬೇಡಿಕೆ ಇಟ್ಟುಕೊಂಡು ಹಾಸನ, ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು ಕಡೆಯಿಂದಲೂ 5 ಸಾವಿರಕ್ಕೂ ಹೆಚ್ಚು ಭಕ್ತರು ಬರುತ್ತಾರೆ. ಬೆಳಗ್ಗೆ 11 ಗಂಟೆಯಿಂದ ಸಂತಾನ ಗೋಪಾಲಕೃಷ್ಣ ಜಪದೊಂದಿಗೆ ಈ ವಿಶೇಷ ಪ್ರಾರ್ಥನೆ ಆರಂಭವಾಗುತ್ತದೆ. ಮಧ್ಯಾಹ್ನ 12 ಗಂಟೆಗೆ ವಿಶೇಷ ಪೂಜೆ ನಡೆಯುತ್ತದೆ.
ಒದ್ದೆ ಬಟ್ಟೆಯಲ್ಲೇ ಪ್ರಾರ್ಥನೆ
ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತ ದಂಪತಿ ದೇವಾಲಯದ ಎದುರಿನ ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ, ಒದ್ದೆ ಬಟ್ಟೆಯಲ್ಲೇ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಬೇಕು. ಅರ್ಚಕರು ದೇವಾಲಯದಿಂದ ಪ್ರಸಾದದೊಂದಿಗೆ ವಿಶೇಷ ಅರ್ಚನೆ ಮಾಡಿದ ಅಕ್ಕಿಯನ್ನು ದಂಪತಿಗೆ ನೀಡುತ್ತಾರೆ.ದಂಪತಿಗಳು 3ದಿನ ತಮ್ಮ ಮನೆಯಲ್ಲಿ ಪ್ರತೀ ದಿನ ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು, ಈ ಅಕ್ಕಿಯನ್ನು ತಾವು ಸೇವಿಸುವ ಆಹಾರದಲ್ಲಿ ಬೆರೆಸಿ ಸ್ವೀಕರಿಸಬೇಕು. ಹೀಗೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ನಂಬಿಕೆ. ಪ್ರತಿ ವರ್ಷ ನೂರಕ್ಕೂ ಅಧಿಕ ಭಕ್ತರು ಸಂತಾನದ ಅಪೇಕ್ಷೆಯಿಂದ ಹರಕೆ ಹೊರುತ್ತಾರೆ.
ಹರಕೆ ರೂಪದಲ್ಲಿ ತೊಟ್ಟಿಲು- ಮಗು
ಈ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿಗೆ ತೊಟ್ಟಿಲು ಮಗು ಹರಕೆ ವಿಶೇಷವಾಗಿದೆ. ಪ್ರಾರ್ಥನೆಯಂತೆ ಸಂತಾನ ಪಡೆದ ದಂಪತಿ ಬೆಳ್ಳಿಯ ತೊಟ್ಟಿಲು, ಮಗು, 4 ಕುಡ್ತೆ ತುಪ್ಪ, ಒಂದು ಸೇರು ಅಕ್ಕಿ, ಒಂದು ತೆಂಗಿನಕಾಯಿಯನ್ನು ದೇವಸ್ಥಾನಕ್ಕೆ ಸಲ್ಲಿಸಬೇಕು. ಕರು ಹಾಕದ ದನಗಳಿದ್ದರೆ ಕ್ಷೇತ್ರದಲ್ಲಿ ನಾಗನ ಹೆಡೆ ಸಮರ್ಪಿಸಿದರೆ ಅವುಗಳೂ ಕರು ಹಾಕುತ್ತವೆ ಎಂಬ ನಂಬಿಕೆ. ಈ ಬಾರಿ ಆ. 11ರಂದು ಶನಿವಾರ ಆಟಿ ಅಮಾವಾಸ್ಯೆ ವಿಶೇಷ ಪೂಜೆ, ಜಾತ್ರೆ ನಡೆಯಲಿದ್ದು, ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು