![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
ರಂಗಮನೆಯಲ್ಲಿ ರಾಜ್ಯಮಟ್ಟದ ಮಕ್ಕಳ ಬೇಸಗೆ ಶಿಬಿರ ಆರಂಭ
Team Udayavani, Apr 16, 2018, 2:48 PM IST
![16-April-18.jpg](https://www.udayavani.com/wp-content/uploads/2018/04/16/16-April-18.jpg)
ಸುಳ್ಯ : ಹಳೆಗೇಟು ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ಎ. 15ರಿಂದ 22ರ ತನಕ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ಬೇಸಗೆ ಶಿಬಿರಕ್ಕೆ ರವಿವಾರ ಚಾಲನೆ ನೀಡಲಾಯಿತು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನಿರ್ದೇಶಕ ಅಕ್ಷಯ್ ಕೆ.ಸಿ. ಉದ್ಘಾಟಿಸಿ, ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡಬೇಕು ಹೊರತು ಬಲವಂತದ ಕಲಿಕೆ ಸಲ್ಲದು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಅವರು ಹುಟ್ಟೂರಿಗೆ ಕೊಡುಗೆ ನೀಡಬೇಕು. ರಂಗ ನಿರ್ದೇಶಕ ಜೀವನ್ ರಾಂ ಕಲಾವಿದರಿಗೆ ರೋಲ್ ಮಾಡೆಲ್ ಇದ್ದಂತೆ. ಅವರಿಂದ ನಾನು ಸಾಕಷ್ಟು ಅರಿತುಕೊಂಡಿದ್ದೇನೆ ಎಂದರು.
ಮುಖ್ಯ ಅತಿಥಿ ಕಳಾಸಪುರ ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲ ಎಚ್.ಎಂ. ನಾಗರಾಜ್ ಮಾತನಾಡಿ, ಹುಟ್ಟು-ಸಾವಿನ ಮಧ್ಯೆ ಇರುವ ಬದುಕಿನ ದಿನಗಳನ್ನು ಸದ್ವಿನಿಯೋಗ ಮಾಡಿಕೊಂಡು, ಸಾಧನೆ ತೋರಬೇಕು ಎಂದರು. ಸಭಾಧ್ಯಕ್ಷತೆ ವಹಿಸಿದ ನಿವೃತ್ತ ಕ್ಷೇತ್ರಾಭಿವೃದ್ಧಿಕಾರಿ ಎಂ. ಮೀನಾಕ್ಷಿ ಗೌಡ ಮಾತನಾಡಿ, ಮಕ್ಕಳ ಬಾಲ್ಯ ಅಮೂಲ್ಯವಾದದು. ಅದು ಮುರುಟಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.
ಕುಂದಾಪುರದ ರಂಗ ನಿರ್ದೇಶಕ ಸತ್ಯನಾರಾಯಣ ಕೊಡೇರಿ ಶುಭ ಹಾರೈಸಿದರು. ಶಿಬಿರದ ನಿರ್ದೇಶಕ ಜೀವನ್ರಾಂ ಸುಳ್ಯ, ಶಿಬಿರದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ, ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದ ನಾನಾ ಭಾಗದ 135 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂದರು. ಮಮತಾ ರವೀಶ್ ವಂದಿಸಿದರು. ಮೌಲ್ಯ ಜೀವನ್ರಾಂ ನಿರೂಪಿಸಿದರು.
ಟಾಪ್ ನ್ಯೂಸ್
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.