ಉಪ ನೋಂದಣಿ ಕಚೇರಿ ಸ್ಥಳಾಂತರ ಶೀಘ್ರ
Team Udayavani, Jul 11, 2018, 2:35 AM IST
ಪುತ್ತೂರು: ಮಿನಿ ವಿಧಾನಸೌಧ ಉದ್ಘಾಟನೆಗೊಂಡು ನಾಲ್ಕು ವರ್ಷ ಕಳೆದರೂ ಅಲ್ಲಿಗೆ ಸ್ಥಳಾಂತರಗೊಳ್ಳದೆ ಪ್ರತ್ಯೇಕವಾಗಿದ್ದ ಹಾಗೂ ಸಾರ್ವಜನಿಕರ ಬಹುಮುಖ್ಯ ಬೇಡಿಕೆಯಾಗಿದ್ದ ಪುತ್ತೂರು ಉಪನೋಂದಣಿ ಕಚೇರಿ ಸ್ಥಳಾಂತರ ವಿಚಾರ ಕಡೆಗೂ ಮುಗಿಯುತ್ತಿದೆ.
ಶಾಸಕ ಸಂಜೀವ ಮಠಂದೂರು ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸುವಂತೆ ವಿಧಾನಸಭೆಯಲ್ಲಿ ಪ್ರಸ್ತಾವಿಸಿ ಸರಕಾರವನ್ನು ಆಗ್ರಹಿಸಿ, ಈಗಾಗಲೇ ಆಗಿರುವ ಆದೇಶವನ್ನು ಜಾರಿಮಾಡದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಪುತ್ತೂರಿನ ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸುವಂತೆ ಸದನದಲ್ಲಿಯೇ ಆದೇಶ ನೀಡಿದ್ದಾರೆ.
ತಲುಪಿದೆ ಆಯುಕ್ತರ ಆದೇಶ
ಸಚಿವರ ಆದೇಶದಂತೆ ಉಪನೋಂದಣಿ ಕಚೇರಿಯನ್ನು ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರದ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು ಹೊರಡಿಸಿರುವ ಆದೇಶ ಪತ್ರ ಶನಿವಾರ ಪುತ್ತೂರು ಕಚೇರಿಗೆ ತಲುಪಿದೆ. ಆ ಮೂಲಕ ಹಳೆಯ ಕಾಲದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಪನೋಂದಣಿ ಕಚೇರಿ ಸ್ಥಳಾಂತರಗೊಳ್ಳುತ್ತಿದೆ.
ಸಾರ್ವಜನಿಕ ಒತ್ತಡ
ಮಿನಿ ವಿಧಾನಸೌಧಕ್ಕೆ ಇತರ ಎಲ್ಲ ಸರಕಾರಿ ಕಚೇರಿಗಳು ಸ್ಥಳಾಂತರಗೊಂಡಿದ್ದರೂ ಉಪನೋಂದಣಿ ಕಚೇರಿಯ ಸ್ಥಳಾಂತರ ವಿವಿಧ ಕಾರಣಗಳಿಂದ ವಿಳಂಬವಾಗುತ್ತಾ ಬಂದಿತ್ತು. ನೋಂದಣಿಗೆ ಸಂಬಂಧಿಸಿದ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ದೃಷ್ಟಿಯಿಂದ ಹಾಗೂ ವಾರ್ಷಿಕ ಸುಮಾರು 13 ಕೋಟಿ ರೂ.ಗೂ ಮಿಕ್ಕಿ ಆದಾಯ ತರುವ ಕಚೇರಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಉಪ ನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು ಎಂದು ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿ ಸಹಿತ ಸಾರ್ವಜನಿಕ ವಲಯದಿಂದ ತೀವ್ರ ಒತ್ತಡ ವ್ಯಕ್ತವಾಗಿತ್ತು. ತಾ.ಪಂ., ಕೆಡಿಪಿ ಸಭೆ ಸಹಿತ ಎಲ್ಲ ಸಭೆಗಳಲ್ಲೂ ವಿಚಾರ ಪ್ರತಿ ಬಾರಿಯೂ ಪ್ರಸ್ತಾವವಾಗುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಇಲ್ಲಿಗೆ ಭೇಟಿ ಆದೇಶಿಸಿದರೂ ಉಪ ನೋಂದಣಿ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಂಡಿರಲಿಲ್ಲ.
ಅಭಿವೃದ್ಧಿಯೂ ಆಗಿಲ್ಲ
ಹಾಲಿ ಉಪನೋಂದಣಿ ಕಚೇರಿ ಇರುವ ಸ್ಥಳದ ಪಹಣಿ ಪತ್ರ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಹೆಸರಿನಲ್ಲಿದೆ. ಪಕ್ಕದಲ್ಲೇ ಸರಕಾರಿ ಆಸ್ಪತ್ರೆಯೂ ಇರುವುದರಿಂದ ಅದರ ಅಭಿವೃದ್ಧಿಗಾಗಿ ಆ ಜಾಗವನ್ನು ಬಳಸಿಕೊಳ್ಳಬೇಕು ಎನ್ನುವ ಒತ್ತಾಯವೂ ಇದೆ. ಈ ಮಧ್ಯೆ 2014ರಲ್ಲಿ ಮುದ್ರಾಂಕ ಆಯುಕ್ತರ ಸೂಚನೆಯಂತೆ ಜಿಲ್ಲಾ ನೋಂದಣಾಧಿಕಾರಿಯವರು ಭೇಟಿ ನೀಡಿ ಕಚೇರಿ ದುರಸ್ತಿಗೊಳಿಸಲು ಸೂಚಿಸಿದಂತೆ 15.40 ಲಕ್ಷ ರೂ. ಕ್ರಿಯಾಯೋಜನೆ ತಯಾರಿಸಿ ಕಳುಹಿಸಲಾಗಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಈಗ ಸ್ಥಳಾಂತರದ ಅಧಿಕೃತ ಆದೇಶ ಸರಕಾರದ ಕಡೆಯಿಂದಲೇ ಬಂದಿರುವುದರಿಂದ ಅಭಿವೃದ್ಧಿ ವಿಚಾರ ಬದಿಗೆ ಸರಿಯಲಿದೆ.
ಶೀಘ್ರ ಸ್ಥಳಾಂತರ
ಮಿನಿ ವಿಧಾನಸೌಧದಲ್ಲಿ ಉಪನೋಂದಣ ಕಚೇರಿಗೆ ಜಾಗ ಗುರುತಿಸಿ ರಿಪೋರ್ಟ್ ಹಾಕಿದ್ದೆವು. ಸರಕಾರದ ಕಡೆಯಿಂದ ಆದೇಶ ಬಂದಿದೆ. ತಿಂಗಳ ಒಳಗಾಗಿ ಉಪನೋಂದಣಿ ಕಚೇರಿ ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳ್ಳಲಿದೆ.
– ಎಚ್.ಕೆ. ಕೃಷ್ಣಮೂರ್ತಿ, ಸಹಾಯಕ ಆಯುಕ್ತ, ಪುತ್ತೂರು
ಸಚಿವರಿಂದ ಆದೇಶ
ಪುತ್ತೂರು ಮಿನಿ ವಿಧಾನಸೌಧದ ಸ್ಥಳಾಂತರಕ್ಕೆ ಸಂಬಂಧಿಸಿದ ಗೊಂದಲಗಳನ್ನು ಸದನದಲ್ಲಿ ಪ್ರಸ್ತಾವಿಸಿದ್ದೆ ಮತ್ತು ಈಗಾಗಲೇ ಮಾಡಲಾಗಿರುವ ಆದೇಶವನ್ನು ಜಾರಿಗೊಳಿಸಿಲ್ಲ ಎಂದು ಗಮನಕ್ಕೆ ತಂದಿದ್ದೆ. ಈ ವಿಚಾರ ಅರಿತುಕೊಂಡ ಕಂದಾಯ ಸಚಿವರು ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಗೊಳಿಸುವಂತೆ ಸದನದಲ್ಲೇ ಆದೇಶ ನೀಡಿದ್ದಾರೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಸಿದ್ಧತೆ
ಉಪನೋಂದಣಿ ಕಚೇರಿ ಸ್ಥಳಾಂತರಕ್ಕೆ ಸಂಬಂಧಪಟ್ಟಂತೆ ಶನಿವಾರ ಆಯುಕ್ತರಿಂದ ಆದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್ ಅವರಿಗೆ ಸ್ವಾಧೀನತಾ ಪತ್ರ ನೀಡಿದ್ದೇವೆ. ಮಿನಿ ವಿಧಾನಸೌಧದಲ್ಲಿನ ಕಚೇರಿಯಲ್ಲಿನ ಸಿದ್ಧತೆ, ವೈರಿಂಗ್, ಶಿಫ್ಟಿಂಗ್ಗೆ ಸಂಬಂಧಪಟ್ಟಂತೆ ಕೆಲಸಗಳಿಗಾಗಿ ಸಹಾಯಕ ಕಮಿಷನರ್ಗೆ ವಿನಂತಿಸಲಾಗಿದೆ.
– ಕವಿತಾ, ಹಿರಿಯ ನೋಂದಣಾಧಿಕಾರಿ, ಪುತ್ತೂರು
— ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ