ಸುರತ್ಕಲ್: ಇಂಡಿಯನ್ ಸೋಶಿಯಲ್ ಸರ್ವಿಸ್ ವಾರ್ಷಿಕೋತ್ಸವ
Team Udayavani, May 7, 2019, 6:06 AM IST
ಮಹಾನಗರ: ಇಂಡಿಯನ್ ಸೋಶಿಯಲ್ ಸರ್ವಿಸ್ ಮತ್ತು ನವಭಾರತ್ ಕ್ರಿಕೆಟರ್ ಸುರತ್ಕಲ್ ಇದರ 24ನೇ ವಾರ್ಷಿಕೋತ್ಸವವು ಸುರತ್ಕಲ್ನ ಕರ್ನಾಟಕ ಸೇವಾ ವೃಂದದ ವೇದಿಕೆಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ 130 ವಿದ್ಯಾರ್ಥಿ ಗಳಿಗೆ ಪುಸ್ತಕ ವಿತರಿಸಲಾಯಿತು ಮತ್ತು ಧರ್ಮಶಾಸ್ತ್ರ ಚೆಂಡೆ ಬಳಗ ಕುಲಶೇಖರ ಮಂಗಳೂರು ಇವರಿಂದ ಚೆಂಡೆ ಪ್ರದರ್ಶನ ಜರಗಿತು.
ಖ್ಯಾತ ವಾಗ್ಮಿ ವಿಟuಲ್ ನಾಯಕ್ ವಿಟ್ಲ ಅವರು ದಿಕ್ಸೂಚಿ ಪ್ರವಚನ ನೀಡಿದರು. ಮಕ್ಕಳ ಕ್ರಿಕೆಟ್ ಪಂದ್ಯಾಟ ಜರಗಿತು. ವಿಜೇತರುಪ್ರಥಮ ಸ್ಥಾನ ನವಭಾರತ್ ಕ್ರಿಕೆಟರ್ ಸುರತ್ಕಲ್, ದ್ವಿತೀಯ ಸ್ಥಾನ ಫ್ರೆಂಡ್ಸ್ ಸದಾಶಿವ ನಗರ ತಂಡ ಪಡೆಯಿತು.
ನಿವೃತ್ತ ಅಕೌಂಟ್ ಆಫೀಸರ್ ವಿಲಿಯಂ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಂತೋಷ್ ಪೈ, ಗಣೇಶ್ ಆಚಾರ್ಯ, ಅಬ್ದುಲ್ ಹಮೀದ್, ಶ್ರುತಿ ಗಣೇಶ್, ಜೆರಾಲ್ಡ್ ಫೆರ್ನಾಂಡಿಸ್, ಅಬ್ದುಲ್ ಸಲಾಂ, ಸಂಸ್ಥೆಯ ಅಧ್ಯಕ್ಷ ಎಂ. ಕಬೀರ್, ಲಕ್ಷ್ಮಣ ಮಧ್ಯ, ಶೇಕ್ ಅಬ್ದುಲ್, ಪ್ರಜ್ವಲ್, ಝುಬೇರ್, ರಕ್ಷಿತ್ ಉಪಸ್ಥಿತರಿದ್ದರು. ಶ್ರೀನಿವಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.