ಮಂಗಳೂರಿನಲ್ಲಿ ಟೀಂ ಮೋದಿ ಸಂಘಟನೆಗೆ ಚಾಲನೆ
Team Udayavani, Dec 17, 2018, 10:39 AM IST
ಮಂಗಳೂರು: ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶದೊಂದಿಗೆ ಮಂಗಳೂರಿನಲ್ಲಿ “ಟೀಂ ಮೋದಿ ಸಂಘಟನೆ’ ರವಿವಾರ ನಗರದಲ್ಲಿ ಚಾಲನೆ ಪಡೆಯಿತು. ಹಂಪನಕಟ್ಟೆಯಿಂದ ಕೇಂದ್ರ ಮೈದಾನದ ವರೆಗೆ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿತ್ತು.
ಕಾಮನ್ವೆಲ್ತ್ ಚಿನ್ನ ಪುರಸ್ಕೃತ ಕ್ರೀಡಾಪಟು ಪ್ರದೀಪ್ ಕುಮಾರ್ ಅವರು, ಟೀಮ್ ಮೋದಿ ಜಿಲ್ಲಾ ಸಂಪರ್ಕ ಪ್ರಮುಖ್ ಭಾಸ್ಕರ್ ಮಂಗಳೂರು ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಟೀಂ ಮೋದಿ ವಕ್ತಾರ ಅರುಣ್ ಶೇಟ್ ಮಾತನಾಡಿ, 2014ರ ಹಿಂದೆ ಮಾಧ್ಯಮಗಳಲ್ಲಿ ಸಾಲು ಸಾಲು ಹಗರಣಗಳ ಸರಮಾಲೆಯೇ ಕಣ್ಣ ಮುಂದೆ ಬರುತ್ತಿತ್ತು. ಆದರೆ ಇಂದು ಭಾರತ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ ಎಂದರು.
ಕೇಂದ್ರ ಸರಕಾರದ ಮುದ್ರಾ ಯೋಜನೆ ಫಲಾನುಭವಿ ಸುಮಾ ಕೋಡಿಕಲ್ ಮಾತನಾಡಿ, ಮೋದಿ ಯವರು ಮತ್ತೂಮ್ಮೆ ಪ್ರಧಾನಿಯಾಗಿ ಮತ್ತಷ್ಟು ಜನರ ಜೀವನ ಹಸನಾಗ ಬೇಕು. ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಮುದ್ರಾ ಯೋಜನೆಯಿಂದಾಗಿ ಜಿಮ್ ಆರಂಭಿಸಿರುವ ಪ್ರದೀಪ್ ಕುಮಾರ್ ಮಾತನಾಡಿ, ವಿಶ್ವ ಮಟ್ಟದಲ್ಲಿ
ಭಾರತದ ವರ್ಚಸ್ಸನ್ನು ಮೋದಿ ವೃದ್ಧಿಸಿದ ರೀತಿ ಶ್ಲಾಘನೀಯ ಎಂದರು. ಸಮಿತ್, ಸುಶಾಂತ್, ಅಶೋಕ್, ದಯಾ ಆಕಾಶ್, ಚೈತ್ರಾ, ಭವ್ಯಾ, ಜಾಥಾದ ಮುಂದಾಳತ್ವ ವಹಿಸಿ ಕೊಂಡಿದ್ದರು. ಶ್ರೀಪತಿ ಸ್ವಾಗತಿಸಿದರು. ಮೋದಿ ಸಾಧನೆಗಳ ಪ್ರಚಾರ ಸಂಬಂಧ ನಗರದ ಮೀನು ಮಾರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮೀನುಗಾರ ಮಹಿಳೆಯರು ಚಾಲನೆ ನೀಡಿದರು. ಮೋದಿ ಬಾಲ್ಯ ದಲ್ಲಿ ಚಹಾ ಮಾರುತ್ತಿದ್ದುದನ್ನು ನೆನಪಿಸುವ ಅಂಗವಾಗಿ ಚಹಾ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
BJP ಅಧಿಕಾರದ ರಾಜ್ಯಗಳಲ್ಲಿ ಎಸ್ಸಿಪಿ, ಟಿಎಸ್ಪಿ ಕಾಯ್ದೆ ಜಾರಿ ಮಾಡಿಲ್ಲ: ಸಿಎಂ
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!