ನಿಯಂತ್ರಣ ತಪ್ಪಿದ ಕೆ.ಎಸ್‌.ಆರ್‌.ಟಿ.ಸಿ. ಮೂಡುಬಿದಿರೆ ಘಟಕ


Team Udayavani, Dec 17, 2018, 10:43 AM IST

17-december-2.gif

ಮೂಡುಬಿದಿರೆ: ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಂಗಳೂರು 1ನೇ ವಿಭಾಗಕ್ಕೆ ಸೇರಿದ ಮೂಡುಬಿದಿರೆ ನಿಯಂತ್ರಣ ಘಟಕ ‘ಬಿಂದು’ ಗೆ ಬೀಗ ಜಡಿಯಲಾಗಿದೆ. ‘ವಿಚಾರಣೆ’ ಫ‌ಲಕವಿದ್ದರೂ ಯಾರಲ್ಲಿ ವಿಚಾರಿಸಬೇಕು ಎಂಬುದು ತಿಳಿಯುತ್ತಿಲ್ಲ.

ಚಾರಿತ್ರಿಕ ನಗರಿ, ಧಾರ್ಮಿಕ ಕೇಂದ್ರ, ಶಿಕ್ಷಣ ಕಾಶಿ, ಉದ್ಯಮ ಕೇಂದ್ರವಾಗಿ ಬೆಳೆಯುತ್ತಿರುವ ಮೂಡುಬಿದಿರೆ ತಾಲೂಕಾಗಿ ಘೋಷಿಸಲ್ಪಟ್ಟು ಒಂದು ವರ್ಷವೇ ಕಳೆದಿದೆ. ಶಿಕ್ಷಣಕ್ಕಾಗಿ ಇಲ್ಲಿಗೆ ಆಗಮಿಸುವ ವಿದ್ಯಾರ್ಥಿಗಳನ್ನು ನೋಡಿ ಹೋಗಲೆಂದು ಆಗಾಗ ದೂರ ದೂರಿನಿಂದ ಬರುವ ಪೋಷಕರು ಧರ್ಮಸ್ಥಳ, ಉಡುಪಿ, ಕೊಲ್ಲೂರು, ಕಟೀಲು ಮೊದಲಾದ ಧಾರ್ಮಿಕ ಕೇಂದ್ರಗಳಿಗೂ ಭೇಟಿ ನೀಡುತ್ತಾರೆ. ಇದಕ್ಕಾಗಿ ಸಹಸ್ರಾರು ಮಂದಿ ಸರಕಾರಿ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಮುಂಬಯಿ, ಬೆಂಗಳೂರು ಸಹಿತ ನಾಡಿನ ವಿವಿಧೆಡೆಗಳಿಗೆ ಮೂಡುಬಿದಿರೆ ಮೂಲಕ ಹಾದುಹೋಗುವ 60ರಷ್ಟು ಸರಕಾರಿ ಬಸ್‌ ಗಳಿವೆ. ಆದರೆ ಬಸ್‌ ಎಲ್ಲಿ ನಿಲ್ಲುತ್ತದೆ, ಯಾವಾಗ ಬರುತ್ತದೆ ಎಂಬುದನ್ನು ಯಾರಲ್ಲಿ ವಿಚಾರಿಸುವುದು ಎಂದು ತಿಳಿಯದೆ ಗೊಂದಲಳಗಾಗುತ್ತಿರುವುದು ಕಂಡು ಬರುತ್ತಿದೆ.

ಇಲ್ಲಿರುವ ಟಿ.ಸಿ. ಪಾಯಿಂಟ್‌ ಎದುರಲ್ಲೇ ತಂಪುಪಾನೀಯಗಳ ಬಾಟಲಿಗಳು ಗೋಚರಿಸುತ್ತಿವೆ, ಯಾವುದೋ ಇನ್ನೊಂದು ಖಾಸಗಿ ಫಲಕ ರಾರಾಜಿಸುತ್ತಿದೆ. ಹೀಗಾಗಿ ಪ್ರಯಾಣಿಕರು ಗೊಂದಲಕ್ಕೊಳಗಾಗುವಂತಾಗಿದೆ. ಈ ಘಟಕದಲ್ಲಿ ಇದ್ದದ್ದು ಓರ್ವ ಸಂಚಾರ ನಿಯಂತ್ರಕ. ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗುವಾಗ ಬೆಳಗಿನ ಕೆಲವು ಬಸ್‌ಗಳು ಬಂದು ಹೋಗಿರುತ್ತವೆ. ಸಂಜೆ ಬೀಗ ಜಡಿದು ಹೋದ ಬಳಿಕ ಬಸ್‌ಗಳು ನಗರದ ಹೊರವಲಯದಲ್ಲೇ ಸಂಚರಿಸಿ ಬಿಡುತ್ತವೆ. ಧರ್ಮಸ್ಥಳದಿಂದ ಉಡುಪಿಯತ್ತ ಸಾಗುವ ಬಸ್‌ ಗಳು ಜಿ.ವಿ. ಪೈ ಸ್ಮಾರಕ ಆಸ್ಪತ್ರೆ- ಹಳೆ ಪೊಲೀಸ್‌ ಠಾಣೆಯಾಗಿ ನೇರ ಕಾರ್ಕಳ- ಉಡುಪಿಯತ್ತ ಸಾಗಿ ಬಿಡುತ್ತವೆ. ಉಡುಪಿಯಿಂದ ಬರುವ ಬಸ್‌ಗಳೂ ಹಾಗೆಯೇ. ಹೀಗಾಗಿ, ಸಂಚಾರ ನಿಯಂತ್ರಕರ ಕಚೇರಿ ಇರುವ ಬಸ್‌ ನಿಲ್ದಾಣದಲ್ಲಿ ಧರ್ಮಸ್ಥಳಕ್ಕೋ, ಉಡುಪಿಗೋ, ಉತ್ತರ ಕರ್ನಾಟಕದತ್ತಲೋ ಹೋಗಲು ಬಸ್ಸಿಗಾಗಿ ಕಾದು ನಿಂತವರು ಅಲ್ಲೇ ಬಾಕಿಯಾಗಿ ಪರದಾಡ ಬೇಕಾಗುತ್ತದೆ.

ರಿಂಗ್‌ ರೋಡ್‌ ಆದ ಬಳಿಕ, ಉಡುಪಿಯತ್ತ ಸಾಗುವ ಬಸ್‌ ಗಳು ನೇರ ಪಶ್ಚಿಮಕ್ಕೆ ಸಾಗಿ ರಿಂಗ್‌ ರೋಡ್‌ನ‌ಲ್ಲಿ ಸಾಗಿ ಅಲಂಗಾರು ಮೂಡುಬಿದಿರೆ ನಿಯಂತ್ರಣ ಘಟಕದಲ್ಲಿ ಬಾಗಿಲು ಹಾಕಿರುವ ವಿಚಾರಣ ಕೊಠಡಿ  ಮೂಲಕ ಕಾರ್ಕಳಕ್ಕೆ ತೆರಳುತ್ತಿವೆ.  ಹೀಗಾಗಿ ಹಳೆ ಪೊಲೀಸ್‌ ಠಾಣೆಯ ಮುಂದೆ ಜೈನ ಪೇಟೆಯಲ್ಲಿ ನಿಲ್ಲುವ ಪ್ರಯಾಣಿಕರಿಗೆ ಕೆಲವು ಬಸ್‌ ಗಳು ತಪ್ಪಿ ಹೋಗುತ್ತವೆ.

ನಿಯಂತ್ರಕರಿಲ್ಲ
ಎಲ್ಲ ಬಸ್‌ಗಳು ಈ ನಿಲ್ದಾಣಕ್ಕೆ ಬರಬೇಕಾದರೆ ದಿನದ 24 ಗಂಟೆ ಕಾರ್ಯಾಚರಿಸುವ ಅಥವಾ ಕನಿಷ್ಠ ಎರಡು ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಸಂಚಾರ ನಿಯಂತ್ರಕರು ಇರಬೇಕು. ಇರುವ ಒಬ್ಬ ನಿಯಂತ್ರಕರೂ ಈಗ ಕಾಣಿಸುತ್ತಿಲ್ಲ.

ಬಸ್‌ ನಿಲ್ಲಲೂ ಜಾಗವಿಲ್ಲ
ಈಗ ಇರುವ ಸಂಚಾರ ನಿಯಂತ್ರಣ ಘಟಕದ ಬಿಂದು ಇರುವ ಜಾಗದಲ್ಲಿ ಸರಕಾರಿ ಬಸ್‌ ಗಳ ನಿಲುಗಡೆಯಾಗಬೇಕಿದೆ. ಆದರೆ ಇಲ್ಲಿರುವ ಅವ್ಯವಸ್ಥೆಯಿಂದಾಗಿ ಈ ಜಾಗದಲ್ಲಿ ಬಸ್‌ಗಳು ನಿಲ್ಲದೆ, ರಸ್ತೆ ಬದಿಯಲ್ಲೇ ನಿಂತು ಪ್ರಯಾಣಿಕರನ್ನು ಹತ್ತಿಸಿ, ಇಳಿಸಿ ತೆರಳುತ್ತವೆ. ಹೀಗಾಗಿ ಈ ಜಾಗದಲ್ಲಿ ಖಾಸಗಿ ವಾಹನಗಳು  ಬೀಡುಬಿಟ್ಟಿವೆ. ಮೂಡುಬಿದಿರೆಯಲ್ಲಿ ಎಂದೋ ಸರಕಾರಿ ಬಸ್‌ ನಿಲ್ದಾಣ ಸ್ಥಾಪನೆಯಾಗಬೇಕಿತ್ತು. ಅದಕ್ಕಾಗಿ ಸ್ವರಾಜ್ಯ ಮೈದಾನದ ಬಳಿ ಹಾದುಹೋಗುವ ರಿಂಗ್‌ರೋಡ್‌ ಪಕ್ಕದಲ್ಲಿ ಜಾಗವನ್ನೂ ತೋರಿಸಿ ಕೊಟ್ಟಾಗಿದೆ. ಡೀಮ್ಡ್ಫಾ ರೆಸ್ಟ್‌ ನಂಥ ಸಮಸ್ಯೆಗಳನ್ನು ನೀಗಿಕೊಂಡರೆ ಸಮಸ್ಯೆ ಪರಿಹಾರವಾಗಲು ಸಾಧ್ಯ.

ಏನೆಲ್ಲ ಆಗಬೇಕು?
.ಸಂಚಾರ ನಿಯಂತ್ರಕರ ಕಚೇರಿ ಪೂರ್ಣ ಅವಧಿಗೆ ತೆರೆದಿರಬೇಕು.
. ಕನಿಷ್ಠ ಇಬ್ಬರು ನಿಯಂತ್ರಕರನ್ನು ನಿಯೋಜಿಸಬೇಕು.
. ಸರಕಾರಿ ಬಸ್‌ ನಿಲುಗಡೆಗೆ ನಿಗದಿತ ಜಾಗವನ್ನು ಪೈಂಟ್‌ ಬಳಿದು ಪ್ರತ್ಯೇಕಿಸಿ ತೋರಿಸಬೇಕು.
. ಬಸ್‌ ನಿಲ್ದಾಣ, ಡಿಪೋ ಸ್ಥಾಪನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಇಬ್ಬರ ನಿಯೋಜನೆ ಪ್ರಸ್ತಾವನೆ ಸದ್ಯಕ್ಕಿಲ್ಲ
ಇಲ್ಲಿದ್ದ ಟಿ.ಸಿ. ಭಡ್ತಿ ಹೊಂದಿವರ್ಗಾವಣೆಗೊಂಡಿದ್ದಾರೆ. ಅವರ ಸ್ಥಾನವನ್ನು ಇನ್ನಷ್ಟೇ ತುಂಬಬೇಕಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇರುವ ಪವಿತ್ರಾ ಅವರ ಕೇಸ್‌ ಕ್ಲಿಯರ್‌ ಆದ ಬಳಿಕ ಈ ಸ್ಥಾನವನ್ನು ತುಂಬಲಾಗುವುದು. ಸದ್ಯ ಈ ಹಿಂದಿನಂತೆ ಒಂದು ಸ್ಥಾನಕ್ಕೆ ಮಾತ್ರ ಅವಕಾಶ. ಇಬ್ಬರನ್ನು ನಿಯೋಜಿಸುವ ಪ್ರಸ್ತಾವನೆ ಈಗಿಲ್ಲ.
– ದೀಪಕ್‌ ಕುಮಾರ್‌,
ಭಾಗೀಯ ನಿಯಂತ್ರಣಾಧಿಕಾರಿ, ಮಂಗಳೂರು

 ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.