ತಾಂತ್ರಿಕ ವೈಫಲ್ಯ: ಗದ್ದೆಗಿಳಿದ ಬಸ್
Team Udayavani, Feb 16, 2019, 12:30 AM IST
ಹಳೆಯಂಗಡಿ: ಖಾಸಗಿ ಎಕ್ಸ್ ಪ್ರಸ್ ಬಸ್ಸೊಂದು ತಾಂತ್ರಿಕ ವೈಫಲ್ಯದಿಂದ ಡಿವೈಡರ್ ಹಾರಿ ಗದ್ದೆಗೆ ಇಳಿದ ಘಟನೆ ಪಡುಪಣಂಬೂರು ಬಳಿಯಲ್ಲಿ ಶುಕ್ರವಾರ ಸಂಭವಿಸಿದೆ.
ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಚ್ಎಂಟಿ ಬಸ್ ಪಡುಪಣಂಬೂರು ಸಮೀಪದ ಕಿರು ಸೇತುವೆಯ ಬಳಿ ಸಂಚರಿಸುತ್ತಿದ್ದಾಗ ಹಠಾತ್ತಾಗಿ ಸ್ಟೇರಿಂಗ್ ವೈಫಲ್ಯದಿಂದ ನೇರವಾಗಿ ಡಿವೈಡರ್ ಹಾರಿ ವಿರುದ್ಧ ಬದಿಯಲ್ಲಿರುವ ಸುಮಾರು 10 ಅಡಿ ಆಳದ ಗದ್ದೆಗೆ ಇಳಿದಿದೆ. ಪ್ರಯಾಣಿಕರು ಪಾರಾಗಿದ್ದಾರೆ.
ಘಟನೆ ಸಂಭವಿಸಿದಾಗ ಎದುರು ದಿಕ್ಕಿನಲ್ಲಿ ಯಾವುದೇ ವಾಹನಗಳು ಇಲ್ಲದಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸುಮಾರು ಒಂದೂವರೆ ತಾಸು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಉತ್ತರ ವಲಯ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಸುಸ್ಥಿತಿಗೆ ಸಹಕರಿಸಿದರು. ನವಯುಗ್ ಸಂಸ್ಥೆಯ ಕ್ರೇನ್ ಮೂಲಕ ಬಸ್ಸನ್ನು ಮೇಲೆತ್ತಲು ಸ್ಥಳೀಯರು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ
ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’
D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್ ನಲ್ಲಿ 6 ಬೆಡ್ ಮೀಸಲು
May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್ ಯಾತ್ರೆ
Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ