ತಲಪಾಡಿ: ಮರಳು ಅಕ್ರಮ ಸಾಗಾಟ; ಎಂಟು ಮಂದಿ ವಶಕ್ಕೆ
Team Udayavani, Sep 18, 2022, 12:03 AM IST
ಉಳ್ಳಾಲ: ಉಳ್ಳಾಲ ತಾಲೂಕು ವ್ಯಾಪ್ತಿಯ ತಲಪಾಡಿ ಬಳಿ ಮರಳು ಅಕ್ರಮ ಸಾಗಾಟವನ್ನು ಸಿಸಿಟಿವಿಯಲ್ಲಿ ಪತ್ತೆ ಹಚ್ಚಿ ಮರಳು ಸಾಗಾಟಕ್ಕೆ ಬಳಸಿದ್ದ ಎರಡು ವಾಹನ ಸಹಿತ ಎಂಟು ಮಂದಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಲ್ಲಾಡಳಿತದಿಂದ ಸಿಸಿ ಕೆಮರಾವನ್ನು ಅಳವಡಿಸಿದ್ದು, ಕೋಟೆಕಾರು ಪ.ಪಂ. ಮುಖ್ಯಾಧಿಕಾರಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಲಪಾಡಿ ಕಜೆ ನಿವಾಸಿ ರಿಯಾಝ್(26), ಕೆ.ಸಿ.ರೋಡ್ ನಿವಾಸಿ ಅಬೂಬಕ್ಕರ್(53), ಸೋಮೇಶ್ವರ ಗ್ರಾಮದ ಕುದ್ರು ಹೌಸ್ ನಿವಾಸಿ ರಘುನಾಥ್ (40), ತಲಪಾಡಿ ಚೆಕ್ಪೋಸ್ಟ್ ಬಳಿ ನಿವಾಸಿ ರಾಜೇಶ್(40), ಕೆ.ಸಿ.ರೋಡ್ ಪಂಜಳ ನಿವಾಸಿ ಮುತ್ತಾಲಿಬ್(22), ಉತ್ತರಪ್ರದೇಶದ ಅತುಲ್ (22), ರಾಮಧಾರಿ (28), ಪಂಕಜ್(24)ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಎರಡು ಪಿಕಪ್ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.