ಪೊಲೀಸರಿಗೆ ದೂರು ನೀಡಿದರೂ ಪರಿಣಾಮ ಇಲ್ಲ
Team Udayavani, Dec 17, 2017, 12:20 PM IST
ಮೂಲ್ಕಿ: ಕೆಲವು ದಿನಗಳಿಂದ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಸುರಿಯುವ ಪರಿಪಾಠ ಆರಂಭಗೊಂಡಿದೆ. ಒಂದು ಸಲ ಯಾರಾದರೂ ಒಂದು ಜಾಗದಲ್ಲಿ ಕಸ ಸುರಿಯಲು ಆರಂಭಿಸಿದರೆ ಮತ್ತೆ ನಿತ್ಯವೂ ಹಲವರು ಅದೇ ಜಾಗದಲ್ಲಿ ಕಸ ಸುರಿಯುತ್ತಾರೆ. ವಾಹನಗಳಲ್ಲಿ ಸಾಗುವ ಕಸವನ್ನು ಎಸೆದು ಹೋಗುತ್ತಾರೆ. ಇಂತಹ ಒಂದು ಕಸದ ರಾಶಿ ಹಳೆಯಂಗಡಿ ಹೆದ್ದಾರಿಯ ಪಕ್ಕದಲ್ಲಿತ್ತು.
ಅದು ಬೆಳೆಯುತ್ತಲೇ ಹೋಗಿದ್ದರಿಂದ ಪರಿಸರದಲ್ಲಿ ದುರ್ವಾಸನೆ ಹರಡಿ, ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಲಾರಂಭವಾಯಿತು. ಇದಕ್ಕೆ ಪರಿಹಾರ ರೂಪದಲ್ಲಿ ಗ್ರಾ.ಪಂ. ಕಸ ತೆರವು ಮಾಡಿದರೂ ಮತ್ತೆ ಕಸ ಎಸೆಯುವ
ಪರಿಪಾಠ ಮುಂದುವರಿದಿದೆ.
ಈ ಸ್ಥಳದಲ್ಲಿ ಸಿಸಿ ಕೆಮರಾ ಅಳವಡಿಸಿದ ಹಳೆಯಂಗಡಿ ಗ್ರಾ.ಪಂ., ಅದರಲ್ಲಿ ಕಸ ಸುರಿಯುತ್ತಿರುವ ವಾಹನದ ದೃಶ್ಯಾವಳಿಯ ದಾಖಲೆಯೊಂದಿಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪರಿಣಾಮ ಆಗಲಿಲ್ಲ ಎಂದು ಅಧಿಕಾರಿಗಳು ಆರೋಪಿಸುತ್ತಿದ್ದಾರೆ.
ಮತ್ತೊಂದೆಡೆ ರಾಶಿ
ಈಗ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕಾರ್ನಾಡು ಬೈಪಾಸ್ ಬಳಿಯಿಂದ ಮಂಗಳೂರಿನತ್ತ ತೆರಳುವ ಕೊರಂಟಬೆಟ್ಟು ಸಂಪರ್ಕ ರಸ್ತೆಯ ಬಳಿ ತ್ಯಾಜ್ಯ ರಾಶಿ ಬೀಳುತ್ತಿದೆ. ಇಲ್ಲಿಯೂ ದುರ್ವಾಸನೆ ಬೀರುವ ಕಸದ ರಾಶಿ ಬೆಳೆಯುತ್ತಲೇ ಇದೆ.
ಸಿಸಿ ಕೆಮರಾ ಅಳವಡಿಕೆ
ಸಾರ್ವಜನಿಕ ಸ್ಥಳಗಳನ್ನು ಮಲಿನಗೊಳಿಸುವುದು ಹಾಗೂ ಬೇಕಾಬಿಟ್ಟಿ ತ್ಯಾಜ್ಯ ಎಸೆಯುವುದು ಅಪರಾಧ. ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ರಾಶಿ ಹಾಕುತ್ತಿದ್ದರೂ ಈ ಬಗ್ಗೆ ನಗರ ಪಂಚಾಯತ್ ನಿಗಾವಹಿಸಿದೆ. ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಲು ಸಿಸಿ ಕೆಮರಾ ಅಳವಡಿಸಲಾಗಿದೆ. ತಪ್ಪಿತಸ್ಥರನ್ನು ಹಿಡಿದು ಕ್ರಮಕೈಗೊಳ್ಳಲಾಗುವುದು.
–ಇಂದು ಎಂ.
ಮುಖ್ಯಾಧಿಕಾರಿ, ಮೂಲ್ಕಿ ನ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು
Mangaluru ಫಾತಿಮಾ ರಲಿಯಾ ಸಹಿತ ಆರು ಮಂದಿಗೆ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ
Surathkal ಶಬರಿಮಲೆ ಯಾತ್ರೆ ಸಂದರ್ಭ ಹೃದಯಾಘಾತದಿಂದ ಸಾವು
MUST WATCH
ಹೊಸ ಸೇರ್ಪಡೆ
Ajekar;ಕೆರೆಗೆ ಮೀನು ಹಿಡಿಯಲು ತೆರಳಿದ್ದ ಮಾವ-ಅಳಿಯ ಮುಳುಗಿ ಸಾವು
IPL ಅಭಿಷೇಕ್ ಸ್ಫೋಟಕ ಆಟ: ಪಂಜಾಬ್ ವಿರುದ್ಧ ಹೈದರಾಬಾದ್ ಗೆ 4 ವಿಕೆಟ್ ಜಯ
Rain Alert; ಮೇ 21, 22 ರಂದು ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ
Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು
Iran ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ‘ಹಾರ್ಡ್ ಲ್ಯಾಂಡಿಂಗ್; ರಕ್ಷಣ ಕಾರ್ಯ