ಚಿಣ್ಣರ ಪಾರ್ಕ್ನ ಅಭಿವೃದ್ಧಿ ಕಾಮಗಾರಿ ಆರಂಭ
Team Udayavani, Jan 2, 2018, 2:42 PM IST
ಪುತ್ತೂರು: ಪುತ್ತೂರು ಪೇಟೆಯ ಹೃದಯ ಭಾಗದಲ್ಲಿರುವ ನಗರಸಭೆ ಸುಪರ್ದಿಯ ಚಿಣ್ಣರ ಪಾರ್ಕ್ನ ಅಭಿವೃದ್ಧಿ ಕಾರ್ಯ ಕೊನೆಗೂ ಆರಂಭಗೊಂಡಿದೆ. ನಗರಸಭೆಯ 14 ನೇ ಹಣಕಾಸು ಯೋಜನೆಯಡಿಯಲ್ಲಿ 5 ಲಕ್ಷ ರೂ. ಅನುದಾನವನ್ನು ಮೀಸಲಿರಿಸಿ ಪಾರ್ಕ್ನ ಶುಚಿತ್ವ ಕಾಮಗಾರಿ, ವೇದಿಕೆ ಮುಂಭಾಗ ಶೀಟ್ ಹಾಸುವುದು, ಗ್ರೀನ್ ರೂಂ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಪಾರ್ಕ್ನ ಸುತ್ತಲಿನ ಕಂಪೌಂಡ್ಗೆ ಬಣ್ಣ ಬಳಿಯುವ, ವೇದಿಕೆಯ ಮುಂಭಾಗದಲ್ಲಿ ಶೀಟ್ ಹಾಸುವ ಕೆಲಸ ಈಗಾಗಲೇ ಪೂರ್ತಿ ಗೊಂಡಿದೆ.
ಸದ್ಯಕ್ಕೆ ಪಾರ್ಕ್ನಲ್ಲಿ ಕಳೆ ಗಿಡಗಳು ಬೆಳೆದು ನಿಂತಿದ್ದು, ಅನಗತ್ಯ ಮರಗಳೂ ಬೆಳೆದಿವೆ. ವೇದಿಕೆ, ಗುಹೆಯಂತಹ ವಿನ್ಯಾಸ, ಹುಲ್ಲು ಹಾಸು, ಆಸನ ಸೇರಿದಂತೆ ಇತರ ವ್ಯವಸ್ಥೆಗಳು ಇವೆ. ಅಭಿವೃದ್ಧಿಗೊಳಿಸಿದ ಬಳಿಕ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವ ಅಗತ್ಯವಿದೆ.
ಪ್ರಮುಖ ಪಾರ್ಕ್
ಪೇಟೆಯ ಮೂರು ಪಾರ್ಕ್ ಗಳ ಪೈಕಿ, ಸರಕಾರಿ ಆಸ್ಪತ್ರೆ ಬಳಿಯಿರುವ ಚಿಣ್ಣರ ಪಾರ್ಕ್ಗೆ ಹೆಚ್ಚಿನ ಮಹತ್ವವಿದೆ. ಮಕ್ಕಳ ಚಟುವಟಿಕೆ ಕೇಂದ್ರವಾಗಬೇಕು ಎಂಬ ದೃಷ್ಟಿಯಿಂದಲೇ ಈ ಪಾರ್ಕನ್ನು ನಿರ್ಮಿಸಲಾಗಿತ್ತು. ಈ ಹಿಂದೆ ಒಂದಷ್ಟು ಅನುದಾನ ಮೀಸಲಿಟ್ಟು, ಅಭಿವೃದ್ಧಿ ಕಾಮಗಾರಿ ನಡೆಸಲಾಗಿತ್ತು. ಆದರೆ ಅನಂತರದಲ್ಲಿ ಕಡೆಗಣಿಸಲ್ಪಟ್ಟಿತ್ತು.
ಕಾರ್ಯಕ್ರಮ ಸಂಘಟನೆ ಅಗತ್ಯ
ಮಕ್ಕಳಿಗೆ ನಿರ್ಮಿಸಲಾದ ಪಾರ್ಕ್ನಲ್ಲಿ ಮಕ್ಕಳ ಚಟುವಟಿಕೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಸಂಘ ಟಿಸಲು ಪೂರಕವಾಗಿ ಪಾರ್ಕ್ ಅಭಿವೃದ್ಧಿಯಾಗಬೇಕು. ಅನಂತರ ಶಿಕ್ಷಣ ಇಲಾಖೆ, ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದು ಮಕ್ಕಳಿಗೆ ಪೂರಕ ಚಟುವಟಿಕೆಗಳನ್ನು ಸಂಘಟಿಸಬೇಕಾಗಿದೆ.
ಬಾಡಿಗೆಗೆ ಅವಕಾಶ
ನಗರಸಭೆಯ ಹಿಂದಿನ ಆಡಳಿತದ ಅವಧಿಯಲ್ಲಿ ಅನುದಾನ ಮೀಸಲಿರಿಸಲಾಗಿತ್ತು. ಇದೀಗ ಗುತ್ತಿಗೆದಾರರು ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದಾರೆ. ಶೀಘ್ರ ಅಭಿವೃದ್ಧಿ ಕಾಮಗಾರಿಗಳು ನಡೆದ ಬಳಿಕ ಕಾರ್ಯಕ್ರಮಗಳನ್ನು ಸಂಘಟಿಸುವವರಿಗೆ ಬಾಡಿಗೆಗೆ ನೀಡಲು ಯೋಚಿಸಲಾಗಿದೆ.
ಜಯಂತಿ ಬಲ್ನಾಡು ಅಧ್ಯಕ್ಷರು, ನಗರಸಭೆ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ