ಭೂಕಂಪನದ ಹಿಂದೆ ಬೋರ್ವೆಲ್ ಪಾತ್ರ?
Team Udayavani, Jul 3, 2022, 6:30 AM IST
ಪುತ್ತೂರು: ಭೂಕಂಪನದ ಹಿಂದೆ ಕೊಳವೆಬಾವಿಗಳ ಪಾತ್ರ ಇರುವ ಬಗ್ಗೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಲಿದೆ. ಸಾರ್ವಜನಿಕರು ಕೂಡ ಕೊಳವೆ ಬಾವಿ ಕೊರೆಯುವ ಸಂದರ್ಭ ಅದರ ಅನಿವಾರ್ಯತೆಯ ಬಗ್ಗೆ ಮೊದಲು ಮನವರಿಕೆ ಮಾಡಿಕೊಳ್ಳಬೇಕು ಎಂದು ಸಚಿವ ಎಸ್. ಅಂಗಾರ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೊದಲೆಲ್ಲ ನೂರಿನ್ನೂರು ಅಡಿಯಷ್ಟು ಅಳಕ್ಕೆ ಕೊಳವೆ ಬಾವಿ ತೋಡುತ್ತಿದ್ದರು. ಈಗ ಸಾವಿರ ಅಡಿಯವರೆಗೂ ಹೋಗುತ್ತದೆ. 80 ಅಡಿಗಿಂತ ಆಳಕ್ಕೆ ಹೋದರೆ ಅಲ್ಲಿ ಆಮ್ಲಜನಕವಿರುವುದಿಲ್ಲ. ಅಂಥದ್ದರಲ್ಲಿ ಸಾವಿರ ಅಡಿಯಾಳದ ಸ್ಥಿತಿ ಹೇಗಿರಬೇಡ. ಈಗೀಗ ಕೊಳವೆ ಬಾವಿ ಕೊರೆಯುವ ಪ್ರಮಾಣ ಬಹಳಷ್ಟು ಹೆಚ್ಚಾಗಿದೆ. ನದಿಯ ಪಕ್ಕದಲ್ಲೂ ಬೋರ್ವೆಲ್ ಕೊರೆಯುತ್ತಾರೆ. ಅನಿವಾರ್ಯವಾದರೆ ಕೊರೆಸುವುದು ತಪ್ಪಲ್ಲ. ಅಗತ್ಯವಿಲ್ಲದಿದ್ದರೂ ಕೊರೆಯಬೇಕೇ ಎಂಬ ಬಗ್ಗೆ ಯೋಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಭೂಕಂಪದ ಬಗ್ಗೆ ಕೇಂದ್ರಕ್ಕೆ ವರದಿ
ಸುಳ್ಯ ತಾಲೂಕು ಮತ್ತು ಮಡಿಕೇರಿ ತಾಲೂಕಿನ ಹಲವೆಡೆ ಸಂಭವಿಸಿರುವ ಭೂಕಂಪನಗಳ ಬಗ್ಗೆ ಈಗಾಗಲೇ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ಅಧ್ಯಯನ ನಡೆಸಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಅದರ ಆಧಾರದಲ್ಲಿ ಆಳವಾದ ಅಧ್ಯಯನ ನಡೆಯಲಿದ್ದು, ಭವಿಷ್ಯದ ಬಗ್ಗೆ ಯೋಜನೆ ರೂಪಿಸಲು ಇದು ಸಹಕಾರಿಯಾಗಲಿದೆ ಎಂದರು.
ಅಪಾಯ ಸಾಧ್ಯತೆ ಇಲ್ಲ
ವಿಜ್ಞಾನಿಗಳ ಪ್ರಕಾರ ಸುಳ್ಯ, ಕೊಡಗು ಭಾಗದಲ್ಲಿ ಸಂಭವಿಸಿರುವ ಕಂಪನಗಳು ಅಪಾಯಕಾರಿಯಲ್ಲ. ಇನ್ನಷ್ಟು ತೀವ್ರವಾದ ಕಂಪನ ಸಂಭವಿಸುವ ಬಗ್ಗೆ ಯಾವುದೇ ಸೂಚನೆ ಇಲ್ಲ. ಜನ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಈ ಕಂಪನಗಳ ಬಗ್ಗೆ ಸರಕಾರ ತೀವ್ರ ನಿಗಾ ಇರಿಸಿದೆ ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು