ಹಾಡಹಗಲೇ ಭೀತಿ ಹುಟ್ಟಿಸಿದ ಕಾಡಾನೆ
Team Udayavani, Dec 28, 2017, 12:05 PM IST
ಸುಬ್ರಹ್ಮಣ್ಯ: ದೇವಚಳ್ಳ ಸಮೀಪದ ಕರಂಗಲ್ಲಿನಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಕಾಡಾನೆಯೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಕರಂಗಲ್ಲು ನಿವಾಸಿ ಜಯಪ್ರಕಾಶ ಅವರ ಪತ್ನಿ ದಿವ್ಯಾ ಅವರು ತೋಟದ ದಾರಿಯಲ್ಲಿ ಸಾಗುತ್ತಿದ್ದಾಗ ಏಕಾಏಕಿ ಬೃಹತ್ ಗಾತ್ರದ ದಂತ ಹೊಂದಿರುವ ಆನೆ ಕಾಣಿಸಿಕೊಂಡಿತು. ಬೆದರಿದ ಅವರು ಗಾಬರಿಯಿಂದ ಮನೆಯತ್ತ ಓಡಿ ಹೋದರು. ಇದೇ ವೇಳೆ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಪ್ರೇಮಾ ಮಾಣಿಬೆಟ್ಟು ಅವರಿಗೂ ಕಾಡಾನೆ ಕಾಣಿಸಿಕೊಂಡಿದೆ. ಇಬ್ಬರೂ ಕೂದಲೆಳೆಯ ಅಂತರದಲ್ಲಿ ಕಾಡಾನೆ ದಾಳಿಯಿಂದ ಪಾರಾಗಿದ್ದಾರೆ.
ಮನೆಯಂಗಳಕ್ಕೂ ಬಂತು !
ಆನೆಯು ಕರಂಗಲ್ಲು ಪ್ರಕಾಶ, ನರಸಿಂಹ ಮಾಣಿಬೆಟ್ಟು, ಸುಂದರ ಮಾಣಿ ಬೆಟ್ಟು ಮೊದಲಾದವರ ತೋಟಗಳಲ್ಲಿ ಅಡ್ಡಾಡಿ ಹಾನಿ ಮಾಡಿದೆ. ಪುಂಡರೀಕ ಅವರ ಮನೆ ಅಂಗಳದಲ್ಲಿ 10 ನಿಮಿಷ ಕಳೆ ದಿದೆ. ಅಲ್ಲಿಂದ ನೆಡಿcಲ್ ಚೆನ್ನಪ್ಪ ಹಾಗೂ ಬೊಳಿಯಪ್ಪ ಮಾವಜಿ ಅವರಿಬ್ಬರ ತೋಟ ಹಾಗೂ ಮನೆಪಕ್ಕದಲ್ಲಿ ಸಂಚರಿಸಿದೆ. ಇತರ ಹಲವು ಮಂದಿ ತೋಟಗಳಿಗ ದಾಳಿ ನಡೆಸಿದೆ. ಶಾಲೆ ಬಳಿಗೆ ಬಂದ ಕಾಡಾನೆ ಬೈಲಿನ ತೋಟದ ಉದ್ದಕ್ಕೂ ಸಂಚಾರ ಬೆಳೆಸಿದ ಕಾಡಾನೆ ಬಳಿಕ ಕರಂಗಲ್ಲು ಶಾಲೆ ಬಳಿ ಬಂದು ನಿಂತಿತು. ಮಧ್ಯಾಹ್ನ ಊಟ ಮಾಡಿ ಕೈತೊಳೆಯು ತ್ತಿದ್ದ ಮಕ್ಕಳ ಸನಿಹಕ್ಕೇ ಆನೆ ಬಂದು ಭಯದ ವಾತಾವರಣ ಸೃಷ್ಟಿಸಿತು. ಸ್ಥಳೀಯರು ಶಂಖ ಊದಿ, ಸಿಡಿಮದ್ದು ಸಿಡಿಸಿ ಓಡಿಸುವ ಪ್ರಯತ್ನ ನಡೆಸಿದರು. ಬಹು ಹೊತ್ತಿನ ಬಳಿಕ ಕಾಡಾನೆ ಕಾಡಿನತ್ತ ಮರಳಿದೆ. ದಾಳಿ ವೇಳೆ ಹಲವು ಕೃಷಿಕರ ಫಸಲು, ಕೃಷಿ ಸಲಕರಣೆಗಳಿಗೆ ನಾಶ ಮಾಡಿದೆ. ಹಟ್ಟಿ, ಪಂಪ್ ಶೆಡ್ಗಳಿಗೂ ಹಾನಿಯಾಗಿದೆ ಎಂದು ಕೃಷಿಕರು ತಿಳಿಸಿದ್ದಾರೆ.
ಗಜ ಯಾತ್ರೆ ವೇಳೆ ಅಲ್ಪಸ್ವಲ್ಪ ಹಾನಿ ಯಾಗಿದ್ದು ಬಿಟ್ಟರೆ ನಾಗರಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರತ್ಯಕ್ಷ ದರ್ಶಿ ಪದ್ಮನಾಭ ಕರಂಗಲ್ಲು ಉದಯವಾಣಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ