ಕುಲಶೇಖರ ಬಳಿ ಹಳಿ ಭೂಕುಸಿತ ರೈಲು ಸಂಚಾರ ಆ. 25ರ ವರೆಗೆ ರದ್ದು
Team Udayavani, Aug 25, 2019, 5:41 AM IST
ಮಂಗಳೂರು: ಪಡೀಲು ಮತ್ತು ಕುಲಶೇಖರ ನಡುವೆ (ಪಾಲಕ್ಕಾಡ್ ವಿಭಾಗ) ಭೂಕುಸಿತ ಸಂಭವಿಸಿ ರೈಲು ಮಾರ್ಗ ಮೇಲೆ ಮಣ್ಣು ಮತ್ತು ಕಲ್ಲು ಕುಸಿದ
ಹಿನ್ನೆಲೆಯಲ್ಲಿ ಮುಂಬಯಿ, ಮಂಗಳೂರು ಮತ್ತು ಕೇರಳ ನಡುವೆ ಸಂಚರಿಸುವ ರೈಲುಗಳ ಸಂಚಾರ ದಲ್ಲಿ ತಾತ್ಕಾಲಿಕ ಬದಲಾವಣೆ ಮುಂದುವರಿದಿದೆ.
ಕೆಲವು ರೈಲುಗಳನ್ನು ಪೂರ್ಣ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಪಥ ಬದಲಿಸಲಾಗಿದೆ.
ರದ್ದಾದ ರೈಲುಗಳು
ಎರ್ನಾಕುಳಂ- ಮುಂಬಯಿ ಲೋಕಮಾನ್ಯ ತಿಲಕ್ ಗರೀಬ್ ರಥ ಎಕ್ಸ್ಪ್ರೆಸ್ (ನಂ.12224) ಮತ್ತು ಕೊಚ್ಚುವೇಲಿ-ಮುಂಬಯಿ ಲೋಕಮಾನ್ಯ ತಿಲಕ್ ಗರೀಬ್ ರಥ ಎಕ್ಸ್ ಪ್ರಸ್ (ನಂ.12202), ಕೊಂಕಣ ರೈಲ್ವೇಗೆ ಸೇರಿದ ಮಡ್ಗಾಂವ್- ಮಂಗಳೂರು ಪ್ಯಾಸೆಂಜರ್ ರೈಲು (56641) ಹಾಗೂ ಮಡ್ಗಾಂವ್- ಮಂಗಳೂರು ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು(22635), ಕುರ್ಲಾ- ತಿರುವನಂತಪುರ ನೇತ್ರಾವತಿ ಎಕ್ಸ್ ಪ್ರಸ್ (ನಂ.16345), ಎರ್ನಾಕುಳಂ- ಪೂನಾ ಎಕ್ಸ್ಪ್ರೆಸ್ (ನಂ. 22149) ರೈಲುಗಳ ಸಂಚಾರ ಆ. 25ರವರೆಗೆ ರದ್ದುಗೊಂಡಿದೆ.
ಬದಲಿ ಮಾರ್ಗ
ತಿರುವನಂತಪುರ-ಮುಂಬಯಿ ಲೋಕಮಾನ್ಯ ತಿಲಕ್ ನೇತ್ರಾವತಿ
ಎಕ್ಸ್ಪ್ರೆಸ್ (ನಂ.16346) ಆ. 25ರಂದು ಶೊರ್ನೂರು- ಪೋದನೂರು (ತಮಿಳುನಾಡು)- ಈರೋಡ್- ಜೋಳಾರಪೇಟೆ- ಮೇಲಪಕ್ಕಂ- ರೆಣಿಗುಂಟ- ವಾದಿ- ಪುಣೆ ಮಾರ್ಗವಾಗಿ ಸಂಚರಿಸಲಿದೆ.
ಎರ್ನಾಕುಳಂ- ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್ಪ್ರೆಸ್ (ನಂ.12617) ಆ. 25ರಂದು ಶೊರ್ನೂರು- ಪೋದನೂರು- ಪೆರಂಬೂರು- ನಾಗಪುರ- ಭೋಪಾಲ್- ಮಥುರಾ ಮಾರ್ಗವಾಗಿ ಪ್ರಯಾಣಿಸಲಿದೆ.
ಆ. 25ರ ವರೆಗೆ ನಿರ್ಬಂಧ
ಭೂಕುಸಿತ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್ ಮತ್ತು ತೋಕೂರು ನಡುವಿನ ರೈಲು ಸಂಚಾರವನ್ನು ಆ. 25ರ ತನಕ ನಿರ್ಬಂಧಿಸಲಾಗಿದೆ.
ಬೆಂಗಳೂರು ರೈಲು ಮಾರ್ಗ ಸಿದ್ಧ
ಸುಬ್ರಹ್ಮಣ್ಯ, ಆ. 24: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಶಿರಾಡಿ ಘಾಟಿಯ ಹಲವು ಕಡೆಗಳಲ್ಲಿ ಹಳಿ ಮೇಲೆ ಜರಿದು ಬಿದ್ದ ಮಣ್ಣು ತೆರವು, ಹಳಿಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಶನಿವಾರ ಪ್ರಾಯೋಗಿಕ ಗೂಡ್ಸ್ ರೈಲು ಸಂಚರಿಸಿದೆ.
ಆ. 25ರಿಂದ ಪ್ರಯಾಣಿಕ ರೈಲು ಓಡಾಟ ಆರಂಭವಾಗುವ ಸಾಧ್ಯತೆಗಳಿವೆ. ಪ್ರಾಯೋಗಿಕ ರೈಲು ಓಡಾಟ ಯಶಸ್ವಿಯಾಗಿದೆ ಎಂದು ತಾಂತ್ರಿಕ ಅಧಿಕಾರಿಗಳು ತಿಳಿಸಿದ್ದರೂ ಉನ್ನತ ಮಟ್ಟದಿಂದ ಪ್ರಯಾಣಿಕ ರೈಲು ಓಡಾಟಕ್ಕೆ ಸಂಬಂಧಿಸಿ ಹಸಿರು ನಿಶಾನೆ ಇನ್ನಷ್ಟೇ ದೊರಕಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್