ಉಕ್ಕುಡ: 44 ಪವನ್‌ ಚಿನ್ನಾಭರಣ ಕಳವು


Team Udayavani, Dec 8, 2017, 9:55 AM IST

4-a.jpg

ವಿಟ್ಲ: ವಿಟ್ಲಕಸಬಾ ಗ್ರಾಮದ ಉಕ್ಕುಡ ಚೆಕ್‌ ಪೋಸ್ಟ್‌ ಸಮೀಪ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಿಂಭಾಗದ ತಡೆಗೋಡೆಯನ್ನು ಒಡೆದು ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಅಡಗಿಸಿಟ್ಟ ಸುಮಾರು 10.50 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಹುಡುಕಿ, ಕಳವುಗೆ„ದ ಘಟನೆ ಬುಧವಾರ ತಡ ರಾತ್ರಿ ಸಂಭವಿಸಿದೆ.

ಉಕ್ಕುಡ ನಿವಾಸಿ ಅಬ್ಟಾಸ್‌ ಹಾಜಿ ಮನೆ ಮಂದಿ ಬುಧವಾರ ಸಂಜೆ ಗಂಟೆ 5.30ಕ್ಕೆ ಮನೆಗೆ ಬೀಗ ಹಾಕಿ ಕುಂಬ್ರದಲ್ಲಿರುವ ಬಂಧುಗಳ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ, ರಾತ್ರಿ 12.30ಕ್ಕೆ ಮನೆಗೆ ಹಿಂದಿರುಗಿದ್ದು, ಬಾಗಿಲು ತೆಗೆದು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಕಳ್ಳತನ ನಡೆದಿರುವುದು ತಿಳಿದುಬಂತು. ಹಿಂಬಾಗಿಲು ತೆರೆದುಕೊಂಡಿತ್ತು. ಮನೆಯೊಳಗೆ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಳ್ಳರು ಕಪಾಟುಗಳನ್ನು ಜಾಲಾಡಿರುವುದು ಸ್ಪಷ್ಟವಾಯಿತು.

ಕಬ್ಬಿಣದ ಸಲಾಖೆ ಬಳಕೆ!

ಸಿಟೌಟ್‌ನಲ್ಲಿ ಅಳವಡಿಸಿದ ಎರಡಡಿಯ ಸಿಮೆಂಟ್‌ ಕಂಬಗಳನ್ನು ಮುರಿದ ಕಳ್ಳರು, ಕಿಟಕಿಯನ್ನೂ ತುಂಡರಿಸಿದ್ದಾರೆ. ಹಾಲ್‌ಗೆ ಪ್ರವೇಶಿಸಲು ಬಾಗಿಲಿನ ತಡೆ ಇದ್ದು, ಇದನ್ನು ಕಬ್ಬಿಣದ ರಾಡ್‌ನ‌ ಮೂಲಕ ಜಜ್ಜಿ ಹಾನಿಗೊಳಿಸಿದ್ದಾರೆ. ಕೊನೆಗೆ ಸ್ಟೋರ್‌ ರೂಮಿನಲ್ಲಿದ್ದ ಅಕ್ಕಿ ಡಬ್ಬದಲ್ಲಿ ಅಡಗಿಸಿಟ್ಟಿದ್ದ ಸುಮಾರು 44 ಪವನ್‌ ಚಿನ್ನಾಭರಣವನ್ನು ಎಗರಿಸುವಲ್ಲಿ ಕಳ್ಳರು ಯಶಸ್ವಿಯಾಗಿದ್ದಾರೆ.
ಚಿನ್ನ ಅಕ್ಕಿ ಡಬ್ಬದಲ್ಲಿತ್ತು !

ಅಪರಾಧ ತಡೆ ಮಾಸಾಚಾರಣೆಯ ಸಂದರ್ಭ ಪೊಲೀಸ್‌ ಇಲಾಖೆ ವಿವಿಧ ಕರಪತ್ರಗಳನ್ನು ವಿತರಿಸಿ, ಚಿನ್ನಾಭರಣಗಳನ್ನು ಕಪಾಟಲ್ಲಿಡುವ ಬದಲು ಬ್ಯಾಂಕ್‌ ಲಾಕರ್‌ಗಳಲ್ಲಿರಿಸಿ ಮತ್ತು ಅಡುಗೆ ಮನೆ ಅಥವಾ ಸ್ಟೋರ್‌ ರೂಮ್‌ಗಳಲ್ಲಿರಿಸಿ ಎಂದು ಸೂಚಿಸಿದ್ದರು. ಇದನ್ನೇ ಪಾಲಿಸಿರಬಹುದೋ ಏನೋ, ಮನೆ ಮಂದಿ ಸ್ಟೋರ್‌ ರೂಮಿನಲ್ಲಿದ್ದ ಅಕ್ಕಿ ಡಬ್ಬದಲ್ಲಿ ಆಭರಣ ಇರಿಸಿದ್ದರು. ಆದರೆ ಕಳ್ಳರು ಅಕ್ಕಿಡಬ್ಬಕ್ಕೇ ಕೈಹಾಕಿ, ಅಕ್ಕಿಯನ್ನು ಬಿಟ್ಟು ಚಿನ್ನಾಭರಣವನ್ನು ಎಗರಿಸಿದ್ದಾರೆ. ಮಾಹಿತಿ ಇರುವ ಸ್ಥಳೀಯರು ಈ ಘಟನೆಯಲ್ಲಿ ಪಾಲ್ಗೊಂಡಿರುವ ಸಾಧ್ಯತೆ ಇದೆ.

ಮನೆಯವರು ರಾತ್ರಿಯೇ ವಿಟ್ಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು. ತತ್‌ಕ್ಷಣ ಆಗಮಿಸಿದ ಪೊಲೀಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಗುರುವಾರ ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್‌ ಭೇಟಿ ನೀಡಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಜತೆ ತನಿಖೆ ಆರಂಭಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯ ರಸ್ತೆಗೆ ತಲುಪಿ ಅತ್ತಿತ್ತ ನೋಡಿದ ಶ್ವಾನ !ಉಕ್ಕುಡ ಚೆಕ್‌ ಪೋಸ್ಟ್‌ನಿಂದ ಆಲಂಗಾರು ಸಂಪರ್ಕಿಸುವ ಡಾಮರು ರಸ್ತೆಯಲ್ಲಿ ಚೆಕ್‌ ಪೋಸ್ಟ್‌ ನಿಂದ ಸುಮಾರು 100 ಮೀಟರ್‌ ಹೋಗುತ್ತಿದ್ದಂತೆ ಎಡ ಬದಿಗೆ 50 ಮೀಟರ್‌ ದೂರದಲ್ಲಿ ಅಬ್ಟಾಸ್‌ ಹಾಜಿ ಅವರ ಮನೆಯಿದೆ. ಮನೆಯ ಹಿಂಭಾಗದಿಂದ ಹೊರಟ ಶ್ವಾನದಳ ಮನೆಗೆ ಸುತ್ತು ಹೊಡೆದು 50 ಮೀಟರ್‌ ಕಚ್ಛಾ ರಸ್ತೆಯಲ್ಲಿ ಓಡಿ ಡಾಮರು ರಸ್ತೆಯ ಬಳಿ ಹೋಗಿ ನಿಂತು ಅತ್ತಿತ್ತ ನೋಡಿದೆ. ಆದುದರಿಂದ ಕಳ್ಳರು ಮುಖ್ಯ ರಸ್ತೆಯಿಂದ ವಾಹನದಲ್ಲಿ ತೆರಳಿರುವ ಸಾಧ್ಯತೆಯಿದೆ ಎನ್ನಲಾಗುತ್ತದೆ.

ಸಿಸಿಟಿವಿಯಲ್ಲಿ ದಾಖಲಾಗಿರಬಹುದೇ ? 
ಉಕ್ಕುಡ ಚೆಕ್‌ ಪೋಸ್ಟ್‌ ನಲ್ಲಿರುವ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಮುಂಭಾಗದಲ್ಲಿ ಹೋಗುವ ರಸ್ತೆಯನ್ನೇ ಕಳ್ಳರು ಬಳಸಿರುವ ಸಾಧ್ಯತೆಯನ್ನು ಶ್ವಾನದಳದ ತನಿಖೆ ಖಚಿತ ಪಡಿಸಿದೆ. ಚೆಕ್‌ ಪೋಸ್ಟ್‌ ನಲ್ಲಿರುವ ಸಿಸಿಟಿವಿಯಲ್ಲಿ ರಸ್ತೆಯ ಮುಂಭಾಗ ದಾಖಲಾಗುತ್ತಿದೆ. ಆ ಮೂಲಕ ಮಾಹಿತಿ ಸಿಗುವ ಸಾಧ್ಯತೆ ಇದೆ ಎಂದು ನಾಗರಿಕರು ಆಡಿಕೊಳ್ಳುತ್ತಿದ್ದರು.
 

ಟಾಪ್ ನ್ಯೂಸ್

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

Dharmasthala ಯಾತ್ರಾರ್ಥಿ ಮಹಿಳೆಯ ಬ್ಯಾಗಿನಿಂದ ಚಿನ್ನಾಭರಣ ಕಳವು

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1—–ewqeqwe

Sunil Chhetri; ಬೆಂಗಳೂರು ಎಫ್ಸಿ ಪರ ಆಡುವೆ

1-reee

Chess: ಸೋತ ಕಾರಣಕ್ಕೆ ಕಂಪ್ಯೂಟರ್‌ ಸ್ಕ್ರೀನ್‌ ಒಡೆದ ಕಾರ್ಲ್ಸನ್‌

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

Mangaluru”ಯುವ ಸಮಾಜದ ಸೇವೆ ದೇಶಕ್ಕೆ ಅದ್ವಿತೀಯ ಕೊಡುಗೆ’

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.