Ullal ; ಕಲ್ಲಿಗೆ ಬಡಿದ ದೋಣಿ; ಮೀನುಗಾರ ಸಾವು
Team Udayavani, Jan 13, 2024, 12:32 AM IST
ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ದೋಣಿಯ ಹಗ್ಗ ತುಂಡಾಗಿ ಸಮುದ್ರದ ನಡುವೆ ಕಲ್ಲೊಂದಕ್ಕೆ ಬಡಿದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಮೊಗವೀರಪಟ್ಣ ಸಮೀಪದ ಆಳ ಸಮುದ್ರದಲ್ಲಿ ನಡೆದಿದೆ.
ಮೊಗವೀರಪಟ್ಣ ನಿವಾಸಿ ಮೈಕಲ್ ಮೃತಪಟ್ಟವರು. ನಾಡದೋಣಿಯಲ್ಲಿ ಮೈಕಲ್ ಸೇರಿದಂತೆ ಮೂವರು ಮೀನುಗಾರಿಕೆಗೆ ತೆರಲಿದ್ದು. ಸಮುದ್ರದ ನಡುವೆ ಬಂಡೆಯೊಂದರ ಸಮೀಪ ಮೀನು ಹಿಡಿಯಲು ಬಲೆ ಬೀಸಿ ಕುಳಿತಿದ್ದರು. ಈ ಸಂದರ್ಭದಲ್ಲಿ ಬೀಸಿದ ಗಾಳಿಗೆ ಹಗ್ಗ ತುಂಡಾಗಿ ದೂಣಿ ನೇರವಾಗಿ ಕಲ್ಲಿಗೆ ಬಡಿಯಿತು.
ಇದರಿಂದಾಗಿ ದೋಣಿಯ ಎಂಜಿನ್ ಚಾಲನೆ ಮಾಡುತ್ತಿದ್ದ ಮೈಕಲ್ ತಲೆ ದೋಣಿಯ ಮರದ ತುಂಡಿಗೆ ಬಡಿದು ಸಮುದ್ರಕ್ಕೆ ಬಿದ್ದಿದ್ದು, ಸಹ ಮೀನುಗಾರರು ಮೈಕಲ್ ಅವರನ್ನು ಮೇಲಕ್ಕೆತ್ತಿದರೂ ಅದಾಗಲೇ ಅವರು ಮೃತಪಟ್ಟಿದ್ದರು.
ಮೃತದೇಹವನ್ನು ಬೇರೆ ಮೀನುಗಾರಿಕಾ ಬೋಟ್ನ ಸಹಾಯದಿಂದ ದಡಕ್ಕೆ ತರಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
U. T. Khader ಮಂಗಳೂರಿನಿಂದ ಹಜ್ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ