ಉಪ್ಪಿನಂಗಡಿ: ಬಸ್ನ ಬಾಗಿಲು ಕಿತ್ತೇ ಹೋಯ್ತು!
Team Udayavani, Sep 8, 2017, 1:13 AM IST
ಉಪ್ಪಿನಂಗಡಿ: ಬಸ್ಸಿಗೆ ಹತ್ತುವ ಗದ್ದಲದಿಂದಾಗಿ ಕೆಎಸ್ಸಾರ್ಟಿಸಿ ಬಸ್ನ ಹಿಂಬದಿಯ ಬಾಗಿಲೇ ಕಿತ್ತು ಹೋದ ಘಟನೆ ಉಪ್ಪಿನಂಗಡಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಧರ್ಮಸ್ಥಳದಿಂದ ಮಡಿಕೇರಿ- ಮೈಸೂರಿಗೆ ಹೋಗುವ ಬಸ್ ಬೆಳಗ್ಗೆ 8 ಗಂಟೆಗೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭ ಬಸ್ಗೆ ಹತ್ತಲು ಶಾಲಾ ಮಕ್ಕಳು, ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇದರಿಂದ ಈ ಸಂದರ್ಭ ನೂಕುನುಗ್ಗಲು ಉಂಟಾಗುತ್ತದೆ. ಇಂದು ಕೂಡಾ ಇದೇ ರೀತಿ ಆದಾಗ ಯಾರೋ ಬಾಗಿಲಿನಲ್ಲಿ ನೇತಾಡಿದ್ದು, ಬಸ್ನ ಹಿಂಬದಿಯ ಬಾಗಿಲು ಕಿತ್ತು ಹೋಗಿದೆ.
ವಿನಾ ಕಾರಣ ಗದ್ದಲ
ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಪುತ್ತೂರಿಗೆ 6:30ರಿಂದ ಕೆಎಸ್ಸಾರ್ಟಿಸಿ ಬಸ್ ಆರಂಭವಾಗುತ್ತದೆ. ಆಮೇಲೆ 15 ನಿಮಿಷ ಕ್ಕೊಂದು ಬಸ್ ಇದ್ದರೂ ವಿದ್ಯಾರ್ಥಿಗಳು ಹಾಗೂ ಪುತ್ತೂರಿಗೆ ಕೆಲಸಕ್ಕಾಗಿ ತೆರಳುವವರು ಅದರಲ್ಲಿ ಹೋಗದೇ ಮಡಿಕೇರಿಗೆ ಹೋಗುವ ವೇಗದೂತ ಬಸ್ಗಾಗಿ ಕಾಯುತ್ತಾರೆ. ಮಡಿಕೇರಿಗೆ ತೆರಳುವ ಬಸ್ಗಳು ಉಪ್ಪಿನಂಗಡಿಯಿಂದ ಬಿಟ್ಟರೆ, ಮತ್ತೆ ಅದಕ್ಕೆ ನಿಲುಗಡೆ ನೀಡುವುದು ಪುತ್ತೂರಿನಲ್ಲಿಯೇ. ಹಾಗಾಗಿ ಅದಕ್ಕಾಗಿ ಕಾಯುವ ಮೂಲಕ ಒಂದೆಡೆ ವಿನಾಕಾರಣ ನೂಕುನುಗ್ಗಲಿಗೆ ಅವಕಾಶವಾದರೆ, ಇನ್ನೊಂದೆಡೆ ಉಪ್ಪಿನಂಗಡಿಯಿಂದ ಮಡಿಕೇರಿ, ಮೈಸೂರಿಗೆ ಪ್ರಯಾಣಿಸುವವರಿಗೂ ಸೀಟು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಳೆದ ವರ್ಷವೂ ಇದೇ ರೀತಿಯ ನೂಕುನುಗ್ಗಲಿನಿಂದಾಗಿ ಉಪ್ಪಿನಂಗಡಿಯಲ್ಲಿ ಮಡಿಕೇರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸೊಂದರ ಬಾಗಿಲು ಕಿತ್ತುಹೋದ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!