ಶಾಲಾ ಬಾವಿಗೆ ವಿಷ ಪದಾರ್ಥ ಹಾಕಿದ ದುಷ್ಕರ್ಮಿಗಳು!ಹೊಟ್ಟೆ ನೋವಿನಿಂದ 8 ಮಕ್ಕಳು ಆಸ್ಪತ್ರಗೆ
Team Udayavani, Dec 2, 2019, 3:44 PM IST
ಬೆಳ್ತಂಗಡಿ: ದುಷ್ಕರ್ಮಿಗಳು ಶಾಲಾ ಬಾವಿಗೆ ವಿಷ ಪದಾರ್ಥ ಹಾಕಿದ ಪರಿಣಾಮ 8 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಘಟನೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಪೆರ್ಲದಲ್ಲಿ ನಡೆದಿದೆ.
ರಾಜೇಶ್ (12),6 ನೇ ತರಗತಿ, ರಾಧಕೃಷ್ಣ (14) 8 ನೇ ತರಗತಿ, ಮೋನಿಸ್( 12)6 ನೇ ತರಗತಿ, ಶ್ರವಣ್ ( 12)6 ನೇ ತರಗತಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಗೆ ದಾಖಲಾಗಿದ್ದಾರೆ.
ಚೇತನ್ ಕುಮಾರ್(13) 7 ನೇ ತರಗತಿ, ಸುದೀಶ್ (14) 8 ನೇ ತರಗತಿ, ಯೋಗೀಶ್ (14) 8 ನೇ ತರಗತಿ, ಸುದೀಪ್ ( 12)6 ನೇ ತರಗತಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿಬಾಜೆಯ ಪೆರ್ಲ ದ.ಕ ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆಯ ಬಾವಿ ನೀರು ಕುಡಿದ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದವರು.
ಮಕ್ಕಳು ಶಾಲಾ ತರಕಾರಿ ತೋಟಕ್ಕೆ ಬಾವಿಯಿಂದ ಪಂಪ್ ನಲ್ಲಿ ಗಿಡಗಳಿಗೆ ನೀರು ಸಿಂಪಡಿಸುವ ಸಮಯದಲ್ಲಿ ಮಕ್ಕಳು ನೀರನ್ನು ಕುಡಿದಿದ್ದರು. ಈ ಸಮಯದಲ್ಲಿ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ ಮುಖ್ಯ ಶಿಕ್ಷಕಿ ಶಾರದರವರ ಗಮನಕ್ಕೆ ತಂದಿದ್ದರು.
ಬಾವಿ ಬಳಿ ಪರಿಶೀಲಿಸಿದಾಗ ರಬ್ಬರ್ ಗೆ ಮಿಶ್ರಣ ಮಾಡುವ ಅಸೀಡ್ ಕ್ಯಾನ್ ಕಂಡು ಬಂದಿದೆ. ತಕ್ಷಣ 8 ಮಕ್ಕಳನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ನಾಲ್ಕು ಮಕ್ಕಳನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಇನ್ನುಳಿದವರನ್ನು ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಕ್ಕಳ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ