ಏಳು ಸಾವಿರ ಚದರಡಿ ಕಟ್ಟಡದಿಂದ 12 ಸಾವಿರ ಲೀಟರ್‌ ನೀರು


Team Udayavani, Jul 7, 2017, 5:50 PM IST

Water-Harvest-7-7.jpg

ಪುತ್ತೂರು: ಮಳೆ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅನ್ನುವ ಬಗ್ಗೆ ಸ್ಥಳೀಯಾಡಳಿತಗಳು ಘೋಷಣೆ ಹೊರಡಿಸಿ ಮರೆತು ಬಿಡುವುದು ಸಾಮಾನ್ಯ. ಆದರೆ ಕೆಎಸ್‌ಆರ್‌ಟಿಸಿ ಸಂಸ್ಥೆ ತನ್ನಲ್ಲೇ ಮಳೆ ಕೊಯ್ಲು ಮಾಡಿ ಮಾದರಿಯಾಗಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಆವರಣದಲ್ಲಿ ಮಳೆ ನೀರು ಇಂಗಿಸುವ ಘಟಕವನ್ನು ಸ್ಥಾಪಿಸಿದ್ದು, ಉಳಿದ ಇಲಾಖೆಗಳಿಗೆ ನೀರಪಾಠ ಬೋಧಿಸುತ್ತಿದೆ.

ಮುಕ್ರಂಪಾಡಿಯಲ್ಲಿರುವ ಇಲಾಖೆಯ ಕಚೇರಿ ಕಟ್ಟಡ ಆವರಣದಲ್ಲಿ ಎರಡೂವರೆ ವರ್ಷಗಳಿಂದ ಸದ್ದಿಲ್ಲದೇ ಮಳೆ ನೀರು ಇಂಗಿಸುವ ಕಾಯಕ ನಡೆಯುತ್ತಿದೆ. 2014ರಲ್ಲಿ ಸುಸಜ್ಜಿತವಾಗಿ ನಿರ್ಮಾಣ ಗೊಂಡ ವಿಭಾಗೀಯ ಕಚೇರಿ ಕಟ್ಟಡದ ಆವರಣದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ಮಳೆ ಕೊಯ್ಲು ಘಟಕ ಸ್ಥಾಪಿಸಲಾಗಿದೆ. ಎರಡಂತಸ್ತಿನ ಕಟ್ಟಡದ ಮೇಲ್ಭಾಗದ ನೀರು ಪೋಲಾಗದೆ, ನೇರವಾಗಿ ಬುವಿಯೊಳಗೆ ಇಳಿಯುತ್ತಿರುವುದು ಈ ಘಟಕದ ವಿಶೇಷ.

ಮಳೆ ನೀರಿನ ಕೊಯ್ಲು
ಇಲ್ಲಿನ ನೀರಿಂಗಿಸುವ ವಿಧಾನ ಈ ರೀತಿ ಇದೆ. ಕಟ್ಟಡದ ಆವರಣದಲ್ಲಿ ಎರಡು ಹಂತದಲ್ಲಿ ಬಾವಿ ಆಕಾರದ ಹೊಂಡ ಕೊರೆಯಲಾಗಿದೆ. ಮೊದಲ ಹಂತ ದಲ್ಲಿ (ಮೇಲ್ಭಾಗದಲ್ಲಿ) 3 ಅಡಿ ಉದ್ದ, 3 ಅಡಿ ಅಗಲ, 2ನೇ ಹಂತದಲ್ಲಿ (ಕೆಳಭಾಗ) 10 ಅಡಿ ಅಗಲದ, 14 ಅಡಿ ಆಳದ ಹೊಂಡ ತೆಗೆಯಲಾಗಿದೆ. ಕೆಳಭಾಗದಲ್ಲಿನ ಹೊಂಡದೊಳಗೆ ಸಿಮೆಂಟ್‌ ಬಳಸದೆ ಸುತ್ತಲೂ ಕಪ್ಪು ಕಲ್ಲುಗಳನ್ನು ಕಟ್ಟಲಾಗಿದೆ. ಕಲ್ಲುಗಳು ಸೆರೆಯೊಳಗೆ ಅಲ್ಲಲ್ಲಿ 5 ಅಡಿ ಉದ್ದ, 4 ಇಂಚಿನ 30ಕ್ಕೂ ಅಧಿಕ ಪೈಪ್‌ ಅನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ಮೇಲ್ಭಾಗದ ಹೊಂಡದಿಂದ ಹರಿದು ಬರುವ ನೀರು ಕೆಳಭಾಗದ ಹೊಂಡಕ್ಕೆ  ಹರಿಯುತ್ತದೆ. ಅಲ್ಲಿಂದ ಕಲ್ಲು ಕಟ್ಟಿದ ಸೆರೆಗೆ ಅಳವಡಿಸಿದ ಪೈಪು ಮೂಲಕ ಮಳೆ ನೀರು ಭೂಮಿಗೆ ಹರಿದು ಹೋಗುತ್ತದೆ.

ಮೇಲ್ಭಾಗದಲ್ಲಿ (ಅಂದರೆ ಮೊದಲ ಹಂತ) ದಪ್ಪ ಜಲ್ಲಿ, ಅನಂತರ ಸಣ್ಣ ಜಲ್ಲಿ, ಬಳಿಕ ಮರಳು ತುಂಬಿಸಲಾಗಿದೆ. ಮರಳು ಕೆಳಬಾವಿಗೆ ಬೀಳದಂತೆ ತಡೆಯಲು ಪೈಪುಗಳನ್ನು ಜೋಡಿಸಲಾಗಿದೆ. ಇದರಿಂದ ಮೇಲ್ಭಾಗದಲ್ಲಿ ಸಂಗ್ರಹವಾದ ವಸ್ತುಗಳು ಕೆಳಭಾಗಕ್ಕೆ ಬೀಳುವುದಿಲ್ಲ. ನೀರು ವಿವಿಧ ಹಂತಗಳಲ್ಲಿ ಶೋಧನೆಗೊಂಡು 14 ಅಡಿಯ ಬಾವಿಯೊಳಗೆ ಬೀಳುತ್ತದೆ. ಒಟ್ಟು 7 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಕಟ್ಟಡದ 12 ಸಾವಿರ ಲೀ. ಮಳೆ ನೀರು ಬಾವಿಗೆ ಸೇರುತ್ತದೆ. 

ನೀರಿನ ಸಂರಕ್ಷಣೆ ಅಗತ್ಯ
ನೀರು ನಮ್ಮ ಮೂಲ ಅಗತ್ಯಗಳಲ್ಲಿ ಒಂದು. ಅದರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಈ ನಿಟ್ಟಿನಲ್ಲಿ ವಿಭಾಗ ಕಚೇರಿಯಲ್ಲಿ ಮಳೆ ಕೊಯ್ಲು  ಪದ್ಧತಿಯಲ್ಲಿ ನೀರಿಂಗಿಸಲಾಗುತ್ತಿದೆ. ಮಳೆ ನೀರು ಪೋಲಾಗದೆ ಭೂಮಿಗೆ ಸೇರಲು ಸಹಕಾರಿ ಆಗಿದೆ.
– ನಾಗರಾಜ ಶಿರಾಲಿ, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ, ವಿಭಾಗ ಕಚೇರಿ

ಶುದ್ಧ ನೀರು ಇಂಗುವಿಕೆ
ನೀರು ಇಂಗಿಸುವ ಘಟಕವನ್ನು ವೈಜ್ಞಾನಿಕ ಪದ್ಧತಿಯಲ್ಲಿ ಅಳವಡಿಸಲಾಗಿದೆ. ಮಳೆ ನೀರಿನೊಂದಿಗೆ ಹರಿದು ಬರುವ ಕಸ ಕಡ್ಡಿಗಳನ್ನು ತಡೆದು, ಶುದ್ಧ ನೀರು ಭೂಮಿಯೊಳಗೆ ಸೇರುವಂತೆ ಮಾಡಲಾಗಿದೆ. 2 ಹಂತದಲ್ಲಿ ಈ ಘಟಕ ಕಾರ್ಯಾಚರಿಸುತ್ತಿದೆ.
– ಶರತ್‌ ಕುಮಾರ್‌, ಜೆ.ಇ., ಕೆಎಸ್‌ಆರ್‌ಟಿಸಿ, ವಿಭಾಗ ಕಚೇರಿ

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು

Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್‌ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

Charmadi ಘಾಟ್‌ನಲ್ಲಿ ಟಾಟಾ ಏಸ್‌ ಪಲ್ಟಿ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

Road Mishap ಸುಳ್ಯ: ಬೈಕ್‌ಗಳ ನಡುವೆ ಅಪಘಾತ

CAR

Road Mishap; ಕಾರು -ಬೈಕ್‌ ಢಿಕ್ಕಿ: ದಂಪತಿಗೆ ತೀವ್ರ ಗಾಯ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

Subramanya: ಕಸ ವಿಲೇವಾರಿ ವಾಹನ ಚರಂಡಿಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.