ಈ ಬಾರಿ ಕೊಕ್ಕೋ ದಾಖಲೆ ಉತ್ಪಾದನೆ : ಬೆಳೆಗಾರರ ನೆರವಿಗೆ ಕ್ಯಾಂಪ್ಕೋ
Team Udayavani, Jul 7, 2017, 6:59 PM IST
ಸುಳ್ಯ: ತಾಲೂಕಿನಲ್ಲಿ ರೈತರು ಮಾರುಕಟ್ಟೆಗೆ ಕೊಕ್ಕೋ ಹಸಿಬೀಜ ಮಾರಿದ ಪ್ರಮಾಣ ಗಮನಿಸಿದರೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಕೊಕ್ಕೋ ಬೆಳೆಯಾಗಿದೆ. ಇದೇ ವೇಳೆ ಎಂದಿನಂತೆ ಕೊಕ್ಕೊ ಬೀಜ ಖರೀದಿಸುತ್ತಿದ್ದ ಹಲವು ಕಂಪೆನಿಗಳು ಬೆಳೆಗಾರರಿಗೆ ಕೈಕೊಟ್ಟರೆ, ಕ್ಯಾಂಪ್ಕೋ ತನ್ನ ಸಾಮರ್ಥ್ಯಕ್ಕೂ ಮೀರಿ ಖರೀದಿಸಿ ರೈತರ ಸಹಾಯಕ್ಕೆ ಬಂದಿದೆ.
ಕಂಪೆನಿಯು 2016 ರ ಎಪ್ರಿಲ್ನಿಂದ 2017 ರ ಮಾರ್ಚ್ ಅಂತ್ಯಕ್ಕೆ ಅವಿಭಜಿತ ಜಿಲ್ಲೆಗಳಿಂದ ಖರೀದಿಸಿದ ಕೊಕ್ಕೋ ಹಸಿಬೀಜದ ಪ್ರಮಾಣ 19 ಸಾವಿರ ಕ್ವಿಂಟಾಲ್. ಈ ವರ್ಷದ ಮೂರು ತಿಂಗಳಲ್ಲೇ 28 ಸಾವಿರ ಕ್ವಿಂಟಾಲ್ ಖರೀದಿಸಲಾಗಿದೆ. ಕ್ಯಾಂಪ್ಕೋಗೆ ಇಷ್ಟೊಂದು ಪ್ರಮಾಣದಲ್ಲಿ ಕೊಕ್ಕೋ ಬೀಜ ಬಂದದ್ದು ಸುಳ್ಯ ಭಾಗದಿಂದಲೇ ಎನ್ನುವುದು ವಿಶೇಷ. ಕಳೆದ ವರ್ಷ ಪೂರ್ತಿ ಸುಳ್ಯ ಶಾಖೆಯಲ್ಲಿ ಖರೀದಿಸಲಾಗಿದ್ದ ಕೊಕ್ಕೋ ಬೀಜ ಒಟ್ಟು 1209 ಕ್ವಿಂಟಾಲ್. ಆದರೆ ಈ ಮೂರು ತಿಂಗಳಲ್ಲಿ 3969 ಕ್ವಿಂಟಾಲ್ ಖರೀದಿಯಾಗಿದೆ. ಇದು ಈ ಶಾಖೆಯೊಂದರಲ್ಲಿ ಮಾತ್ರವಲ್ಲ, ತಾಲೂಕಿನ ಗುತ್ತಿಗಾರು, ಹರಿಹರ, ಸಂಪಾಜೆ ಮತ್ತಿತರ ಹಲವಾರು ಶಾಖೆಗಳಲ್ಲೂ ಇದೇ ರೀತಿ ದಾಖಲೆ ಪ್ರಮಾಣದಲ್ಲಿ ಖರೀದಿಯಾಗಿದೆ.
ತಾಲೂಕಿನಲ್ಲಿ ಅಂದಾಜು 200 ಹೆಕ್ಟೇರ್ ಪ್ರದೇಶದಲ್ಲಿ ಕೊಕ್ಕೋ ಬೆಳೆಯಲಾಗುತ್ತಿದೆ. ಈ ಬಾರಿ ಇಳುವರಿ ಹೆಚ್ಚಿದ್ದ ಕಾರಣ, ಮಾರುಕಟ್ಟೆಗೆ ಹರಿವಿನ ಪ್ರಮಾಣ ಹೆಚ್ಚಿತ್ತು. ಆರಂಭದಲ್ಲಿ ದರ ಏರಿಕೆಯಿದ್ದು, ಕ್ಯಾಂಪ್ಕೋ ಗರಿಷ್ಠ 65 ರೂ. ಗಳಿಗೆ ಖರೀದಿಸಿತ್ತು. ವಿದೇಶದಿಂದ ಕಡಿಮೆ ಬೆಲೆಗೆ ಆಮದಾಗುವ ಕೊಕ್ಕೊದಿಂದಾಗಿ ಕಂಪೆನಿಗಳು ದೇಶೀಯ ಕೊಕ್ಕೊ ಖರೀದಿ ಸ್ಥಗಿತಗೊಳಿಸಿದವು. ಈ ಹಿನ್ನೆಲೆಯಲ್ಲಿ ದರ ಕುಸಿದಿತ್ತು.
ಗಮನಾರ್ಹ ಉತ್ಪಾದನೆ
ಈ ಬಾರಿ ತಾಲೂಕಿನಲ್ಲಿ ಕೊಕ್ಕೋ ಗಮನಾರ್ಹ ಉತ್ಪಾದನೆಗೊಂಡಿದೆ. ಬೇರೆ ಕಂಪೆನಿಗಳು ಖರೀದಿಸದಿದ್ದರೂ ಕೃಷಿಕರ ಹಿತಾಸಕ್ತಿ ಕಾಪಾಡಲು ಸಂಕಷ್ಟಗಳ ಮಧ್ಯೆಯೂ ಸಂಸ್ಥೆ ಖರೀದಿಗೆ ಮುಂದಾಯಿತು.
– ಕೃಷ್ಣಪ್ರಸಾದ್ ಮಡ್ತಿಲ, ಕ್ಯಾಂಪ್ಕೋ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್