ಮೋದಿ ಪ್ರಧಾನಿಯಾದ ಬಳಿಕ ದೇಶದ ಚಿತ್ರಣವೇ ಬದಲು


Team Udayavani, Feb 24, 2019, 7:09 AM IST

dvg.jpg

ದಾವಣಗೆರೆ: ಕಳೆದ ಐದು ವರ್ಷದಲ್ಲಿ ಭಾರತ ಸುರಕ್ಷಿತ ದೇಶವಾಗಿ ನಿರ್ಮಾಣವಾಗಿದೆ ಎಂದು ಬೆಂಗಳೂರಿನ ಚಿಂತಕ ರಾಧಕೃಷ್ಣ ಹೊಳ್ಳ ಹೇಳಿದರು. ನಗರದ ಶಾಂತಿ ರಾಯಲ್‌ ಸಭಾಂಗಣದಲ್ಲಿ ಶನಿವಾರ ವರ್ತಮಾನ ಇಂಟಲೆಕುcಯಲ್‌ ಡಿಬೆಟ್ಸ್‌ ಪೋರಂ ವತಿಯಿಂದ ಆಯೋಜಿಸಿದ್ದ ಭಾರತ ಅಂದು-ಇಂದು 2014-19 ರ ಒಂದು ಅವಲೋಕನ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಭವ್ಯ ಭಾರತದಲ್ಲಿ ಮೂರ್‍ನಾಲ್ಕು ದಶಕಗಳ ನಂತರ ಅಂದರೆ, 2014ರ ನಂತರ ಉತ್ತಮ ಸರ್ಕಾರ ಆಡಳಿತಕ್ಕೆ ಕೇಂದ್ರದಲ್ಲಿ ಬಂದಿದೆ. ಈ ಹಿಂದೆ ದೀಪಾವಳಿ, ಸ್ವಾತಂತ್ರ್ಯಾ ದಿನೋತ್ಸವ ಬಂದರೆ ಬಾಂಬ್‌ ಬೀಳಬಹುದಾ ಎಂಬ ಹೆದರಿಕೆ ಇತ್ತು. ಪ್ರತಿಷ್ಠೆಯ, ಸಾರ್ವಭೌಮತ್ವದ ಸಂಕೇತವಾದ ಸಂಸತ್ತಿನ ಮೇಲೂ ದಾಳಿ ನಡೆದ ಭೀತಿ ನೆನಪಿನಲ್ಲಿತ್ತು. ಆದರೆ, ಉತ್ತಮ ನಾಯಕ ದೇಶದ ಪ್ರಧಾನಿ ಆದ ಬಳಿಕ ದೇಶದ ಚಿತ್ರಣ ಬದಲಾಗಿದೆ ಎಂದರು. 

 ದೇಶದ ಜನ ನಿರ್ಭಯ ಹಾಗೂ ನೆಮ್ಮದಿಯಿಂದ ಬದುಕುವ ಪೂರಕ ವಾತಾವರಣ ನಿರ್ಮಾಣವಾಗಿದೆ. 2014ರ ಆರಂಭದ ದಿನಗಳಲ್ಲಿ 2ಜಿ ಹಗರಣ, ಆದರ್ಶ ಹೌಸಿಂಗ್‌ ಹಗರಣ, ಕಾಮನ್‌ ವೆಲ್ತ್‌ ಹಗರಣಗಳದ್ದೇ ಸುದ್ದಿ ದೇಶದಲ್ಲಿ ನಡೆಯುತ್ತಿತ್ತು. ಪ್ರಧಾನಮಂತ್ರಿ ಆದವರೂ ಕೈ ಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಇತ್ತು. ನಮ್ಮ ನಾಯಕನನ್ನು ನಾಯಕ ಎನ್ನುವ ಹೆಮ್ಮೆಯ ಪರಿಸ್ಥಿತಿ ಇರಲಿಲ್ಲ.  ಜಾಪ್ರಭುತ್ವದಲ್ಲಿರುವ ಪ್ರಜೆಗಳು ನಮಗೆ ಎಂತಹ ನಾಯಕ ಬೇಕುಎಂಬುದನ್ನು ಸ್ಪಷ್ಟವಾಗಿ ಜನರು ಹೇಳಿದರು.

30 ವರ್ಷದ ನಂತರ ದೇಶದಲ್ಲಿ ಸ್ಪಷ್ಟ ಬಹುಮತ ಇರುವ ಸರ್ಕಾರ ಬಂತು. ನರೇಂದ್ರಮೋದಿ ಸಂಸತ್‌ಗೆ ಪ್ರವೇಶ ಮಾಡುವ ಮುಂಚೆ ಮಂಡಿಯೂರಿ ನಮಿಸಿದ್ದು ಅದಕ್ಕೆ ಸಂಕೇತವಾಗಿತ್ತು. ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಸುರಕ್ಷತೆ, ಸ್ವಾವಲಂಬನೆ, ಸ್ವಾಭಿಮಾನ, ಸ್ವತ್ಛತೆಗೆ ಮೊದಲ ಆದ್ಯತೆ ನೀಡಿದ್ದಾರೆ. ಇದರಿಂದಾಗಿ 10 ವರ್ಷಗಳ ಹಿಂದೆ ಭಾರತೀಯರನ್ನು ಇತರೆ ದೇಶದವರು ಈಗ ನೋಡುವ ನೋಡುವ ಸ್ಥಿತಿ ಬದಲಾಗಿದೆ. ಇದು ಹೆಮ್ಮೆಯ ಸಂಗತಿ ಎಂದರು. 

ಮಾಹಿತಿ ಹಂಚಿಕೆ ಅವಕಾಶ: ದೇಶವು ಸಾಂಸ್ಕೃತಿಕ, ಶೈಕ್ಷಣಿಕ, ಗ್ರಾಮಾಭಿವೃದ್ಧಿ, ಆರ್ಥಿಕತೆ ಹೀಗೆ ಎಲ್ಲ ವಿಷಯಗಳಲ್ಲಿಯೂ ಮುನ್ನುಗ್ಗುತ್ತಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಗುಪ್ತಚರ, ಸೈನಿಕ, ಪೊಲೀಸ್‌ ವಲಯದಲ್ಲಿ ಸಮನ್ವಯತೆ ಕೊರತೆ ಇತ್ತು. ಮಾಹಿತಿ ಬಹಳ ವಿಳಂಬವಾಗಿ ತಲುಪುತ್ತಿತ್ತು. ಈಗ ಸ್ಥಳೀಯವಾಗಿ ಮಾಹಿತಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ, 1500ಕ್ಕೂ ಹೆಚ್ಚು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಹತರಾಗಿದ್ದಾರೆ ಎಂದು ಹೇಳಿದರು.

ದೇಶದ ಗಡಿಯಿಂದ 35 ಕಿ.ಮೀ. ಈಚೆಗೆ ಯಾವುದೇ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಇದು ಸಂಯುಕ್ತ, ಸಮನ್ವಯ ಕಾರ್ಯಾಚರಣೆಯಿಂದ ಸಾಧ್ಯವಾಗಿದೆ. ಈಗ ಸುರಕ್ಷಿತ ಭಾರತವನ್ನು ಜನರು ನೋಡುವಂತಾಗಿದೆ. ಚೆನೈನಲ್ಲಿ 25 ವರ್ಷಗಳ ಹಿಂದೆ ಬಾಂಬ್‌
ಸ್ಫೋಟ ನಡೆಸಿದವರನ್ನು ಇತ್ತೀಚೆಗೆ ಹಿಡಿಯಲಾಯಿತು. ದೇಶದಲ್ಲಿ ಇಂಟಲಿಜೆನ್ಸಿ ಟ್ರೈನಿಂಗ್‌ ಅನ್ನುವುದೇ ಇರಲಿಲ್ಲ. ಅದೊಂದು ಪನಿಷ್‌ಮೆಂಟ್‌ ಎಂಬ ರೀತಿ ಇತ್ತು. ಈಗ ತರಬೇತಿ ನೀಡಲಾಗಿದೆ. ರಾಜ್ಯಗಳಲ್ಲೂ ಸಹ ಪರಿಸ್ಥಿತಿ ಬದಲಾಗಿದೆ ಎಂದರು. 

ಮತಾಂತರಕ್ಕೆ ಕಡಿವಾಣ: ದೇಶದಲ್ಲಿ ಎಫ್‌ಸಿಆರ್‌ಎ ಕಾನೂನು ಬಲಪಡಿಸಿದ್ದರಿಂದ ವಿದೇಶಿ ದೇಣಿಗೆ ಪಡೆದು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಎನ್‌ಜಿಒಗೆ ಸಂಸ್ಥೆಗಳಿಗೆ ಕಡಿವಾಣ ಹಾಕಲಾಗಿದೆ. ಗೃಹ ಇಲಾಖೆ ಈ ಹಿನ್ನೆಲೆ ಪರಿಶೀಲನೆ ಮಾಡುತ್ತಿದೆ. ಸಾಕಷ್ಟು ಎನ್‌ಜಿಒಗಳು ದೇಣಿಗೆ ಹಣದಲ್ಲಿ ಸಮಾಜ ಸೇವೆ ಹೆಸರಿನಲ್ಲಿ ಕ್ರಿಶ್ಚಿಯನ್‌ ಮತಾಂತರಕ್ಕೆ ಬಳಸುತ್ತಿದ್ದವು. ಸರ್ಕಾರದ ಕ್ರಮದಿಂದ ಮತಾಂತರಕ್ಕೆ ಕಡಿವಾಣ ಹಾಕಲಾಗಿದೆ ಎಂದರು.

ವರ್ತಮಾನದ ನವೀನ್‌ ಗಡ್ಡದಗೂಳಿ, ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಉಪಸ್ಥಿತರಿದ್ದರು. ಪಿ.ಆರ್‌. ಐಸಿರಿ ಪ್ರಾರ್ಥಿಸಿದರು. ಮೇಘರಾಜ್‌ ಸ್ವಾಗತಿಸಿದರು, ಎಂ.ಸಿ. ಗಂಗಾಧರ್‌ ವಂದಿಸಿದರು.

ಟಾಪ್ ನ್ಯೂಸ್

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ

Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.