ಹಳ್ಳಿಗಳಿಂದ ನೆರವಿನ ಮಹಾಪೂರ
•ಅಕ್ಕಿ-ರೊಟ್ಟಿ, ಬೇಳೆ, ಹೊಸ ಬಟ್ಟೆ, ಚಟ್ನಿಪುಡಿ, ಬಿಸ್ಕತ್ತು ಸೇರಿ ಅಗತ್ಯ ವಸ್ತುಗಳು ತಾಲೂಕು ಆಡಳಿತಕ್ಕೆ ರವಾನೆ
Team Udayavani, Aug 13, 2019, 10:42 AM IST
ಹೊನ್ನಾಳಿ: ನೆರೆ ಸಂತ್ರಸ್ತರಿಗೆ ತಾಲೂಕಿನ ವಿವಿಧ ಗ್ರಾಮಗಳಿಂದ ಪರಿಹಾರದ ಮಹಾಪೂರವೇ ಹರಿದು ಬರುತ್ತಿದೆ.
ನೆರೆ ಸಂತ್ರಸ್ತರಿಗೆ ಅತ್ಯವಶ್ಯವಾಗಿರುವ ಅಕ್ಕಿ, ರೊಟ್ಟಿ, ಚಟ್ನಿಪುಡಿ, ಬಟ್ಟೆಗಳು ಸೇರಿದಂತೆ ಇತರ ಉಪಯುಕ್ತ ವಸ್ತುಗಳು ಗ್ರಾಮಗಳಿಂದ ಗ್ರಾಮಸ್ಥರು ತಾಲೂಕು ಆಡಳಿತಕ್ಕೆ ತಂದು ಒಪ್ಪಿಸುತ್ತಿದ್ದಾರೆ.
ತಾಲೂಕಿನ ನರಸಗೊಂಡನಹಳ್ಳಿ ಗ್ರಾಮದಿಂದ 30 ಕ್ವಿಂಟಲ್ ಅಕ್ಕಿ, ಎರಡುವರೆ ಕ್ವಿಂಟಲ್ ಬೇಳೆ, ಹೊಸ ಬಟ್ಟೆಗಳು, ರೊಟ್ಟಿ, ಚಟ್ನಿಪುಡಿ ಹಾಗೂ ಬಿಸ್ಕತ್ತುಗಳನ್ನು ಟ್ರ್ಯಾಕ್ಟರ್ನಲ್ಲಿ ಹಾಕಿಕೊಂಡು ಬಂದು ತಾಲೂಕು ಆಡಳಿತಕ್ಕೆ ಒಪ್ಪಿಸಿದ್ದಾರೆ. ಕಮ್ಮಾರಗಟ್ಟೆ ಗ್ರಾಮದಿಂದ 4 ಕ್ವಿಂಟಲ್ ಅಕ್ಕಿ, ರೊಟ್ಟಿ, ಚಟ್ನಿಪುಡಿ, ಬಟ್ಟೆ, ಬಿಸ್ಕತ್ತುಗಳನ್ನು ತಾಲೂಕು ಆಡಳಿತಕ್ಕೆ ನೀಡಿದ್ದಾರೆ.
ಸಾಸ್ವೆಹಳ್ಳಿ ಗ್ರಾಮದವರು ಅಕ್ಕಿ, ರೊಟ್ಟಿ ತಂದು ಕೊಟ್ಟಿದ್ದಾರೆ. ರೊಟ್ಟಿ, ಚಟ್ನಿಪುಡಿ ಹಾಗೂ ಬಿಸ್ಕತ್ತುಗಳನ್ನು ಆದಷ್ಟು ಬೇಗನೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಕ್ಕಿ ಸಂಗ್ರಹವನ್ನು ನೋಡಿ ಕಳಿಸಿಕೊಡಲಾಗುವುದು ಎಂದು ಎಂದು ತಹಶೀಲ್ದಾರ್ ತುಷಾರ್ ಬಿ.ಹೊಸೂರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್