ಜಿಲ್ಲೆಯ ಜನರಲ್ಲಿದೆ ಬೆಟ್ಟದಷ್ಟು ನಿರೀಕ್ಷೆ


Team Udayavani, Mar 2, 2022, 5:24 PM IST

davanagere news

ದಾವಣಗೆರೆ: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.4 ರಂದು ಮಂಡಿಸಲಿರುವ ಚೊಚ್ಚಲ ಬಜೆಟ್‌ನಲ್ಲಿಸರ್ಕಾರಿ ವೈದ್ಯಕೀಯ ಕಾಲೇಜು, ಕೃಷಿ ಕಾಲೇಜು,ಪ್ರತ್ಯೇಕ ಹಾಲು ಒಕ್ಕೂಟ, ಜವಳಿ ಪಾರ್ಕ್‌ಗೆ ಉತ್ತೇಜನ ಒಳಗೊಂಡಂತೆ ಅಭಿವೃದ್ಧಿಗೆ ಪೂರಕ ಕೊಡುಗೆಗಳ ಘೋಷಣೆ ಮಾಡುವರೇ ಎಂಬುದುನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಜಿಲ್ಲೆಯ ಜನರ ನಿರೀಕ್ಷೆ.ಈ ಬಾರಿಯ ಬಜೆಟ್‌ ಹೇಳಿ ಕೇಳಿ ಚುನಾವಣಾವರ್ಷದ ಬಜೆಟ್‌.

ಹಾಗಾಗಿ ಜಿಲ್ಲೆಯ ಜನರಬಹು ದಿನಗಳ ಬೇಡಿಕೆ ಈಡೇರಿಸುವ ಮೂಲಕಮುಂದಿನ ವಿಧಾನಸಭಾ ಚುನಾವಣೆಗೆ ಮತಬ್ಯಾಂಕ್‌ ಗಟ್ಟಿ ಮಾಡಿಕೊಳ್ಳುವ ಲೆಕ್ಕಾಚಾರದಹಿನ್ನೆಲೆಯಲ್ಲಿ ನೆರೆಯ ಹಾವೇರಿ ಜಿಲ್ಲೆಯಶಿಗ್ಗಾಂವಿ ಕ್ಷೇತ್ರ ಪ್ರತಿನಿಧಿಸುವ ಬಸವರಾಜಬೊಮ್ಮಾಯಿ ದಾವಣಗೆರೆಗೂ ಭರಪೂರ ಕೊಡುಗೆನೀಡಬಹುದು ಎಂಬ ಕಾತರ ಮನೆ ಮಾಡಿದೆ.”ಮೆಡಿಕಲ್‌ ಹಬ್‌’ ಖ್ಯಾತಿಯದಾವಣಗೆರೆಯಲ್ಲಿ ಸರ್ಕಾರಿ ವೈದ್ಯಕೀಯಕಾಲೇಜು ಆಗಬೇಕು ಎಂಬ ಬಹು ದಶಕಗಳಬೇಡಿಕೆ ಕಳೆದ ಬಜೆಟ್‌ನಲ್ಲಿ ಈಡೇರಿತ್ತು.ಆದರೆ ಪೂರ್ಣ ಪ್ರಮಾಣದಲ್ಲಿ ಆಗದೆ ಖಾಸಗಿಸಹಭಾಗಿತ್ವ(ಪಿಪಿಪಿ) ಮಾದರಿಯಲ್ಲಿ ಸರ್ಕಾರಿವೈದ್ಯಕೀಯ ಕಾಲೇಜು ಆದ ಕಾರಣ ಎಲ್ಲರಿಗೂಬೇಸರ ಇದೆ. ಪಿಪಿಪಿ ಮಾದರಿಯಲ್ಲಿ ಸರ್ಕಾರಿವೈದ್ಯಕೀಯ ಕಾಲೇಜು ಪ್ರಾರಂಭಿಸಿದರೆಜನಸಾಮಾನ್ಯರಿಗೆ ಆರ್ಥಿಕ ಹೊರೆ ತಪ್ಪಿದ್ದಲ್ಲ.

ಹೆಸರಿಗೆ ಮಾತ್ರ ಸರ್ಕಾರಿ ಆಗುತ್ತದೆ. ಹಾಗಾಗಿಪೂರ್ಣ ಪ್ರಮಾಣದಲ್ಲೇ ಸರ್ಕಾರಿ ವೈದ್ಯಕೀಯಕಾಲೇಜು ಆಗ ಬೇಕು ಎಂಬ ಆಗ್ರಹ ಇದೆ.ಬೊಮ್ಮಾಯಿಯವರು ಅದಕ್ಕೆ ಸ್ಪಂದಿಸುವರೇಎಂಬುದು ಈಗ ಎಲ್ಲರ ಮುಂದಿರುವ ಪ್ರಶ್ನೆ.ಒಂದು ಕಡೆ ಭದ್ರಾ ಅಚ್ಚುಕಟ್ಟು, ಇನ್ನೊಂದುಕಡೆ ಮಳೆಯಾಶ್ರಿತ ಪ್ರದೇಶದೊಂದಿಗೆ ಅರೆಮಲೆನಾಡಿನಂತಿರುವ ದಾವಣಗೆರೆ ಜಿಲ್ಲೆಯಲ್ಲಿಕೃಷಿ ಕಾಲೇಜು ಆಗಬೇಕು ಎಂಬ ಒತ್ತಾಯವೂಇದೆ. ಪ್ರತಿ ಬಾರಿಯ ಬಜೆಟ್‌ ಸಮಯದಲ್ಲಿಕೃಷಿ ಕಾಲೇಜಿಗೆ ಒತ್ತಾಯ ಕೇಳಿ ಬರುತ್ತದೆ. ಆದರೆಈವರೆಗೂ ಬೇಡಿಕೆ ಈಡೇರಿಲ್ಲ. ಈ ಬಾರಿಯಬಜೆಟ್‌ನಲ್ಲಿ ಈಡೇರುವುದೂ ಇಲ್ಲ.

ಏಕೆಂದರೆ ಕೃಷಿಕಾಲೇಜು ಎಂಬ ಪ್ರಸ್ತಾವನೆಯೇ ಸಲ್ಲಿಕೆಯಾಗಿಲ್ಲ.ಹಾಗಾಗಿ ಕೃಷಿ ಕಾಲೇಜು ಆಗುವುದು ಗಾವುದದೂರದ ಮಾತುಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಪ್ರಮುಖಪಾಲುದಾರಿಕೆ ಹೊಂದಿರುವ ದಾವಣಗೆರೆ ಮತ್ತುಚಿತ್ರದುರ್ಗ ಜಿಲ್ಲೆ ಸೇರಿಕೊಂಡು ಪ್ರತ್ಯೇಕ ಹಾಲುಒಕ್ಕೂಟ (ದಾಮುಲ್‌) ರಚಿಸಬೇಕು ಎಂಬಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ನೇತೃತ್ವದಸರ್ಕಾರ ಪ್ರತ್ಯೇಕ ಹಾಲು ಒಕ್ಕೂಟವನ್ನು ಬಜೆಟ್‌ನಲ್ಲೇ ಘೋಷಣೆ ಮಾಡಿತ್ತು. ಆದರೆ ಈ ಕ್ಷಣಕ್ಕೂಅದು ಘೋಷಣೆಯಾಗಿಯೇ ಉಳಿದಿದೆ. ರಸ್ತೆಕಾರಣಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಅಸ್ತಿತ್ವಕ್ಕೆಬಂದಿಲ್ಲ.

ಬಸವರಾಜ ಬೊಮ್ಮಾಯಿ ಅವರು ತಮ್ಮಬಜೆಟ್‌ನಲ್ಲಿ ಹಾಲು ಒಕ್ಕೂಟದಸಮಸ್ಯೆ ಇತ್ಯರ್ಥಕ್ಕೆ ದಿಟ್ಟ ಕ್ರಮತೆಗೆದುಕೊಳ್ಳಲೇಬೇಕಾಗಿದೆ.ಮಾಜಿ ಮುಖ್ಯಮಂತ್ರಿಬಿ.ಎಸ್‌. ಯಡಿಯೂರಪ್ಪ2021ರ ಮಾ. 8ರಂದುಮಂಡಿಸಿದ ಬಜೆಟ್‌ನಲ್ಲಿದಾವಣಗೆರೆಗೆ ಜಯದೇವಹೃದಯರೋಗ ಉಪ ಕೇಂದ್ರದಘೋಷಣೆ ಮಾಡಿದ್ದರು.ಉಪಕೇಂದ್ರ ಆರಂಭದಪ್ರಾರಂಭಿಕ ಹಂತದ ಕಾರ್ಯಗಳನ್ನು ಹೊರತುಪಡಿಸಿದರೆ ಮಹತ್ವದ ಕೆಲಸಗಳು ನಡೆದಿಲ್ಲ.

ಬಜೆಟ್‌ನಲ್ಲಿ ಉಪ ಕೇಂದ್ರದ ಬಗ್ಗೆ ದಿಟ್ಟ ಹೆಜ್ಜೆ ಇಡುವಮೂಲಕ ಬಸವರಾಜ ಬೊಮ್ಮಾಯಿಯವರುಯಡಿಯೂರಪ್ಪ ಅವರ ಘೋಷಣೆಗೆ ಪೂರಕವಾಗಿಸ್ಪಂದಿಸುವ ಮೂಲಕ ವಿವಿಧ ಜಿಲ್ಲೆಯ ಜನರಿಗೆಅನುಕೂಲ ಮಾಡಿಕೊಡುವ ನಿರೀಕ್ಷೆ ಇದೆ.ಜವಳಿ ಮಿಲ್‌ಗ‌ಳಿಂದ ಒಂದೊಮ್ಮೆ”ಮ್ಯಾಂಚೆಸ್ಟರ್‌’ ಖ್ಯಾತಿ ಹೊಂದಿದ್ದದಾವಣಗೆರೆಯಲ್ಲಿ ಜೆಡಿಎಸ್‌-ಬಿಜೆಪಿ ಸಮ್ಮಿಶ್ರಸರ್ಕಾರದಲ್ಲಿ ಮಂಜೂರಾಗಿದ್ದ ಜವಳಿ ಪಾರ್ಕ್‌ಇನ್ನೂ ಹೆಚ್ಚಿನ ಅಭಿವೃದ್ಧಿಯ ನಿರೀಕ್ಷೆಯಲ್ಲಿದೆ.

ಈ ಬಾರಿಯ ಬಜೆಟ್‌ನಲ್ಲಿ ಜವಳಿ ಪಾರ್ಕ್‌ಗೆಇನ್ನಷ್ಟು ಉತ್ತೇಜನ ನೀಡಿದಲ್ಲಿದಾವಣಗೆರೆಯ ಇತಿಹಾಸಒಂದಷ್ಟು ಮರುಕಳಿಸುವ,ಸಾವಿರಾರು ಜನರಿಗೆ ಉದ್ಯೋಗಭದ್ರತೆ ದೊರೆಯಲಿದೆ.ಪ್ರವಾಸೋದ್ಯಮ ಕ್ಷೇತ್ರದಲ್ಲಿಹಿಂದುಳಿದಿರುವ ಜಿಲ್ಲೆಯಲ್ಲಿಪ್ರವಾಸಿ ತಾಣಗಳ ಅಭಿವೃದ್ಧಿ ಕ್ರಮಕೈಗೊಂಡಲ್ಲಿ ಪ್ರವಾಸೋದ್ಯಮದಜೊತೆಗೆ ಜನರ ಆರ್ಥಿಕ ಸ್ಥಿತಿಯೂಉತ್ತಮವಾಗಲಿದೆ. ಕಳೆದಭಾನುವಾರ ಹರಿಹರದಲ್ಲಿ ನಡೆದ ಕಾರ್ಯಕ್ರಮದಲ್ಲಿಸಿಎಂ ಬಸವರಾಜ ಬೊಮ್ಮಾಯಿ ಪ್ರವಾಸೋದ್ಯಮಅಭಿವೃದ್ಧಿ ಬಗ್ಗೆ ಮಾತನಾಡಿದ್ದರು. ಬಹು ನಿರೀಕ್ಷಿತದಾವಣಗೆರೆ-ಬೆಂಗಳೂರು ರೈಲ್ವೆ ಯೋಜನೆ,ಸ್ಮಾರ್ಟ್‌ಸಿಟಿ ಯೋಜನೆಗೆ ರಾಜ್ಯ ತನ್ನ ಪಾಲುನೀಡಲಿ ಎಂಬ ಬೇಡಿಕೆಯೂ ಇದೆ.

ರಾ. ರವಿಬಾಬು

ಟಾಪ್ ನ್ಯೂಸ್

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಇಂದು ರಾತ್ರಿಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್‌ ಸೇವೆ ಸ್ಥಗಿತ

ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!

Madikeri ಸಿಹಿತಿಂಡಿ ನೀಡದ್ದಕ್ಕೆ ಮದುವೆಯೇ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ

CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ

accident

Davanagere; ಟೈರ್ ಸಿಡಿದು ಸೇತುವೆ ಮೇಲಿಂದ ಉರುಳಿದ ಕಾರು:ಇಬ್ಬರು ಮೃತ್ಯು

ಸಿ.ಟಿ. ರವಿ

Pen drive Case; ಹಾಲಿ ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಸಿ.ಟಿ. ರವಿ

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

Gayatri Siddeshwar: “ರಾಹುಲ್‌ ಪ್ರಧಾನಿಯಾಗಿಸುವ ಪಾಕಿಸ್ತಾನ ಷಡ್ಯಂತ್ರ ಫಲ ನೀಡಲ್ಲ’

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್‌ ಇನ್ನಿಲ್ಲ

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

ಕಾಡಾನೆ ತಡೆಗೆ ಜೋತಾಡುವ ಸೌರ ವಿದ್ಯುತ್‌ ಬೇಲಿ!

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

Todays Horoscope: ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದ ಕೀಟಲೆಗಳು ಇರಲಿದೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್ಐಆರ್‌ ಸಾಧ್ಯತೆ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Agumbe ಘಾಟಿಯಲ್ಲಿ ಸುರಂಗ ಮಾರ್ಗ ಯೋಜನೆ ಮುನ್ನೆಲೆಗೆ; ಕರಾವಳಿ-ಮಲೆನಾಡು ಬೆಸೆಯಲು ಸುರಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.