ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿಗೆ ಐವರು ಬಲಿ
Team Udayavani, Aug 21, 2020, 12:44 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರದಂದು ಕೋವಿಡ್ 19 ಸೋಂಕಿಗೆ ಐವರು ಬಲಿಯಾಗಿದ್ದಾರೆ.
ಕೋವಿಡ್ 19 ಸೋಂಕಿನ ಜೊತೆಯಲ್ಲಿ ಕ್ಷಯದಿಂದ ಬಳಲುತ್ತಿದ್ದ ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ 51 ವರ್ಷದ ವೃದ್ಧೆ (ರೋಗಿ ನಂಬರ್ 250030), ದಾವಣಗೆರೆಯ ವಿನೋಬ ನಗರದ 63 ವರ್ಷದ ವೃದ್ಧ (ರೋಗಿ ನಂಬರ್ 256636), ಎಂಸಿಸಿ ಎ ಬ್ಲಾಕ್ ನಿವಾಸಿ 68 ವರ್ಷದ ವೃದ್ಧ (ರೋಗಿ ನಂಬರ್ 216481), ಲೇಬರ್ ಕಾಲೋನಿಯ 60 ವರ್ಷದ ವೃದ್ಧ (ರೋಗಿ ನಂಬರ್ 263539), ದಾವಣಗೆರೆ ತಾಲೂಕಿನ ಹೊಸ ಬೆಳವನೂರು ಗ್ರಾಮದ 75 ವರ್ಷದ ವೃದ್ಧೆ (ರೋಗಿ ನಂಬರ್ 243869) ಮೃತಪಟ್ಟವರು.
ಐವರ ನಿಧನದಿಂದ ಜಿಲ್ಲೆಯಲ್ಲಿ ಇದುವರೆಗೆ ಈ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಒಟ್ಟು 244 ಜನರಲ್ಲಿ ಹೊಸದಾಗಿಸೋಂಕು ಪತ್ತೆಯಾಗಿದೆ. ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ 67 ವರ್ಷದ ವೃದ್ಧೆ (ರೋಗಿ ನಂಬರ್ 255446) ಯಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್ 235762 ಸಂಪರ್ಕದಿಂದ ದೊಡ್ಡಬಾತಿ ಗ್ರಾಮದ 43 ವರ್ಷದ ವ್ಯಕ್ತಿ (ರೋಗಿ ನಂಬರ್ 255447) ಗೆ ಸೋಂಕು ಹರಡಿದೆ.
ನ್ಯಾಮತಿ ಪಟ್ಟಣದ 4 ವರ್ಷದ ಬಾಲಕಿ(ರೋಗಿ ನಂಬರ್ 256119), 18 ವರ್ಷದ ಯುವಕ (ರೋಗಿ ನಂಬರ್ 256120) ಕಾಣಿಸಿಕೊಂಡಿರುವ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ರೋಗಿ ನಂಬರ್ 256128 ಸಂಪರ್ಕದಿಂದ ಶಾಮನೂರು ಗ್ರಾಮದ 32 ವರ್ಷದ ಮಹಿಳೆ (ರೋಗಿ ನಂಬರ್ 256129), 5 ವರ್ಷದ ಬಾಲಕಿ (ರೋಗಿ ನಂಬರ್ 25130), 9 ವರ್ಷದ ಬಾಲಕಿ (ರೋಗಿ ನಂಬರ್ 25131), 6 ವರ್ಷದ ಬಾಲಕಿ (ರೋಗಿ ನಂಬರ್ 256132), 1 ವರ್ಷದ ಬಾಲಕ (ರೋಗಿ ನಂಬರ್ 256133) ಸೋಂಕು ಹರಡಿದೆ.
ದಾವಣಗೆರೆ ನಗರ ಮತ್ತು ತಾಲೂಕಿನ ವಿವಿಧ ಭಾಗದ 133, ಹರಿಹರದ 28, ಜಗಳೂರಿನ 8, ಚನ್ನಗಿರಿಯ 39, ಹೊನ್ನಾಳಿಯ 32 ಹಾಗೂ ಹೊರ ಜಿಲ್ಲೆಯ ನಾಲ್ವರು ಒಳಗೊಂಡಂತೆ 244 ಜನರು ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ಹರಿಹರದ 68 ವರ್ಷದ ವೃದ್ಧ (ರೋಗಿ ನಂಬರ್ 137255), ಕಾಳಿದಾಸ ನಗರದ 31 ವರ್ಷದ ಮಹಿಳೆ (ರೋಗಿ ನಂಬರ್ 147498), ದಾವಣಗೆರೆ ಪೊಲೀಸ್ ವಸತಿ ಸಮುಚ್ಚಯದ 41 ವರ್ಷದ ವ್ಯಕ್ತಿ (ರೋಗಿ ನಂಬರ್ 148069) ಒಳಗೊಂಡಂತೆ 381 ಜನರು ಆಸ್ಪತ್ರೆಯಿಂದ ಬಿಡುಗಡೆಯಾದವರು. ಸೋಂಕಿತರಗಿಂತಲೂ ಬಿಡುಗಡೆಯಾದವರೇ ಹೆಚ್ಚು. ಜಿಲ್ಲೆಯಲ್ಲಿ 6270 ಪ್ರಕರಣಗಳಲ್ಲಿ ಈವರೆಗೆ 4230 ಜನರು ಡಿಸ್ಚಾರ್ಜ್ ಆಗಿದ್ದಾರೆ. 141 ಜನರು ಮೃತಪಟ್ಟವರು. 1899 ಸಕ್ರಿಯ ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ