ಚುನಾವಣಾ ವೀಕ್ಷಕರಿಂದ ಹಂಪಿ ಸ್ಮಾರಕ ವೀಕ್ಷಣೆ
Team Udayavani, May 2, 2018, 5:08 PM IST
ಹೊಸಪೇಟೆ: ಮುಂದಿನ ವಿಧಾನಸಭಾ ಚುನಾವಣೆ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಮೇಲೆ ನಿಗಾ ವಹಿಸಲು ಜಿಲ್ಲೆಗೆ ಆಗಮಿಸಿರುವ ಚುನಾವಣೆ ವೀಕ್ಷಕರು, ಐತಿಹಾಸಿಕ ಹಂಪಿಗೆ ಸೋಮವಾರ ಭೇಟಿ ಪ್ರಸಿದ್ಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ವಿವಿಧ ರಾಜ್ಯಗಳಿಂದ ಚುನಾವಣೆ ವೀಕ್ಷಕರು ಹಾಗೂ ಚುನಾವಣೆ ಲೆಕ್ಕ ನಿರೀಕ್ಷಕರಾಗಿ ನಿಯೋಜನೆಯಾಗಿರುವ 10ಕ್ಕೂ ಆಧಿಕ ಐಎಎಸ್ ಅಧಿಕಾರಿಗಳ ತಂಡ, ಚುನಾವಣೆ ಕೆಲಸದ ನಡುವೆಯೂ ಹಂಪಿಗೆ ಭೇಟಿ ನೀಡಿದರು.
ಮೊದಲಿಗೆ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಮಾಡಿದ ಅಧಿಕಾರಿಗಳ ತಂಡ, ಹಜಾರ ರಾಮ ದೇವಸ್ಥಾನ, ರಾಣಿಸ್ನಾನ ಗೃಹ, ಉಗ್ರನರಸಿಂಹ, ಕೃಷ್ಣ ದೇವಸ್ಥಾನ, ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಬಡವಿಲಿಂಗ, ರಾಣಿಸ್ನಾನ ಗೃಹ, ಮಹಾನವಮಿ ದಿಬ್ಬ, ಕಮಲ ಮಹಲ್ ಹಾಗೂ ಗಜಶಾಲೆ ವೀಕ್ಷಣೆ ಬಳಿಕ, ಎದುರು ಬಸವಣ್ಣ ಮಂಟಪದ ಬಳಿ ಹಂಪಿ ಬೈಲೈಟ್ ವೀಕ್ಷಣೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದರು.
ಸಂಜೆ ಹಂಪಿ ಹೇಮಕೂಟ, ಮಾಲ್ಯವಂತ ರಘುನಾಥಸ್ವಾಮಿ ದೇಗುಲ ಹಾಗೂ ಎದುರು ಬಸವಣ್ಣ ಬಳಿ ಸೂರ್ಯಹಸ್ತವನ್ನು ವೀಕ್ಷಣೆ ಮಾಡಿ ಹಂಪಿಯ ಸೊಬಗು ಕಣ್ತುಂಬಿಕೊಂಡರು. ಐಎಎಸ್ ಅಧಿಕಾರಿಗಳಾದ ಎಲ್. ಎಸ್.ಕೇನ್, ಡಾ| ಅಶೋಕ್ ಚಂದ್ರ, ಸಂಜಯಗಾಂಧಿ, ನೇಮಿಸಿಂಗ್, ಪೋಶೆಟ್ಟಿ, ಜಿತೇಂದ್ರಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ