ಕಟ್ಟಡ ನಿರ್ಮಾಣ ವಸ್ತುಗಳ ಬೆಲೆ ಇಳಿಕೆಯಾಗಲಿ: ಜಯಣ್ಣ
Team Udayavani, Jun 12, 2020, 8:09 AM IST
ಸಾಂದರ್ಭಿಕ ಚಿತ್ರ
ದಾವಣಗೆರೆ: ಲಾಕ್ಡೌನ್ ತೆರವಿನ ನಂತರ ಹೆಚ್ಚಾಗಿರುವ ಜೆಲ್ಲಿ, ಸಿಮೆಂಟ್, ಎಂ-ಸ್ಯಾಂಡ್, ಕಬ್ಬಿಣ ಇತರೆ ಅಗತ್ಯ ವಸ್ತುಗಳ ಬೆಲೆ ಇಳಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ವರ್ತಕರೊಂದಿಗೆ ಸಭೆ ನಡೆಸಬೇಕು ಎಂದು ದಾವಣಗೆರೆ ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಚ್. ಜಯಣ್ಣ ಒತ್ತಾಯಿಸಿದ್ದಾರೆ.
ಲಾಕ್ಡೌನ್ ಮುನ್ನ ನಗರಪಾಲಿಕೆಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳ ಗುತ್ತಿಗೆ ಪಡೆಯಲಾಗಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಲಾಗಿತ್ತು. ಒಂದು ವಾರದ ಹಿಂದೆ ಅಧಿಕಾರಿಗಳು ಸಭೆ ನಡೆಸಿ, ಅಭಿವೃದ್ಧಿ ಕಾರ್ಯಗಳ ಮುಂದುವರೆಸಲು ಸೂಚಿಸಿದ್ದರು. ಕಾಮಗಾರಿಗೆ ಬೇಕಾದ ಜೆಲ್ಲಿ, ಸಿಮೆಂಟ್, ಎಂ-ಸ್ಯಾಂಡ್, ಕಬ್ಬಿಣ ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಕೆಲಸ ಪ್ರಾರಂಭಿಸಲು ಸಾಕಷ್ಟು ಕಷ್ಟ ಆಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಾಕ್ಡೌನ್ಗಿಂತ ಮುಂಚೆ 20 ಎಂಎಂ ಜೆಲ್ಲಿ ಒಂದು ಅಡಿಗೆ 28 ರಿಂದ 30 ರೂ., 40 ಎಂಎಂ ಜೆಲ್ಲಿ 25 ರೂ., 1 ಟನ್ ಎಂ-ಸ್ಯಾಂಡ್ಗೆ 850-900 ರೂ., 1 ಚೀಲ ಸಿಮೆಂಟ್ ಗೆ 300 ರೂ. ಇತ್ತು. ನಾವು ಅದೇ ದರದಲ್ಲಿ ಗುತ್ತಿಗೆ ಪಡೆದುಕೊಂಡಿದ್ದೇವೆ. ಈಗ ಏಕಾಏಕಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗಿದೆ. 20 ಎಂಎಂ ಜೆಲ್ಲಿ ಒಂದು ಅಡಿಗೆ 50 ರೂ., 40 ಎಂಎಂ ಜೆಲ್ಲಿ 40 ರೂ., 1 ಟನ್ ಎಂ-ಸ್ಯಾಂಡ್ಗೆ 1200-1300 ರೂ., 1 ಚೀಲ ಸಿಮೆಂಟ್ ಗೆ 430 ರೂ. ಆಗಿದೆ. ಯಾರಿಗೂ ಹೇಳದೆ ಕೇಳದೆ ಏಕಾಏಕಿ ದರ ಹೆಚ್ಚಳ ಮಾಡುವಅಧಿಕಾರ ಕೊಟ್ಟವರು ಯಾರು ಎಂಬುದೇ ಗೊತ್ತಾಗುತ್ತಿಲ್ಲ. ವ್ಯಾಪಾರಸ್ಥರ ಕೇಳಿದರೆ ರಾಜಧನ್ ಎಂದು ಹೇಳುತ್ತಾರೆ. ರಾಜಧನ ಅವರು ಹೇಳಿದಂತೆ ಹೆಚ್ಚಾಗಿಲ್ಲ. 1-2 ರೂ.
ಹೆಚ್ಚು ತೆಗೆದುಕೊಳ್ಳಲಿ. ನೂರಾರು ರೂಪಾಯಿ ಹೆಚ್ಚಿಸಿದರೆ ಹೇಗೆ ಎಂದು ಪ್ರಶ್ನಿಸಿದರು. 20 ಎಂಎಂ ಜೆಲ್ಲಿ, 40 ಎಂಎಂ ಜೆಲ್ಲಿ, ಎಂ-ಸ್ಯಾಂಡ್, ಸಿಮೆಂಟ್ ದರ ಇಳಿಸುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಶುಕ್ರವಾರ ದಾವಣಗೆರೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮತ್ತೆ ಮನವಿ ಮಾಡಿಕೊಳ್ಳಲಾಗುವುದು. ಅವರು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಈಗಿನ ದರದಂತೆ ಕೆಲಾ ಮಾಡಿದರೆ ಪ್ರತಿ ಕೆಲಸಕ್ಕೆ ಶೇ. 25 ರಿಂದ 30 ರಷ್ಟು ನಷ್ಟ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಘದ ಗೌರವಾಧ್ಯಕ್ಷ ಆರ್. ವಿರೂಪಾಕ್ಷಪ್ಪ ಕಕ್ಕರಗೊಳ್ಳ, ಕೆ.ಗಂಗಪ್ಪ, ಎಚ್. ರುದ್ರಪ್ಪ, ಚಂದ್ರಪ್ಪ, ಪರಮೇಶ್ವರಪ್ಪ, ಚಂದ್ರಪ್ಪ, ಎ.ಎಂ. ರಾಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
MUST WATCH
ಹೊಸ ಸೇರ್ಪಡೆ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ