ಫ್ಲೋರೈಡ್‌ ನೀರಿಗೆ ನಲುಗಿದ ಜನ

ಹರಿಹರ-ಹೊನ್ನಾಳಿಯಲ್ಲಿ ಹೆಚ್ಚು ಜನರಿಗೆ ಫ್ಲೋರೋಸಿಸ್‌,ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹ

Team Udayavani, Nov 23, 2020, 8:47 PM IST

ಫ್ಲೋರೈಡ್‌ ನೀರಿಗೆ ನಲುಗಿದ ಜನ

ಸಾಮದರ್ಭಿಕ ಚಿತ್ರ

ದಾವಣಗೆರೆ: ಫ್ಲೊರೈಡ್‌ಯುಕ್ತ ನೀರಿನ ಸೇವನೆಯಿಂದಾಗಿ ಜಿಲ್ಲೆಯಲ್ಲಿ ಹೆಚ್ಚು ಜನರು ಫ್ಲೋರೋಸಿಸ್‌ ಕಾಯಿಲೆಗೆ ತುತ್ತಾಗುತ್ತಿದ್ದು,ಕುಡಿಯುವ ನೀರಿನ ಶುದ್ಧತೆ ಬಗ್ಗೆ ಜನರಲ್ಲಿ ಆತಂಕ ಶುರುವಾಗಿದೆ.

ಜಿಲ್ಲೆಯ ಹೊನ್ನಾಳಿ ಹಾಗೂ ಹರಿಹರ ತಾಲೂಕುಗಳಲ್ಲಿ ಅತಿ ಹೆಚ್ಚು ಜನರಲ್ಲಿ ಫ್ಲೋರೋಸಿಸ್‌ಕಾಯಿಲೆ ಕಂಡು ಬಂದಿದೆ. ಹೊನ್ನಾಳಿ ತಾಲೂಕಿನಲ್ಲಿಬಾವಿ, ಕೈಪಂಪ್‌ಗ್ಳ ಮೂಲಕ ಪಡೆಯುವಫ್ಲೋರೈಡ್‌ಯುಕ್ತ ನೀರು ಸೇವಿಸಿ ಹಲವರಿಗೆ ಫ್ಲೋರೋಸಿಸ್‌ ಕಾಯಿಲೆ ಬಂದಿದೆ. ಫ್ಲೋರೈಡ್‌ಯುಕ್ತನೀರಿನಿಂದ ಆಗಬಹುದಾದ ದುಷ್ಪರಿಣಾಮಗಳಅರಿವಿಲ್ಲದೆ ಈ ಭಾಗದ ಜನರು ದಶಕಗಳಿಂದ ಇದೇನೀರನ್ನು ಕುಡಿಯಲು ಉಪಯೋಗಿಸುತ್ತಿದ್ದಾರೆ. ಇಂತಹ ನೀರಿನಲ್ಲಿ ವಿಷಪೂರಿತ ರಾಸಾಯನಿಕವಸ್ತುಗಳು ಕರಗಿರುತ್ತವೆ. ಇಂಥ ನೀರುಸೇವಿಸಿದರೆ ದೇಹದ ಆರೋಗ್ಯ ಹದಗೆಟ್ಟು ನಾನಾ ದುಷ್ಪರಿಣಾಮಗಳಾಗಿ ಅನೇಕ ಕಾಯಿಲೆಗಳುಬರುತ್ತವೆ. ಅವುಗಳಲ್ಲಿ ಪ್ಲೋರೋಸಿಸ್‌ ಕಾಯಿಲೆಯೂ ಒಂದಾಗಿದೆ.

ಇನ್ನು ಹರಿಹರ ತಾಲೂಕಿನಲ್ಲಿ ಹೆಚ್ಚು ಜನರುತುಂಗಭದ್ರಾ ನೀರು ಸೇವನೆ ಮಾಡುತ್ತಾರೆ. ನದಿನೀರು ಫ್ಲೋರೈಡ್‌ ರಹಿತವಾಗಿದ್ದರೂ ಈ ಭಾಗದಲ್ಲಿ ರೈತರು ಭತ್ತದ ಕೃಷಿಯಲ್ಲಿ ಬಳಸುವ ರಸಗೊಬ್ಬರಹಾಗೂ ಕೀಟನಾಶಕಗಳ ಕಾರಣದಿಂದ ಮತ್ತು ಕೆಲ ಕಾರ್ಖಾನೆಗಳ ತ್ಯಾಜ್ಯ ನದಿಗೆ ಬಿಡುವುದರಿಂದನೀರು ವಿಷಪೂರಿತವಾಗಿ ಈ ಭಾಗದಹೆಚ್ಚು ಜನರಲ್ಲಿ ಫ್ಲೋರೋಸಿಸ್‌ ಕಾಯಿಲೆ ಕಂಡು ಬಂದಿದೆ ಎಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯವಾಗಿದೆ.

261 ಜನರಲ್ಲಿ ಫ್ಲೋರೋಸಿಸ್‌: ಆರೋಗ್ಯಇಲಾಖೆಯು ರಾಷ್ಟ್ರೀಯ ಫ್ಲೋರೋಸಿಸ್‌ ತಡೆಹಾಗೂ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಫ್ಲೋರೋಸಿಸ್‌ ತಪಾಸಣಾ ಶಿಬಿರಗಳನ್ನು ನಡೆಸಿದಾಗ 261 ಮೂಳೆ ಫ್ಲೋರೋಸಿಸ್‌ಪೀಡಿತರು ಕಂಡು ಬಂದಿದ್ದು, ತಪಾಸಣೆ ಮಾಡಿಸಿಕೊಳ್ಳದೇ ಲೆಕ್ಕಕ್ಕೆ ಸಿಗದವರ ಸಂಖ್ಯೆ ಸಾವಿರಾರು ಇರಬಹುದು ಎಂದು ಅಂದಾಜಿಸಲಾಗಿದೆ. ಹರಿಹರ ತಾಲೂಕಿನಲ್ಲಿ 77 ಜನರಲ್ಲಿ, ಹೊನ್ನಾಳಿ ತಾಲೂಕಿನಲ್ಲಿ 74 ಜನರಲ್ಲಿ , ಚನ್ನಗಿರಿ ತಾಲೂಕಿನಲ್ಲಿ 52 ಜನರಲ್ಲಿ, ಜಗಳೂರು ತಾಲೂಕಿನ 25 ಜನರಲ್ಲಿ ಹಾಗೂ ದಾವಣಗೆರೆ ತಾಲೂಕಿನಲ್ಲಿ 33 ಜನರಲ್ಲಿ ಮೂಳೆ ಫ್ಲೋರೋಸಿಸ್‌ ಕಾಯಿಲೆ ಪತ್ತೆಯಾಗಿದೆ.

ಹರಿಹರ ತಾಲೂಕಿನ ಕೆ.ಬೇವಿನಹಳ್ಳಿಯಲ್ಲಿ 14, ಬೆಳ್ಳೂಡಿಯಲ್ಲಿ 34, ಉಕ್ಕಡಗಾತ್ರಿಯಲ್ಲಿ 24, ಬಿಳಸನೂರಿನಲ್ಲಿ ಐವರಲ್ಲಿ ಮೂಳೆ ಫ್ಲೋರೋಸಿಸ್‌ ಕಂಡು ಬಂದಿದೆ. ಹೊನ್ನಾಳಿ ತಾಲೂಕಿನ ಅರಭಗಟ್ಟದಲ್ಲಿ 44, ಗೋವಿನಕೋವಿಯಲ್ಲಿ 14,ಸಾಸ್ವೆಹಳ್ಳಿಯಲ್ಲಿ ನಾಲ್ಕು, ಕತ್ತಿಗೆಯಲ್ಲಿ 12 ಜನರಲ್ಲಿ ಮೂಳೆ ಫ್ಲೋರೋಸಿಸ್‌ ಇರುವುದು ಗೊತ್ತಾಗಿದೆ. ಚನ್ನಗಿರಿ ತಾಲೂಕಿನ ಮಾವಿನಕಟ್ಟೆಯಲ್ಲಿ 10, ಕಗತೂರಿನಲ್ಲಿ 12, ಬಸವಾಪಟ್ಟಣದಲ್ಲಿ 19 ಹಾಗೂ ತಾವರೆಕೆರೆಯಲ್ಲಿ 11 ಜನರಲ್ಲಿ ಮೂಳೆ ಫ್ಲೋರೋಸಿಸ್‌ ಇರುವುದು ಖಚಿತಪಟ್ಟಿದೆ. ಜಗಳೂರು ತಾಲೂಕಿನ ಹಾಲೆಕಲ್‌ನಲ್ಲಿ ಏಳು, ಬಿದರಕೆರೆಯಲ್ಲಿ 12, ಕಲ್ಲೇದೇವರಪುರದಲ್ಲಿ ಐದು, ಸೊಕ್ಕೆಯಲ್ಲಿ ಒಂದುಹಾಗೂ ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿ ಆರು, ಕಕ್ಕರಗೊಳ್ಳದಲ್ಲಿ 15, ಅಣಜಿಯಲ್ಲಿ ಐದು, ಆನಗೋಡಿನಲ್ಲಿ ಏಳು ಜನರಲ್ಲಿ ಫ್ಲೋರೋಸಿಸ್‌ ಕಂಡು ಬಂದಿದ್ದು, ಇವರಿಗೆಲ್ಲ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಪರಿಕರ, ವಿಟಮಿನ್‌-ಸಿ ಮತ್ತು ಜಿಂಕ್‌, ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ3 ಮಾತ್ರೆಗಳನ್ನು ವಿತರಿಸಲಾಗಿದೆ.

ಒಟ್ಟಾರೆ ಫ್ಲೋರೈಡ್‌ಯುಕ್ತ ನೀರಿನ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯದ 18 ಜಿಲ್ಲೆಗಳಲ್ಲಿ ದಾವಣಗೆರೆ ಜಿಲ್ಲೆಯೂ ಒಂದಾಗಿದ್ದು, ಜಿಲ್ಲೆಯಲ್ಲಿ ಎಲ್ಲೆಲ್ಲೆ ಫ್ಲೊರೈಡ್‌ ಹೆಚ್ಚಿರುವ ನೀರು ಜನರು ಕುಡಿಯುತ್ತಿದ್ದಾರೋ ಅಲ್ಲೆಲ್ಲ ಜಿಲ್ಲಾಡಳಿತ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮೂಲಕ ಜನರನ್ನು ಆರೋಗ್ಯ ಕಾಪಾಡಬೇಕಾಗಿದೆ.

ಏನಿದು ಫ್ಲೋರೋಸಿಸ್‌? : ಭೂಮಂಡಲದಲ್ಲಿ ನೀರು ನಾನಾ ಮೂಲಗಳಿಂದ ಅಂದರೆ ಕೊಳವೆ ಬಾವಿ, ಹಳ್ಳ, ಕೊಳ್ಳ, ಕೆರೆ,ಬಾವಿ, ನದಿ, ಸಮುದ್ರದಿಂದ ಲಭ್ಯವಿದೆ. ಹೀಗೆ ನಾನಾ ಮೂಲಗಳಿಂದ ಲಭ್ಯವಿರುವ ನೀರಿನಲ್ಲಿ ಫ್ಲೋರೈಡ್‌,ಆರ್ಸನಿಕ್‌, ನೈಟ್ರೇಟ್‌, ಕ್ಲೋರೈಡ್‌ಹಾಗೂ ಐರನ್‌ನಂಥ ನಾನಾ ರೀತಿಯ ರಾಸಾಯನಿಕ ವಸ್ತುಗಳು ಕರಗಿರುತ್ತವೆ. ದಿನ ನಿತ್ಯ ಅವಶ್ಯಕವಿರುವ ನೀರಿನಲ್ಲಿ ಈ ರೀತಿಯ ರಾಸಾಯನಿಕ ಪದಾರ್ಥಗಳುಪ್ರತಿದಿನ ನಮ್ಮ ದೇಹಕ್ಕೆ ನಿಗದಿತ ಪ್ರಮಾಣದಲ್ಲಿಅವಶ್ಯಕವಿರುತ್ತದೆ. ಇದು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದರೆ ಕಾಯಿಲೆಗಳು ಬರುತ್ತವೆ. ಅದೇ ರೀತಿ ಕುಡಿಯುವ ನೀರಲ್ಲಿ ಫ್ಲೊರೈಡ್‌ ಅಂಶ ಹೆಚ್ಚಾದರೆ ಪ್ಲೋರೋಸಿಸ್‌ ಕಾಯಿಲೆ ಬರುತ್ತದೆ. ಇದರಿಂದ ದೇಹದ ಅನೇಕ ಭಾಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಕುಡಿಯುವ ನೀರಿನಿಂದಹೆಚ್ಚಾಗಿ ಈ ಕಾಯಿಲೆ ಬಂದರೂ, ಒಂದೇರೀತಿಯ ಕೆಲ ಆಹಾರ, ಕೆಲವು ಔಷಧಿಗಳ ಸೇವನೆ ಹಾಗೂ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು, ತ್ಯಾಜ್ಯ ಮಿಶ್ರಿತ ನೀರಿನಿಂದಲೂ ಫ್ಲೊರೈಡ್‌ ದೇಹದೊಳಗೆ ಪ್ರವೇಶಿಸುತ್ತದೆ. ಫ್ಲೋರೋಸಿಸ್‌ ಹಲ್ಲು, ಎಲುಬಿನ ಹಂದರ, ಕೀಲುಗಳಿಗೆ ಹಾನಿ ಹಾಗೂ ನೋವು ಉಂಟು ಮಾಡುತ್ತದೆ. ಬಾವಿಗಳು ಅಥವಾ ಕೈಪಂಪುಗಳ ನೀರು ಕುಡಿಯುವರು ಈ ಕಾಯಿಲೆಗೆ ತುತ್ತಾಗುವ ಸಂಭವ ಹೆಚ್ಚಾಗಿದೆ.

ಶುದ್ಧ ನೀರು ಕುಡಿಯಿರಿ : ಹೆಚ್ಚು ಫ್ಲೋರೈಡ್‌ ಇರುವ ನೀರು ಮತ್ತು ಆಹಾರ ಸೇವನೆಯಿಂದ ಫ್ಲೋರೋಸಿಸ್‌ ಬರುತ್ತದೆ. ಫ್ಲೋರೋಸಿಸ್‌ ತಡೆಗಟ್ಟಲು ಫ್ಲೋರೈಡ್‌ ಅಂಶ ಕಡಿಮೆ ಇರುವ ಅಂದರೆ ಒಂದು ಪಿಪಿಎಂಗಿಂತ ಕಡಿಮೆ ಇರುವ ಶುದ್ಧ ಕುಡಿಯುವ ನೀರು ಹಾಗೂ ಹಾಲು, ಬೆಲ್ಲ, ಹಸಿರು ಸೊಪ್ಪು, ನುಗ್ಗೆಕಾಯಿ, ಕಾಳುಗಳು, ಹಸಿರು ತರಕಾರಿ, ಹಣ್ಣುಗಳು, ಸೀಬೆ, ನೆಲ್ಲಿಕಾಯಿ, ನಿಂಬೆ, ಟೊಮ್ಯಾಟೊ, ಕ್ಯಾರೆಟ್‌, ಕಿತ್ತಳೆ, ಮೋಸಂಬಿ, ಬೆಳ್ಳುಳ್ಳಿ,ಗೆಣಸು, ಮೀನು ಮೊಟ್ಟೆ ಮಾಂಸ ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಬಳಸಬೇಕು. – ಡಾ.ಮೀನಾಕ್ಷಿ, ಆರ್‌ಸಿಎಚ್‌ ಅಧಿಕಾರಿ, ದಾವಣಗೆರೆ.

ಅರಿವು ಕಾರ್ಯಕ್ರಮ :  ಜಿಲ್ಲೆಯಲ್ಲಿ ಫ್ಲೋರೋಸಿಸ್‌ ಕಾಯಿಲೆ ಹೆಚ್ಚಾಗಿದ್ದು, ಶಾಲಾ ಕಾಲೇಜುಗಳಲ್ಲಿ ಅರಿವುಮೂಡಿಸುವ ಮೂಲಕ ಫ್ಲೋರೋಸಿಸ್‌ನಿಂದ ದೂರವಿರುವಂತೆಹಾಗೂ ಎಲ್ಲ ವಯೋಮಾನದವರಲ್ಲೂಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಹರಿಹರ ಭಾಗದಲ್ಲಿ ಕೃಷಿ ಇಲಾಖೆಯಿಂದಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕಹೆಚ್ಚು ಬಳಸದಂತೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.  -ಪದ್ಮಾ ಬಸವಂತಪ್ಪ, ಸಿಇಒ, ಜಿಪಂ

 

-ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.