ಹರಿಹರ ನಗರ ಠಾಣೆ ಕಟ್ಟಡಕ್ಕೆ ಎಸ್ಪಿ ಸ್ಥಳ ಪರಿಶೀಲನೆ
Team Udayavani, Jan 28, 2019, 7:05 AM IST
ಹರಿಹರ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಭಾನುವಾರ ನಗರದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿದರು.
ಸಿಪಿಐ ಕಚೇರಿ ಆವರಣದಲ್ಲಿದ್ದ ನಗರ ಪೊಲೀಸ್ ಠಾಣೆ ಕಟ್ಟಡ ಶಿಥಿಲ ಗೊಂಡಿರುವುದರಿಂದ ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಆಗಿ ನಿರ್ಮಾಣ ಏಜೆನ್ಸಿ ಸಹ ಫಿಕ್ಸ್ ಆಗಿದೆ. ಆದರೆ ಅಲ್ಲಿ ಠಾಣೆ ನಿರ್ಮಿಸಿದರೆ ಸಿಬ್ಬಂದಿ ವಾಹನ, ಜಪ್ತು ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶದ ಕೊರತೆ ಇದೆ ಎಂಬ ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ದಾವಣಗೆರೆ ಪಾಲಿಕೆ ಹಳೆ ನೀರು ಸರಬರಾಜು ಕೇಂದ್ರ ಹಾಗೂ ಹರಪನಹಳ್ಳಿ ರಸ್ತೆ ಹಳೆ ಜೆಎಂಎಫ್ಸಿ ನ್ಯಾಯಾಲಯದ ಆವರಣವನ್ನು ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಎಸ್ಪಿ ಮಾತನಾಡಿ, ಪಾಲಿಕೆ ನೀರು ಸರಬರಾಜು ಕೇಂದ್ರದ ಜಾಗ ನಗರದಿಂದ ದೂರವಾಗುತ್ತದೆ. ಗಾಂಧಿ ವೃತ್ತಕ್ಕೆ ಹೊಂದಿಕೊಂಡಿರುವ ಹಳೆ ಜೆಎಂಎಫ್ಸಿ ಕೋರ್ಟ್ ಆವರಣ ನಗರದ ಹೃದಯಭಾಗದಲ್ಲಿದೆ. ಪೊಲೀಸ್ ಠಾಣೆ ಇಲ್ಲಿದ್ದರೆ ನೊಂದವರ ನೆರವಿಗೆ ಆದಷ್ಟು ಶೀಘ್ರ ಧಾವಿಸಲು ಅನುಕೂಲವಾಗುತ್ತದೆ. ನಗರಸಭೆಗೆ, ಶಾಸಕರಿಗೆ ಈ ಜಾಗವನ್ನು ಠಾಣೆಗೆ ನೀಡಲು ಕೋರಲಾಗುವುದು ಎಂದರು.
ಸಿಪಿಐ ಐ.ಎಸ್. ಗುರುನಾಥ್ ಮಾತನಾಡಿ, ಸಿಪಿಐ ಕಚೇರಿ ಆವರಣದಲ್ಲಿ ಠಾಣೆ ನಿರ್ಮಿಸಿದರೆ ಮಿನಿ ವಿಧಾನಸೌಧದ ಸ್ಥಿತಿ ಬರುತ್ತದೆ. ಅಲ್ಲಿ ಪಾರ್ಕಿಂಗ್ಗೆ ಜಾಗವಿಲ್ಲದೆ ಸಿಬ್ಬಂದಿ ಹಾಗೂ ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆ ಮೇಲೆ ನಿಲ್ಲಿಸುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ.
ತರಾತುರಿಯಲ್ಲಿ ಠಾಣೆ ನಿರ್ಮಿಸಿದರೆ ಕೆಲವೇ ವರ್ಷದಲ್ಲಿ ಹೊಸದಾದ ವಿಶಾಲ ಜಾಗ ಹುಡುಕಿ ಮತ್ತೆ ಅನುದಾನ ತಂದು ಕಟ್ಟಡ ನಿರ್ಮಿಸಬೇಕಾಗುತ್ತದೆ. ಸ್ವಲ್ಪ ತಡವಾದರೂ ಆದಷ್ಟು ಬೇಗ ಸೂಕ್ತ ಸ್ಥಳ ಹುಡುಕಿ ಠಾಣೆ ನಿರ್ಮಿಸುವುದು ಒಳಿತು ಎಂದರು. ಪಿಎಸ್ಐಗಳಾದ ಪ್ರಭು ಕೆಳಗಿನಮನೆ, ರವಿಕುಮಾರ್ ಡಿ. ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ
MUST WATCH
ಹೊಸ ಸೇರ್ಪಡೆ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…