ಪಿಂಚಣಿಗಾಗಿ ಬೃಹತ್ ಪ್ರತಿಭಟನೆ
ಮುಳಸಾವಳಗಿ ಅಂಚೆ ಸಿಬ್ಬಂದಿ ವಿರುದ್ಧ ಪಿಂಚಣಿ ಫಲಾನುಭವಿಗಳ ಆಕ್ರೋಶ
Team Udayavani, Jul 13, 2019, 4:10 PM IST
ದೇವರಹಿಪ್ಪರಗಿ: ಪಿಂಚಣಿ ವಿಳಂಬ ಹಾಗೂ ಶಿವಣಗಿ ಅಂಚೆ ಸಿಬ್ಬಂದಿ ಕಾರ್ಯವೈಖರಿ ವಿರುದ್ಧ ಮುಳಸಾವಳಗಿ ಗ್ರಾಮದ ಪಿಂಚಣಿ ಫಲಾನುಭವಿಗಳು ಉಪ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ದೇವರಹಿಪ್ಪರಗಿ: ವೃದ್ಧಾಪ್ಯ, ವಿಧವಾ, ಅಂಗವಿಕಲರ ಪಿಂಚಣಿಯಂತ ಸರ್ಕಾರದ ಸೌಲಭ್ಯಗಳು ಸರಿಯಾಗಿ ಕೈ ಸೇರದೆ ವಿಳಂಬವಾಗುತ್ತಿರುವುದು ಹಾಗೂ ಹಣ ಪಡೆದು ಪಿಂಚಣಿ ನೀಡುತ್ತಿರುವ ಮುಳಸಾವಳಗಿ ಅಂಚೆ ಸಿಬ್ಬಂದಿ ವಿರುದ್ಧ ಫಲಾನುಭವಿಗಳು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ್ದ ನೂರಾರು ಮಹಿಳೆಯರು ಹಾಗೂ ವೃದ್ಧರು, ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಕಳೆದ 3-4 ತಿಂಗಳುಗಳಿಂದ ಪಿಂಚಣಿ ಸೌಲಭ್ಯಗಳು ಫಲಾನುಭವಿಗಳಿಗೆ ಸರಿಯಾಗಿ ಬರುತ್ತಿಲ್ಲ. ಬಂದ ಹಣವನ್ನು ನೀಡಬೇಕಾದರೆ ಅಂಚೆ ಬಟವಣೆದಾರ 50 ರಿಂದ 100 ರೂ. ಪಡೆಯುತ್ತಾರೆ. ಹಣ ನೀಡದಿದ್ದರೆ ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದು ಹೇಳಿ ಕಳಿಸುತ್ತಾರೆ ಎಂದು ಆರೋಪಿಸಿ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ವಿಷಯ ತಿಳಿದ ಪಿಎಸೈ ಎಂ.ಬಿ. ಬಿರಾದಾರ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಕುರಿತಂತೆ ಭರವಸೆ ನೀಡಿದರು. ನಂತರ ಪ್ರತಿಭಟನೆ ನಿರತ ಮಹಿಳೆಯರು ಉಪ ತಹಶೀಲ್ದಾರ್ ಇಂದಿರಾ ಬಳಗಾನೂರ ಅವರಿಗೆ ಮನವಿ ಸಲ್ಲಿಸಿ, ತಾವೇ ಏನಾದರೂ ಮಾಡಿ ತಿಂಗಳಿಗೆ ಸರಿಯಾಗಿ ಪಿಂಚಣಿ ಸಿಗುವಂತೆ ಮಾಡಬೇಕೆಂದು ವಿನಂತಿಸಿದರು.
ಮನವಿಗೆ ಸ್ಪಂದಿಸಿದ ಉಪ ತಹಶೀಲ್ದಾರ್ ಕೂಡಲೇ ಈ ಬಗ್ಗೆ ಮೇಲಧಿ ಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಅರವಿಂದ ನಾಯ್ಕೋಡಿ, ಅಂದಾನಯ್ಯ ಮಠಪತಿ, ನೀಲವ್ವ ಪೂಜಾರಿ, ತಾರಾಬಾಯಿ ಬಿರಾದಾರ, ದಾನಮ್ಮ ಬಿರಾದಾರ, ನಿಂಗವ್ವ ಸೊನ್ನಳ್ಳಿ, ಧಮ್ಮಿಬಾಯಿ ರಾಠೊಡ, ಕಸ್ತೂರಿಬಾಯಿ ದೊಡಮನಿ, ಬೋೕರಮ್ಮ ವಾಲೀಕಾರ, ಕವಿತಾಬಾಯಿ ರಾಠೊಡ, ರುಕ್ಮವ್ವ ಕಂಬಾರ, ಸಾಬವ್ವ ಗೊಬ್ಬೂರ, ಬೋರಮ್ಮ ದ್ಯಾಬೇರಿ, ಲೋಕವ್ವ ತಳವಾರ, ಖತೀಜಾ ಜಮಖಂಡಿ, ಶಿವಮ್ಮ ಪತ್ರಿಮಠ, ಬಸನಿಂಗವ್ವ ನಾಯ್ಕೋಡಿ, ಕಸ್ತೂರಿಬಾಯಿ ಗಳೇದ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
MUST WATCH
ಹೊಸ ಸೇರ್ಪಡೆ
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು