ಪರಿಶ್ರಮದಿಂದ ಯಶ ಸಾಧಿಸಲು ಪ್ರಕಾಶ ಸಲಹೆ
Team Udayavani, May 20, 2018, 5:06 PM IST
ಬೆಳಗಾವಿ: ನಗರದ ಎಸ್.ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಅಂತಿಮ ವರ್ಷದ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಹಿರಾಬಾದ ಎಂ.ಜಿ.ಅಟೊಮೊಬೆ„ಲ್ಸ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ ಕಲಬಾಗ ಮಾತನಾಡಿ, ಇಂದಿನ ಯುವ ಜನತೆ ತಾಂತ್ರಿಕತೆಯ ದಾಸರಾಗದೆ ಪರಿಶ್ರಮದಿಂದ ಯಶಸ್ವಿಯಾಗಬೇಕು ಎಂದು ಹೇಳಿದರು. ದೃಢ ನಿರ್ಧಾರ, ಅರ್ಪಣಾ ಮನೋಭಾವ ಮತ್ತು ಮತ್ತು ಆತ್ಮವಿಶ್ವಾಸ ಹೊಂದಿದ ವಿದ್ಯಾರ್ಥಿಗಳು ಮಾತ್ರ ಜೀವನದಲ್ಲಿ ಸಫಲರಾಗಬಲ್ಲರು. ವಿದ್ಯಾರ್ಥಿ ಜೀವನವು ಕೇವಲ ಮನರಂಜನೆಗೆ ಸೀಮಿತವಾಗದೇ ವೃತ್ತಿಪರತೆಗೆ ಬದ್ಧರಾಗಿರಬೇಕು ಎಂದು ಅವರು ಕಿವಿಮಾತು ಹೇಳಿದರು.
ಸ್ಯಾಂಡ್ಬಾಕ್ಸ್ ಸ್ಟಾರ್ಟಅಪ್, ದೇಶಪಾಂಡೆ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಂ. ಪಾಟೀಲ ಮಾತನಾಡಿ, ಸೌಕರ್ಯ ವಲಯದಿಂದ ಹೊರಬಂದು ಯೊಚಿಸಿದಾಗ ಮಾತ್ರ ಯಶಸ್ಸು ಸಾಧಿಸಬಹುದು. ತಮ್ಮ ತಮ್ಮ ಕಾರ್ಯಕ್ಷೆತ್ರಗಳಲ್ಲಿ ಮೂಲಜ್ಞಾನದ ಪರಿಣಿತಿ ಹೊಂದುವುದು ಅವಶ್ಯಕವಾಗಿದೆ. ನಿಜವಾದ ಸಂತೋಷವು ಹಣ ಗಳಿಕೆಗಿಂತ ಸಮಾಜಕ್ಕೆ ಕೊಡುಗೆ ನೀಡುವುದರಲ್ಲಿ ಅಡಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಎಸ್.ಎಸ್. ಸಾಲಿಮಠ, ವಿದ್ಯಾರ್ಥಿಗಳಿಗೆ ಪಠ್ಯಜ್ಞಾನಕ್ಕಿಂತ ಪ್ರಾಯೊಗಿಕ ಜ್ಞಾನವು ಇಂದಿನ ಅವಶ್ಯಕತೆಯಾಗಿದೆ. ವಿದ್ಯಾರ್ಥಿಗಳು ಕಲಿತ ವಿದ್ಯಾಲಯದೊಂದಿಗೆ ನಿಕಟ ಸಂಪರ್ಕದಲ್ಲಿರಬೇಕು ಎಂದರು.
ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ. ಎಸ್.ಜಿ. ಸಂಬರಗಿಮಠ ಉಪಸ್ಥಿತರಿದ್ದರು.ಸಿವಿಲ್ ವಿಭಾಗದ ಮುಖ್ಯಸ್ಥ ಡಾ|ಬಿ.ಆರ್. ಪಟಗುಂಡಿ ಸ್ವಾಗತಿಸಿದರು. ಯಾಂತ್ರಿಕ ವಿಭಾಗದ ಮುಖ್ಯಸ್ಥ ಡಾ| ಯು. ಸಿ. ಕಪಾಳೆ ವಾರ್ಷಿಕ ವರದಿ ಮಂಡಿಸಿದರು. ಡಾ| ಜಿ. ಆರ್. ಉಡುಪಿ ಪರಿಚಯಿಸಿದರು. ಪ್ರೊ| ಜಿ.ಬಿ. ದೇಶಪಾಂಡೆ ವಂದಿಸಿದರು. ಪ್ರೊ| ಅಕ್ಷತಾ ಮುಳುಗುಂದ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ
Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್ ಸಲ್ಲಿಸಿಲ್ಲ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ