ಇಂದಿನಿಂದ ಎಪಿಎಂಸಿ ವಹಿವಾಟು ಸ್ಥಗಿತ
Team Udayavani, Aug 5, 2017, 6:10 AM IST
ಹುಬ್ಬಳ್ಳಿ: ಇ-ಪಾವತಿ ರದ್ದುಗೊಳಿಸಬೇಕು. ರೇಮ್ಸ್ ಅವಶ್ಯಕತೆ ಇಲ್ಲ ಹಾಗೂ ಒಂದು ದೇಶ ಒಂದು ಸೆಸ್ ಜಾರಿಗೊಳಿಸಬೇಕೆಂಬ ಮೂರು ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಎಪಿಎಂಸಿ ವರ್ತಕರು ಆ.5ರಿಂದ ರಾಜ್ಯಾದ್ಯಂತ ಎಪಿಎಂಸಿ ವಹಿವಾಟು ಸಂಪೂರ್ಣ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿವರೆಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ಇಲ್ಲಿನ ಜೆ.ಸಿ.ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)ಯ ಸಭಾಭವನದಲ್ಲಿ ಶುಕ್ರವಾರ ನಡೆದ ವರ್ತಕರ ಮುಂದಿನ ಹೋರಾಟದ ರೂಪುರೇಷೆಗಳ ಕುರಿತ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 105ಕ್ಕೂ ಅಧಿಕ ವ್ಯಾಪಾರಸ್ಥರ ಸಂಘಗಳ ಮುಖಂಡರು, ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.